Siddaramaiah Vs Kumaraswamy: ಮೈತ್ರಿಕೂಟ ವ್ಯರ್ಥ ಕಸರತ್ತು ಅಂತ ಟೀಕಿಸಿದ ಕುಮಾರಸ್ವಾಮಿಗೆ ಸಿದ್ದರಾಮಯ್ಯ ಮಾರ್ಮಿಕ ಪ್ರತಿಕ್ರಿಯೆ ನೀಡಿದರು!

ಅರುಣ್​ ಕುಮಾರ್​ ಬೆಳ್ಳಿ

Updated on: Jul 17, 2023 | 5:28 PM

ಆಗ 21 ಪಕ್ಷಗಳ ನಾಯಕರನ್ನು ಬೆಂಗಳೂರಿಗೆ ಕರೆದಿದ್ದು ಯಾರು ಅಂತ ಸಿದ್ದರಾಮಯ್ಯ ನಗುತ್ತಾ ಪ್ರಶ್ನಿಸಿದಾಗ ಮಾಧ್ಯಮದವರು ಕುಮಾರಸ್ವಾಮಿಯವರೇ ಅಂತ ಹೇಳಿದರು.

ಬೆಂಗಳೂರು: ನಗರದ ಖಾಸಗಿ ಹೋಟೆಲೊಂದರಲ್ಲಿ ಇವತ್ತು ಮತ್ತು ನಾಳೆ ನಡೆಯುವ 24 ವಿರೋಧ ಪಕ್ಷಗಳ ಮಹಾ ಮೈತ್ರಿ ಸಭೆಯನ್ನು ಜೆಡಿಎಸ್ ನಾಯಕ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಒಂದೇ ಸಮನೆ ಟೀಕಿಸುತ್ತಿದ್ದಾರೆ. ಇಂದು ಬೆಳಗ್ಗೆ ಸುದ್ದಿಗೋಷ್ಟಿಯೊಂದನ್ನು ನಡೆಸಿ ಅವರು ಮಾತಾಡಿದಾಗ, ಮಹಾಮೈತ್ರಿ, ವಿರೋಧ ಪಕ್ಷಗಳ ಒಕ್ಕೂಟ (grand Alliance) ಎಲ್ಲ ಒಂದು ವ್ಯರ್ಥ ಕಸರತ್ತು, ಈ ಹಿಂದೆಯೂ 21 ಪಾರ್ಟಿಗಳ ನಾಯಕರು ಬೆಂಗಳೂರಲ್ಲಿ ಒಟ್ಟಿಗೆ ಸೇರಿ ಕೈಯೆತ್ತಿದರೇ ಹೊರತು ಕೈ ಹಿಡಿಯಲಿಲ್ಲ ಅಂತ ಹೇಳಿದ್ದರು. ಅವರು ಹೇಳಿದ್ದನ್ನು ಮಾಧ್ಯಮ ಪ್ರತಿನಿಧಿಗಳು ಸಿದ್ದರಾಮಯ್ಯನವರಿಗೆ (Siddaramaiah) ತಿಳಿಸಿದಾಗ ಮುಖ್ಯಮಂತ್ರಿ ಲೇವಡಿ ಮಾಡಿದರು. ಆಗ 21 ಪಕ್ಷಗಳ ನಾಯಕರನ್ನು ಬೆಂಗಳೂರಿಗೆ ಕರೆದಿದ್ದು ಯಾರು ಅಂತ ನಗುತ್ತಾ ಪ್ರಶ್ನಿಸಿದಾಗ ಮಾಧ್ಯಮದವರು ಕುಮಾರಸ್ವಾಮಿಯವರೇ ಅಂತ ಹೇಳಿದರು. ಹಾಗಾದರೆ ಮೈತ್ರಿಯನ್ನು ಅವರು ಯಾಕೆ ಮುಂದುವರಿಸಿಕೊಂಡು ಹೋಗಲಿಲ್ಲ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.