Daily Devotional: ಕೋಪದಲ್ಲಿದ್ದಾಗ ಮನುಷ್ಯ ಈ ಮೂರು ನಿರ್ಧಾರಗಳನ್ನು ತೆಗೆದುಕೊಳ್ಳಬಾರದು!
ಭಾರತದ ನೀತಿಶಾಸ್ತ್ರದಲ್ಲಿ, ಅನೇಕ ಸಮಸ್ಯೆಗಳಿಗೆ ಕೋಪವೇ ಮೂಲ ಕಾರಣ ಎಂದು ಹೇಳಲಾಗಿದೆ. ಲಕ್ಷ್ಮೀ ಕಟಾಕ್ಷವು ಸಹನೆ ಮತ್ತು ತಾಳ್ಮೆಯಲ್ಲಿ ನೆಲೆಯಾಗಿದೆ. ಕೋಪದಲ್ಲಿ ತೆಗೆದುಕೊಂಡ ಯಾವುದೇ ನಿರ್ಧಾರವು ಶುಭಕರವಾಗಿರುವುದಿಲ್ಲ. ವಿಶೇಷವಾಗಿ, ಮೂರು ನಿರ್ಧಾರಗಳನ್ನು ಕೋಪದಲ್ಲಿ ತೆಗೆದುಕೊಳ್ಳುವುದರಿಂದ ದೂರವಿರಬೇಕು. ಸದಾ ಹಸನ್ಮುಖಿಯಾಗಿರುವ ವ್ಯಕ್ತಿ ಯಶಸ್ಸು ಮತ್ತು ಶ್ರೇಯಸ್ಸನ್ನು ಪಡೆಯುತ್ತಾನೆ ಎಂದು ಬಸವರಾಜ ಗುರೂಜಿ ಹೇಳಿದ್ದಾರೆ.
ಬೆಂಗಳೂರು, ಫೆಬ್ರವರಿ 20: ಟಿವಿ9 ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಕೋಪದಲ್ಲಿದ್ದಾಗ ಮನುಷ್ಯ ಯಾವ ಮೂರು ನಿರ್ಧಾರಗಳನ್ನು ತೆಗೆದುಕೋಬಾರದು ಎಂದು ಡಾ. ಬಸವರಾಜ ಗುರೂಜಿ ವಿವರಿಸಿದ್ದಾರೆ. ಕೋಪವು ನಕಾರಾತ್ಮಕ ಶಕ್ತಿಯಾಗಿದ್ದು, ಅನೇಕ ದುರಂತಗಳಿಗೆ ಮತ್ತು ಅವಘಡಗಳಿಗೆ ಕಾರಣವಾಗುತ್ತದೆ. ಇದು ನಮ್ಮ ದೇಹ, ಆರೋಗ್ಯ ಮತ್ತು ಆಯಸ್ಸನ್ನು ಕುಗ್ಗಿಸಿ, ಧನಾತ್ಮಕ ಶಕ್ತಿಗಳನ್ನು ನಾಶಪಡಿಸುತ್ತದೆ. ಕೋಪದಿಂದಾಗಿ, ಶಿಕ್ಷಣದಲ್ಲಿ, ಕೆಲಸ ಕಾರ್ಯಗಳಲ್ಲಿ, ಮತ್ತು ಜೀವನ ನಿರ್ವಹಣೆಯಲ್ಲಿ ಯಶಸ್ಸು ಸಾಧಿಸುವುದು ಕಷ್ಟವಾಗುತ್ತದೆ.
ಭಾರತದ ನೀತಿಶಾಸ್ತ್ರದಲ್ಲಿ, ಅನೇಕ ಸಮಸ್ಯೆಗಳಿಗೆ ಕೋಪವೇ ಮೂಲ ಕಾರಣ ಎಂದು ಹೇಳಲಾಗಿದೆ. ಲಕ್ಷ್ಮೀ ಕಟಾಕ್ಷವು ಸಹನೆ ಮತ್ತು ತಾಳ್ಮೆಯಲ್ಲಿ ನೆಲೆಯಾಗಿದೆ. ಕೋಪದಲ್ಲಿ ತೆಗೆದುಕೊಂಡ ಯಾವುದೇ ನಿರ್ಧಾರವು ಶುಭಕರವಾಗಿರುವುದಿಲ್ಲ. ವಿಶೇಷವಾಗಿ, ಮೂರು ನಿರ್ಧಾರಗಳನ್ನು ಕೋಪದಲ್ಲಿ ತೆಗೆದುಕೊಳ್ಳುವುದರಿಂದ ದೂರವಿರಬೇಕು. ಸದಾ ಹಸನ್ಮುಖಿಯಾಗಿರುವ ವ್ಯಕ್ತಿ ಯಶಸ್ಸು ಮತ್ತು ಶ್ರೇಯಸ್ಸನ್ನು ಪಡೆಯುತ್ತಾನೆ ಎಂದು ಬಸವರಾಜ ಗುರೂಜಿ ಹೇಳಿದ್ದಾರೆ.

