AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿಎಂ ಸಿದ್ದರಾಮಯ್ಯ ಈಗ ಎಲ್ಲ ಪಕ್ಷಗಳ ಶಾಸಕರಿಗೆ ನೀಡುತ್ತಿರೋದು ಹೆಚ್ಚುವರಿ ಅನುದಾನ: ಬಸವರಾಜ ರಾಯರೆಡ್ಡಿ

ಸಿಎಂ ಸಿದ್ದರಾಮಯ್ಯ ಈಗ ಎಲ್ಲ ಪಕ್ಷಗಳ ಶಾಸಕರಿಗೆ ನೀಡುತ್ತಿರೋದು ಹೆಚ್ಚುವರಿ ಅನುದಾನ: ಬಸವರಾಜ ರಾಯರೆಡ್ಡಿ

ಅರುಣ್​ ಕುಮಾರ್​ ಬೆಳ್ಳಿ
|

Updated on: Jul 29, 2025 | 10:34 AM

Share

ಸಿದ್ದರಾಮಯ್ಯ ರಾಜ್ಯದ ಮುಖ್ಯಮಂತ್ರಿಯಾಗಿರುವ ಜೊತೆಗೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನೂ ಆಗಿದ್ದಾರೆ, ಹಾಗಾಗಿ ಅವರು ಪಕ್ಷದ ಎಲ್ಲ 138 ಶಾಸಕರೊಂದಿಗೆ ಪ್ರತ್ಯೇಕವಾಗಿ ಸಭೆ ನಡೆಸಲಿದ್ದಾರೆ ಎಂದು ಹೇಳಿದ ರಾಯರೆಡ್ಡಿ, ಕಾಂಗ್ರೆಸ್ ಶಾಸಕರಿಗೆ ಬಿಡುಗಡೆ ಮಾಡಿರುವ ₹50 ಕೋಟಿಯಲ್ಲಿ 37.5 ಕೋಟಿ ರೂ. ಅಭಿವೃದ್ಧಿ ಕೆಲಸಗಳಿಗಾಗಿ ಮತ್ತು ಉಳಿದ ₹12.5 ಕೋಟಿಯನ್ನು ಶಾಸಕರು ವಿವೇಚನೆ ತಕ್ಕಂತೆ ಬಳಸಬೇಕು ಎಂದರು.

ಬೆಂಗಳೂರು, ಜುಲೈ 29: ರಾಜ್ಯ ಸರ್ಕಾರದಲ್ಲಿ ಅನುದಾನದ ಕೊರತೆ ಇಲ್ಲ, 2025-26 ರ ಸಾಲಿನ ಅಯವ್ಯಯ ಪತ್ರ ಮಂಡಿಸುವಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿವೃದ್ಧಿ ಕಾಮಗಾರಿಗಳಿಗಾಗಿ (development works) ₹83,000 ಕೋಟಿಗಳನ್ನು ತೆಗೆದಿರಿಸಿದ್ದಾರೆ, ಈಗ ಶಾಸಕರಿಗೆ ನೀಡುತ್ತಿರೋದು ₹ 8,000 ಕೋಟಿಗಳ ಹೆಚ್ಚುವರಿ ಅನುದಾನ ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಹೇಳಿದರು. ನಮ್ಮ ವರದಿಗಾರನೊಂದಿಗೆ ಪ್ರತ್ಯೇಕವಾಗಿ ಮಾತಾಡಿರುವ ಅವರು ರಾಜ್ಯದ ಜಿಲ್ಲಾವಾರು ಕ್ಷೇತ್ರಗಳ ಶಾಸಕರ ಜೊತೆ ಇಂದು ಸಿಎಂ ಸಭೆ ನಡೆಸಿ ಆಯಾ ಕ್ಷೇತ್ರಗಳ ಕುಂದುಕೊರತೆಗಳನ್ನು ಆಲಿಸಲಿದ್ದಾರೆ ಎಂದು ರಾಯರೆಡ್ಡಿ ಹೇಳಿದರು. ಕಾಂಗ್ರೆಸ್ ಶಾಸಕರಿಗೆ ₹50 ಕೋಟಿ ಮತ್ತು ಕಾಂಗ್ರೆಸ್ಸೇತರ ಪಕ್ಷಗಳ ಶಾಸಕರಿಗೆ ₹25 ಕೋಟಿ ಅನುದಾನ ಬಿಡುಗಡೆ ಮಾಡುವಂತೆ ಸಿಎಂ ಸೂಚನೆ ನೀಡಲಿದ್ದಾರೆ ಎಂದು ಯಲಬುರ್ಗಾ ಶಾಸಕ ಹೇಳಿದರು.

ಇದನ್ನೂ ಓದಿ:  ಮುಂದಿನ 3-ವರ್ಷ ಅವಧಿಗೂ ಸಿದ್ದರಾಮಯ್ಯನೇ ಸಿಎಂ ಆಗಿ ಮುಂದುವರಿಯುತ್ತಾರೆ: ಬಸವರಾಜ ರಾಯರೆಡ್ಡಿ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ