ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಮೈಸೂರಿನ ಮೈಲಾರಿ ಹೊಟೇಲ್ಗೆ ಬಂದು ದೋಸೆ ತಿಂದಿದ್ದಾರೆ. ಸಾಮಾನ್ಯರಂತೆ ಎಲ್ಲರ ಜತೆಗೆ ಕೂತು ದೋಸೆ ತಿಂದಿದ್ದಾರೆ. ಸಿಎಂ ಸಿದ್ದರಾಮಯ್ಯ ಮೈಸೂರಿಗೆ ಬಂದಾಗಲೆಲ್ಲ ಮೈಲಾರಿ ಹೊಟೇಲ್ನಲ್ಲಿ ಬ್ರೇಕ್ಫಾಸ್ಟ್ ಮಾಡುತ್ತಾರೆ. ಸಿಎಂ ಸಿದ್ದರಾಮಯ್ಯ ಜತೆಗೆ ಅವರ ಬೆಂಗಲಿಗರು ಕೂಡ ಅವರಿಗೆ ಸಾಥ್ ನೀಡಿದರು. ಸಚಿವ ಚೆಲುವರಾಯಸ್ವಾಮಿ ಕೂಡ ಮೈಲಾರಿ ಹೊಟೇಲ್ನಲ್ಲಿ ತಿಂಡಿ ಮಾಡಿದ್ದಾರೆ. ತಿಂಡಿ ಸೇವಿಸಿ ಅಲ್ಲಿಂದ ಸಿಎಂ ಸಿದ್ದರಾಮಯ್ಯ ಕೆಎಸ್ಆರ್ ಡ್ಯಾಂಗೆ ಬಾಗಿನ ಅರ್ಪಿಸಲು ಹೋಗಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.