ಕಾಲ್ತುಳಿತ ನಡೆದು ಜನ ಸತ್ತಿದ್ದು ಮುಖ್ಯಮಂತ್ರಿಯವರಿಗೆ 6 ಗಂಟೆಗೆ ಗೊತ್ತಾಗಿದೆ: ಸತೀಶ್ ಜಾರಕಿಹೊಳಿ, ಸಚಿವ
ಕಾಲ್ತುಳಿತ ಘಟನೆಗೆ ಹೊಣೆ ಯಾರು, ತಪ್ಪಿತಸ್ಥರು ಯಾರು ಅಂತ ಗೊತ್ತಾಗಲು ಇನ್ನೂ 15 ದಿನ ಬೇಕಾಗುತ್ತದೆ. ಸರ್ಕಾರದ್ದೇ ತಪ್ಪು, ಅಧಿಕಾರಿಗಳನ್ನು ಬಲಿಪಶು ಮಾಡಲಾಗಿದೆ ಅಂತ ಈಗಲೇ ಹೇಳಲಾಗದು, ತನಿಖೆಗೆ ಆದೇಶ ನೀಡಲಾಗಿದೆ, ಸರ್ಕಾರ ಕೋರ್ಟ್ಗೂ ತಪ್ಪು ಯಾರದು ಅಂತ ತಿಳಿಸಬೇಕಿದೆ, ಹಾಗಾಗಿ ಎಲ್ಲರೂ ವರದಿಗಾಗಿ ಕಾಯದೆ ವಿಧಿಯಿಲ್ಲ ಎಂದು ಸಚಿವ ಜಾರಕಿಹೊಳಿ ಹೇಳಿದರು.
ಬೆಂಗಳೂರು, ಜೂನ್ 9: ತಮ್ಮ ಕಚೇರಿಯಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಲೋಕೋಪಯೋಗಿ ಖಾತೆ ಸಚಿವ ಸತೀಶ್ ಜಾರಕಿಹೊಳಿ ಅವರು, ಕಳೆದ ಬುಧವಾರದಂದು ಚಿನ್ನಸ್ವಾಮಿ ಸ್ಟೇಡಿಯಂ (Chinnaswamy Stadium) ಬಳಿ ಕಾಲ್ತುಳಿದ ಘಟನೆ ನಡೆದಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಗೊತ್ತೇ ಅಗಿಲ್ಲ ಎಂದು ಹೇಳಿದರು. ವಿಧಾನಸೌಧದ ಬಳಿ ಸತ್ಕಾರ ಸಮಾರಂಭದಲ್ಲಿ ಭಾಗಿಯಾಗ ನಂತರ ಅವರು ಬೇರೆ ಯಾವುದೋ ಸಮಾರಂಭದಲ್ಲಿ ಪಾಲ್ಗೊಳ್ಳಲು ತೆರಳಿದ್ದರು, 5.30 ಅಥವಾ 6ಗಂಟೆ ಸುಮಾರಿಗೆ ಅಧಿಕಾರಿಗಳು ಇಲ್ಲವೇ ಪೊಲೀಸರು ಅವರಿಗೆ ವಿಷಯ ತಿಳಿಸಿದ್ದಾರೆ, ಅವರು ಕೂಡಲೇ ಸಮಾರಂಭವನ್ನು ಬಿಟ್ಟು ಆಸ್ಪತ್ರೆಗೆ ಧಾವಿಸಿದ್ದಾರೆ ಎಂದು ಸತೀಶ್ ಜಾರಕಿಹೊಳಿ ಹೇಳಿದರು.
ಇದನ್ನೂ ಓದಿ: ಬೆಂಗಳೂರು ಕಾಲ್ತುಳಿತ: ಹೈಕೋರ್ಟ್ ಮೆಟ್ಟಿಲೇರಿದ ಡಿಎನ್ಎ ಎಂಟರ್ಟೈನ್ಮೆಂಟ್, ಸರ್ಕಾರದ ವಿರುದ್ಧ ಗಂಭೀರ ಆರೋಪ
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Loading...
Unable to load recommendations.
Follow Us