ಆ ಹುಡುಗಿ ಅಷ್ಟೊತ್ತಿಗೆ ಅಲ್ಲಿಗೆ ಏಕೆ ಹೋಗಿದ್ದಳೋ -ಮೈಸೂರು ಗ್ಯಾಂಗ್ ರೇಪ್ ಬಗ್ಗೆ ಮಂಜುಳಾ ಮಾನಸ ಉಡಾಫೆ ಮಾತು
Mysuru Gangrape: ಆಕೆ ಒಬ್ಬ ಎಂಬಿಎ ಸ್ಟೂಡೆಂಟ್ ಆಗಿದ್ದುಕೊಂಡು ಅಷ್ಟೊತ್ತರಲ್ಲಿ ಯಾಕೆ ಬಂದಿದ್ಳು ಅಂತ ನನಗೆ ಗೊತ್ತಿಲ್ಲ. ಅದು ತಪ್ಪು ಕೂಡಾ ಎಂದು ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ,ಕಾಂಗ್ರೆಸ್ ನಾಯಕಿ ಮಂಜುಳಾ ಮಾನಸ ಹೇಳಿದ್ದಾರೆ
ಮೈಸೂರು: ‘ಈ ಸಂದರ್ಭದಲ್ಲಿ ಆ ಹೆಣ್ಮಗಳಿಗೂ… ನನಗೆ ಅಸಹ್ಯ ಅನಿಸುತ್ತೆ ಎಂಬಿಎ ಸ್ಟೂಡೆಂಟ್ ಆಗಿದ್ದುಕೊಂಡು ಅಷ್ಟೊತ್ತರಲ್ಲಿ ಯಾಕೆ ಬಂದಿದ್ಳು ಅಂತ ನನಗೆ ಗೊತ್ತಿಲ್ಲ. ಅದು ತಪ್ಪು ಕೂಡಾ ಆದರೂ ಈ ತರ ಒಂದು ಹೀನ ಕೃತ್ಯ ಆಗಿರುವ ಸಂದರ್ಭದಲ್ಲಿ ಗ್ಯಾಂಗ್ ರೇಪ್ ಆಗಿರುವ ಸಂದರ್ಭದಲ್ಲಿ ನಿನ್ನೆ ಆಗಿರುವ ಘಟನೆಗೆ ಸಂಬಂಧಪಟ್ಟಂತೆ ಬೆಳಗ್ಗೆ ಕಂಪ್ಲೇಂಟ್ ಆದರೂ ಈಗಾಗಲೇ ಮೂರು ಗಂಟೆ ಆಗಿದೆ. ಈಗ ಸ್ಪಾಟ್ ಗೆ ಪೊಲೀಸ್ ನವರು ಬಂದಿದ್ದಾರೆ ಅಂದರೆ ಗೊತ್ತಿಲ್ಲ ಅದರ ಹಿನ್ನಲೆ ಏನು ಅಂತ. – ಮೈಸೂರು ಗ್ಯಾಂಗ್ ರೇಪ್ ಬಗ್ಗೆ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ,ಕಾಂಗ್ರೆಸ್ ನಾಯಕಿ ಮಂಜುಳಾ ಮಾನಸ ಹೇಳಿದ ಮಾತುಗಳಿವು.
ಗ್ಯಾಂಗ್ ರೇಪ್ ನಡೆದ ಸ್ಥಳಕ್ಕೆ ಮಂಜುಳಾ ಮಾನಸ ಭೇಟಿ ನೀಡಿದ ನಂತರ ಈ ಮಾತುಗಳನ್ನಾಡಿದ್ದಾರೆ.
Published On - 11:34 am, Fri, 27 August 21