ಬಿಜೆಪಿಗರದ್ದು ಡೋಂಗಿ ಹಿಂದುತ್ವ: ಕಾಂಗ್ರೆಸ್​ ಶಾಸಕ ಪ್ರದೀಪ್​ ಈಶ್ವರ್​ ಆರೋಪ

Updated on: Oct 21, 2025 | 12:49 PM

ಬಿಜೆಪಿ ನಾಯಕರ ವಿರುದ್ಧ ಶಾಸಕ ಪ್ರದೀಪ್​ ಈಶ್ವರ್​ ವಾಗ್ದಾಳಿ ನಡೆಸಿದ್ದಾರೆ. ನೀವು ಜೈಲು ಸೇರಿದ್ರೆ ನಿಮ್ಮ ಅಪ್ಪ-ಅಮ್ಮ ಬೇಲ್​ ಕೊಡಿಸಲು ಬರಬೇಕು. ಬಿಜೆಪಿ ನಾಯಕರು ಕಳ್ಳರು, ಡೋಂಗಿಗಳು. ಅವರ ನಾಲಿಗೆ ಮೇಲಷ್ಟೇ ಶ್ರೀರಾಮ ಇರೋದು. ಆದರೆ ನಮ್ಮ ಹೃದಯದಲ್ಲಿ ರಾಮ ಇದ್ದಾನೆ ಎಂದು ಅವರು ಹೇಳಿದ್ದಾರೆ.

ಬೆಂಗಳೂರು, ಅಕ್ಟೋಬರ್​ 21: ಮಂಗಳೂರಲ್ಲಿ ಬಿಜೆಪಿಯವರ (BJP) ಪ್ರಚೋದನಕಾರಿ ಭಾಷಣಕ್ಕೆ ಅದೆಷ್ಟೋ ಯುವಕರು ಬಾಳು ಹಾಳು ಮಾಡಿಕೊಂಡಿದ್ದಾರೆ. ಇವರ ಮಕ್ಕಳು ಯಾವತ್ತಾದರೂ ತ್ರಿಶೂಲ ಹಿಡಿಯುತ್ತಾರಾ? ಬೀದಿಗೆ ಬಂದು ಹೋರಾಟ ಮಾಡಿದ್ದನ್ನು ನೋಡಿದ್ದೀರಾ ಎಂದು ಕಾಂಗ್ರೆಸ್​ ಶಾಸಕ ಪ್ರದೀಪ್​ ಈಶ್ವರ್​ ಪ್ರಶ್ನಿಸಿದ್ದಾರೆ. ನೀವು ಜೈಲು ಸೇರಿದ್ರೆ ನಿಮ್ಮ ಅಪ್ಪ-ಅಮ್ಮ ಬೇಲ್​ ಕೊಡಿಸಲು ಬರಬೇಕು. ಬಿಜೆಪಿ ನಾಯಕರು ಕಳ್ಳರು, ಡೋಂಗಿಗಳು. ಅವರ ನಾಲಿಗೆ ಮೇಲಷ್ಟೇ ಶ್ರೀರಾಮ ಇರೋದು. ಆದರೆ ನಮ್ಮ ಹೃದಯದಲ್ಲಿ ರಾಮ ಇದ್ದಾನೆ ಎಂದು ಅವರು ಹೇಳಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​ ಮಾಡಿ.