ಕಾಂಗ್ರೆಸ್ ಅಧಿಕಾರಿಕ್ಕೆ ಬಂದಿದ್ದರಿಂದ ಇಂದಿರಾ ಕ್ಯಾಂಟಿನ್​ನಲ್ಲಿ ಹೋಳಿಗೆ ಊಟ

ಮೈಸೂರು ಅರಮನೆ ಬಳಿಯ ಇಂದಿರಾ ಕ್ಯಾಂಟಿನ್​ ಊಟ ಮಾಡಲು ಬಂದವರಿಗೆ ಕಾಂಗ್ರೆಸ್ ಕಾರ್ಯಕರ್ತ ಬ್ಯಾಂಕ್ ಬಸಪ್ಪ ಅವರು ಹೋಳಿಗೆ ವಿತರಣೆ ಮಾಡಿ ಗಮನಸೆಳೆದರು.

ಕಾಂಗ್ರೆಸ್ ಅಧಿಕಾರಿಕ್ಕೆ ಬಂದಿದ್ದರಿಂದ ಇಂದಿರಾ ಕ್ಯಾಂಟಿನ್​ನಲ್ಲಿ ಹೋಳಿಗೆ ಊಟ
|

Updated on: May 19, 2023 | 1:44 PM

ಮೈಸೂರು: ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದು, ಕಾರ್ಯಕರ್ತರಲ್ಲಿ, ನಾಯಕರು ಫುಲ್ ಖುಷ್ ಆಗಿದ್ದಾರೆ. ಇನ್ನು ಕಾಂಗ್ರೆಸ್​​ ಅಧಿಕಾರಕ್ಕೆ ಬಂದಿದ್ದರಿಂದ ಎಲ್ಲೆಡೆ ಪೂಜೆ-ಪುನಸ್ಕಾರಗಳು ನಡೆಯುತ್ತಿವೆ. ಇದರ ಮಧ್ಯೆ ಕಾಂಗ್ರೆಸ್​ ಗೆದ್ದ ಖುಷಿಗೆ ಕಾರ್ಯಕರ್ತರೊಬ್ಬರು ಜನರೊಗೆ ಹೋಳಿಗೆ ಹಂಚಿ ಹರ್ಷ ವ್ಯಕ್ತಪಡಿಸಿದ್ದಾರೆ. ಹೌದು.. ಮೈಸೂರಿನ ಇಂದಿರಾ ಕ್ಯಾಂಟೀನ್​ನಲ್ಲಿ ಹೋಳಿಗೆ ವಿತರಣೆ ಮಾಡಲಾಗಿದೆ.ಮೈಸೂರು ಅರಮನೆ ಬಳಿಯ ಇಂದಿರಾ ಕ್ಯಾಂಟಿನ್​ ಊಟ ಮಾಡಲು ಬಂದವರಿಗೆ ಕಾಂಗ್ರೆಸ್ ಕಾರ್ಯಕರ್ತ ಬ್ಯಾಂಕ್ ಬಸಪ್ಪ ಅವರು ಹೋಳಿಗೆ ವಿತರಣೆ ಮಾಡಿ ಗಮನಸೆಳೆದರು.

Follow us