Karnataka Assembly Polls: ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರಿಗೆ ಕೆ ಹೆಚ್ ಮುನಿಯಪ್ಪ ಬೇಕಿಲ್ಲ, ಸ್ಥಳೀಯ ನಾಯಕನಿಗೆ ಟಿಕೆಟ್ ಬೇಕು
ಕ್ಷೇತ್ರದ ಬಹಳಷ್ಟು ಕಾರ್ಯಕರ್ತರಿಗೆ ಮುನಿಯಪ್ಪ ಸ್ಪರ್ಧಿಸುವುದು ಬೇಕಿಲ್ಲ. ಕಾಂಗ್ರೆಸ್ ವರಿಷ್ಠರು ಈ ಇಬ್ಬಂದಿಯನ್ನು ಹೇಗೆ ನಿಭಾಯಿಸುತ್ತಾರೋ ಕಾದು ನೋಡಬೇಕು.
ಬೆಂಗಳೂರು: ನಮಗೆ ಸ್ಥಳೀಯ ಕಾಂಗ್ರೆಸ್ ಮುಖಂಡರೊಬ್ಬರು ಕ್ಷೇತ್ರದಿಂದ ಸ್ಪರ್ಧಿಸುವುದು ಬೇಕು, ಕೆಹೆಚ್ ಮುನಿಯಪ್ಪ (KH Muniyappa) ಬೇಡ ಅಂತ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ವಿಧಾನಸಭಾ ಕ್ಷೇತ್ರದ (Devanahalli constituency) ಕಾಂಗ್ರೆಸ್ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸುತ್ತಿರುವುದು ಕೆಪಿಸಿಸಿ (KPCC) ಮತ್ತು ಎಐಸಿಸಿ ನಾಯಕರಿಗೆ ಪೀಕಲಾಟಕ್ಕಿಟ್ಟುಕೊಂಡಿದೆ. ದೇವನಹಳ್ಳಿ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಇಂದಿನ ಸಭೆ ಕೂಗಾಟ, ಅರಚಾಟಗಳಲ್ಲಿ ಪರ್ಯಾವಸಗೊಂಡಿತು. ಕ್ಷೇತ್ರದ ಬಹಳಷ್ಟು ಕಾರ್ಯಕರ್ತರಿಗೆ ಮುನಿಯಪ್ಪ ಸ್ಪರ್ಧಿಸುವುದು ಬೇಕಿಲ್ಲ. ಕಾಂಗ್ರೆಸ್ ವರಿಷ್ಠರು ಈ ಇಬ್ಬಂದಿಯನ್ನು ಹೇಗೆ ನಿಭಾಯಿಸುತ್ತಾರೋ ಕಾದು ನೋಡಬೇಕು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:48 am, Sat, 1 April 23