AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Karnataka Assembly Polls: ಮತದಾರರಕ್ಕಿಂತ ಮೊದಲು ದೇವನಹಳ್ಳಿಯ ನಿರ್ಲಿಪ್ತ  ಕಾಂಗ್ರೆಸ್ ಕಾರ್ಯಕರ್ತರ ಮನವೊಲಿಸುವ ಅನಿವಾರ್ಯತೆ ಕೆಹೆಚ್ ಮುನಿಯಪ್ಪಗೆ!

Karnataka Assembly Polls: ಮತದಾರರಕ್ಕಿಂತ ಮೊದಲು ದೇವನಹಳ್ಳಿಯ ನಿರ್ಲಿಪ್ತ  ಕಾಂಗ್ರೆಸ್ ಕಾರ್ಯಕರ್ತರ ಮನವೊಲಿಸುವ ಅನಿವಾರ್ಯತೆ ಕೆಹೆಚ್ ಮುನಿಯಪ್ಪಗೆ!

ಅರುಣ್​ ಕುಮಾರ್​ ಬೆಳ್ಳಿ
|

Updated on:Mar 31, 2023 | 10:15 AM

ದೇವನಹಳ್ಳಿ ಕ್ಷೇತ್ರದ ಕಾಂಗ್ರೆಸ್ ಮುಖಂಡರಿಗೆ ಮುನಿಯಪ್ಪ ಅಲ್ಲಿಂದ ಸ್ಪರ್ಧಿಸುವುದು ಬೇಕಿರಲಿಲ್ಲ. ಅವರೆಲ್ಲ, ಪರ ಪ್ರಚಾರ ಕಾರ್ಯಕ್ಕಿಳಿಯದೆ ಮನೆಗಳಲ್ಲಿ ಕೂತು ಬಿಟ್ಟಿದ್ದಾರೆ.

ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ (Karnataka Assembly Polls) ಟಿಕೆಟ್ ಸಿಗುವ ಮೊದಲು ಸಹ ಹಿರಿಯ ಕಾಂಗ್ರೆಸ್ ಕೆಹೆಚ್ ಮುನಿಯಪ್ಪ (KH Muniyappa) ಅಸಮಾಧಾನಗೊಂಡಿದ್ದರು ಮತ್ತು ಟಿಕೆಟ್ ಸಿಕ್ಕ ನಂತರವೂ ಅದು ಮುಂದುವರಿದಿದೆ. ನಿಮಗೆ ಗೊತ್ತಿರುವ ಹಾಗೆ ಅವರಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ವಿಧಾನಸಭಾ (Devanahalli constituency) ಕ್ಷೇತ್ರಕ್ಕೆ ಟಿಕೆಟ್ ಸಿಕ್ಕಿದೆ. ಆದರೆ ಅವರಿಗೆ ಇಕ್ಕಟ್ಟಿಗೆ ಸಿಕ್ಕಿಸಿರುವ ಸಂಗತಿಯೆಂದರೆ, ಕ್ಷೇತ್ರದ ಕಾಂಗ್ರೆಸ್ ಮುಖಂಡರಿಗೆ ಮುನಿಯಪ್ಪ ಅಲ್ಲಿಂದ ಸ್ಪರ್ಧಿಸುವುದು ಬೇಕಿರಲಿಲ್ಲ. ಅವರೆಲ್ಲ, ಮುನಿಯಪ್ಪ ಪರ ಪ್ರಚಾರ ಕಾರ್ಯಕ್ಕಿಳಿಯದೆ ಮನೆಗಳಲ್ಲಿ ಕೂತು ಬಿಟ್ಟಿದ್ದಾರೆ. ಹಾಗಾಗಿ, ಮಾಜಿ ಕೇಂದ್ರ ಸಚಿವ ಮತದಾರರನ್ನು ಒಲಿಸಿಕೊಳ್ಳುವ ಮೊದಲು ಪಕ್ಷದ ಕಾರ್ಯಕರ್ತರನ್ನು ಒಲಿಸಿಕೊಳ್ಳಬೇಕಾದ ಅನಿವಾರ್ಯತೆಗೆ ಸಿಕ್ಕಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Mar 31, 2023 10:15 AM