ರವಿಚಂದ್ರನ್​ ಪುತ್ರ ಕನ್ನಡ ಸರಿಯಾಗಿ ಕಲಿತಿದ್ದು ಹೇಗೆ? ಮನುರಂಜನ್​ ನೀಡಿದ ವಿವರಣೆ ಇಲ್ಲಿದೆ..

| Updated By: ಮದನ್​ ಕುಮಾರ್​

Updated on: Nov 28, 2021 | 4:03 PM

‘ಎಲ್ಲರ ಜೊತೆ ಕನ್ನಡದಲ್ಲೇ ಮಾತನಾಡುತ್ತೇನೆ ಅಂತ ತೀರ್ಮಾನ ಮಾಡಿದೆ. ಪ್ರತಿದಿನ ಕನ್ನಡ ದಿನಪತ್ರಿಕೆ ಜೋರಾಗಿ ಓದಲು ಆರಂಭಿಸಿದೆ’ ಎಂದು ಮನುರಂಜನ್ ರವಿಚಂದ್ರನ್​ ಹೇಳಿದ್ದಾರೆ.

ಮನುರಂಜನ್​ ರವಿಚಂದ್ರನ್​ (Crazy Star Ravichandran) ನಟನೆಯ ‘ಮುಗಿಲ್​ ಪೇಟೆ’ (Mugilpete) ಸಿನಿಮಾ ತೆರೆಕಂಡು ಜನಮೆಚ್ಚುಗೆ ಗಳಿಸಿಕೊಂಡಿದೆ. ಪುತ್ರನ ನಟನೆ ಕಂಡು ರವಿಚಂದ್ರನ್​ ಕೂಡ ಇಷ್ಟಪಟ್ಟಿದ್ದಾರೆ. ಮಗನ ಸಿನಿಪಯಣದ ಬಗ್ಗೆ ‘ಕ್ರೇಜಿ ಸ್ಟಾರ್’ ಮಾತನಾಡಿದ್ದಾರೆ. ಮನುರಂಜನ್​ (Manuranjan Ravichandran) ಅವರಿಗೆ ಕನ್ನಡದ ಮೇಲೆ ಅಷ್ಟೇನೂ ಹಿಡಿತ ಇರಲಿಲ್ಲ. ಹಾಗಾಗಿ ಕನ್ನಡವನ್ನು ಸರಿಯಾಗಿ ಕಲಿಯುವಂತೆ ಪುತ್ರನಿಗೆ ರವಿಚಂದ್ರನ್​ ತಾಕೀತು ಮಾಡಿದ್ದರು. ಅದರ ಪರಿಣಾಮವಾಗಿ ಮನುರಂಜನ್​ ಒಂದಷ್ಟು ಅಭ್ಯಾಸಗಳನ್ನು ರೂಢಿಸಿಕೊಂಡರು. ಆ ಕುರಿತು ಟಿವಿ9 ಸಂದರ್ಶನದಲ್ಲಿ ಮನುರಂಜನ್​ ಮಾತನಾಡಿದ್ದಾರೆ. ತಂದೆಯ ಪ್ರೋತ್ಸಾಹ ಮತ್ತು ಮಾರ್ಗದರ್ಶನ ಹೇಗಿದೆ ಎಂಬುದನ್ನು ವಿವರಿಸಿದ್ದಾರೆ. ‘ಈ ವರ್ಷ ಎಲ್ಲರ ಜೊತೆ ಕನ್ನಡದಲ್ಲೇ ಮಾತನಾಡುತ್ತೇನೆ ಅಂತ ತೀರ್ಮಾನ ಮಾಡಿದ್ದೆ. ಮನೆಯಲ್ಲಿ ಎಲ್ಲರ ಜತೆ ಕನ್ನಡದಲ್ಲೇ ಮಾತನಾಡಲು ಶುರುಮಾಡಿದೆ. ಪ್ರತಿದಿನ ಕನ್ನಡ ದಿನಪತ್ರಿಕೆ ಜೋರಾಗಿ ಓದಲು ಆರಂಭಿಸಿದೆ’ ಎಂದು ಮನುರಂಜನ್​ ಹೇಳಿದ್ದಾರೆ.

ಇದನ್ನೂ ಓದಿ:

ರವಿಚಂದ್ರನ್​ ಜತೆ ಸುದೀಪ್​ ‘ದೃಶ್ಯ’ ಚಿತ್ರ ಮಾಡ್ಬೇಕಿತ್ತು; ಆದರೆ ಮಿಸ್​ ಆಗಿದ್ದು ಹೇಗೆ?

‘ಸಾಧು ನನ್ನ ಕೈಗೆ ಸಿಕ್ಕಿದ್ದರೆ ಒಂದೆರಡು ಏಟು ಚೆನ್ನಾಗಿ ಬಿದ್ದಿರುತ್ತಿತ್ತು’: ರವಿಚಂದ್ರನ್​

Follow us on