ಶಿವರಾಜ್ಕುಮಾರ್ ಅಭಿನಯದ ‘ಬೈರಾಗಿ’ (Bairagee) ಸಿನಿಮಾ ತಂಡ ಬೆಂಗಳೂರಿನಿಂದ ಚಾಮರಾಜನಗರಕ್ಕೆ ಯಾತ್ರೆ ಹೊರಟಿದೆ. ಇದರಲ್ಲಿ ಡಾಲಿ ಧನಂಜಯ (Daali Dhananjaya), ಪೃಥ್ವಿ ಅಂಬಾರ್ ಕೂಡ ಭಾಗಿ ಆಗಿದ್ದಾರೆ. ಬೆಂಗಳೂರಿನ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ ‘ಬೈರಾಗಿ’ ಯಾತ್ರೆಗೆ ಇಂದು (ಜೂನ್ 24) ಚಾಲನೆ ನೀಡಲಾಗಿದೆ. ಮಾರ್ಗಮಧ್ಯದಲ್ಲಿ ಡಾ. ರಾಜ್ಕುಮಾರ್ ಹುಟ್ಟೂರಾದ ಗಾಜನೂರಿಗೂ (Gajanur) ಈ ಚಿತ್ರತಂಡ ತೆರಳಲಿದೆ. ‘ಈ ಹಿಂದೆ ಟಗರು ಸಿನಿಮಾ ರಿಲೀಸ್ ಆದಾಗ ಶಿವಣ್ಣನ ಜೊತೆ ಟಗರು ಜಾತ್ರೆಗೆ ಹೋಗಿದ್ದೆ. ಈಗ ಬೈರಾಗಿ ಯಾತ್ರೆಗೆ ಹೋಗುತ್ತಿದ್ದೇನೆ. ನಾನು ಯಾವತ್ತೂ ಗಾಜನೂರಿಗೆ ಹೋಗಿಲ್ಲ. ಅಣ್ಣಾವ್ರು ಹುಟ್ಟಿ ಬೆಳೆದ ಜಾಗವನ್ನು ನೋಡಿಲ್ಲ. ಶಿವಣ್ಣನ ಜೊತೆ ಹೋಗಿ ಅದನ್ನೆಲ್ಲ ನೋಡಿಕೊಂಡು ಬರುತ್ತಿರುವುದಕ್ಕೆ ಎಗ್ಸೈಟ್ ಆಗಿದ್ದೇನೆ’ ಎಂದು ಧನಂಜಯ ಹೇಳಿದ್ದಾರೆ. ಜೂನ್ 25ರ ಸಂಜೆ ಚಾಮರಾಜನಗರದಲ್ಲಿ ಪ್ರೀ-ರಿಲೀಸ್ ಇವೆಂಟ್ ನಡೆಯಲಿದೆ.
ಇದನ್ನೂ ಓದಿ: ‘ನನ್ನ ಸಿನಿಮಾಗಳನ್ನು ಗಿಮಿಕ್ ಮಾಡಿ ಪ್ರಚಾರ ಮಾಡುವ ಅವಶ್ಯಕತೆ ಇಲ್ಲ’: ಧನಂಜಯ
ಅಭಿಷೇಕ್ ಅಂಬರೀಷ್ ನಟನೆಯ ‘ಬ್ಯಾಡ್ ಮ್ಯಾನರ್ಸ್’ ಸೆಟ್ನಲ್ಲಿ ಡಾಲಿ ಧನಂಜಯ; ಇಲ್ಲಿದೆ ವಿಡಿಯೋ
Published On - 2:06 pm, Fri, 24 June 22