‘ಬೈರಾಗಿ’ ಯಾತ್ರೆ: ಡಾ. ರಾಜ್​ ಹುಟ್ಟಿ ಬೆಳೆದ ಗಾಜನೂರು ನೋಡಲು ಶಿವಣ್ಣನ ಜತೆ ಹೊರಟ ಡಾಲಿ ಧನಂಜಯ

| Updated By: ಮದನ್​ ಕುಮಾರ್​

Updated on: Jun 24, 2022 | 2:06 PM

Bairagee: ‘ಟಗರು’ ಬಳಿಕ ‘ಬೈರಾಗಿ’ ಸಿನಿಮಾದಲ್ಲಿ ಧನಂಜಯ ಮತ್ತು ಶಿವಣ್ಣ ತೆರೆ ಹಂಚಿಕೊಂಡಿದ್ದಾರೆ. ಇಬ್ಬರೂ ಈಗ ಪ್ರಚಾರ ಕಾರ್ಯದಲ್ಲಿ ಪಾಲ್ಗೊಂಡಿದ್ದಾರೆ.

ಶಿವರಾಜ್​ಕುಮಾ​ರ್​ ಅಭಿನಯದ ‘ಬೈರಾಗಿ’ (Bairagee) ಸಿನಿಮಾ ತಂಡ ಬೆಂಗಳೂರಿನಿಂದ ಚಾಮರಾಜನಗರಕ್ಕೆ ಯಾತ್ರೆ ಹೊರಟಿದೆ. ಇದರಲ್ಲಿ ಡಾಲಿ ಧನಂಜಯ (Daali Dhananjaya), ಪೃಥ್ವಿ ಅಂಬಾರ್​ ಕೂಡ ಭಾಗಿ ಆಗಿದ್ದಾರೆ. ಬೆಂಗಳೂರಿನ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ ‘ಬೈರಾಗಿ’ ಯಾತ್ರೆಗೆ ಇಂದು (ಜೂನ್​ 24) ಚಾಲನೆ ನೀಡಲಾಗಿದೆ. ಮಾರ್ಗಮಧ್ಯದಲ್ಲಿ ಡಾ. ರಾಜ್​ಕುಮಾರ್ ಹುಟ್ಟೂರಾದ ಗಾಜನೂರಿಗೂ (Gajanur) ಈ ಚಿತ್ರತಂಡ ತೆರಳಲಿದೆ. ‘ಈ ಹಿಂದೆ ಟಗರು ಸಿನಿಮಾ ರಿಲೀಸ್​ ಆದಾಗ ಶಿವಣ್ಣನ ಜೊತೆ ಟಗರು ಜಾತ್ರೆಗೆ ಹೋಗಿದ್ದೆ. ಈಗ ಬೈರಾಗಿ ಯಾತ್ರೆಗೆ ಹೋಗುತ್ತಿದ್ದೇನೆ. ನಾನು ಯಾವತ್ತೂ ಗಾಜನೂರಿಗೆ ಹೋಗಿಲ್ಲ. ಅಣ್ಣಾವ್ರು ಹುಟ್ಟಿ ಬೆಳೆದ ಜಾಗವನ್ನು ನೋಡಿಲ್ಲ. ಶಿವಣ್ಣನ ಜೊತೆ ಹೋಗಿ ಅದನ್ನೆಲ್ಲ ನೋಡಿಕೊಂಡು ಬರುತ್ತಿರುವುದಕ್ಕೆ ಎಗ್ಸೈಟ್​ ಆಗಿದ್ದೇನೆ’ ಎಂದು ಧನಂಜಯ ಹೇಳಿದ್ದಾರೆ. ಜೂನ್​ 25ರ ಸಂಜೆ ಚಾಮರಾಜನಗರದಲ್ಲಿ ಪ್ರೀ-ರಿಲೀಸ್​ ಇವೆಂಟ್​ ನಡೆಯಲಿದೆ.

ಇದನ್ನೂ ಓದಿ: ‘ನನ್ನ ಸಿನಿಮಾಗಳನ್ನು ಗಿಮಿಕ್ ಮಾಡಿ ಪ್ರಚಾರ ಮಾಡುವ ಅವಶ್ಯಕತೆ ಇಲ್ಲ’: ಧನಂಜಯ

ಅಭಿಷೇಕ್​ ಅಂಬರೀಷ್ ನಟನೆಯ ‘ಬ್ಯಾಡ್​ ಮ್ಯಾನರ್ಸ್​​’ ಸೆಟ್​ನಲ್ಲಿ ಡಾಲಿ ಧನಂಜಯ; ಇಲ್ಲಿದೆ ವಿಡಿಯೋ

Published On - 2:06 pm, Fri, 24 June 22

Follow us on