Daily Devotional: ಉಪ್ಪನ್ನ ಈ ಸಮಯದಲ್ಲಿ ಕೊಟ್ಟರೆ ಕಷ್ಟಗಳು ಕಟ್ಟಿಟ್ಟ ಬುತ್ತಿ
ಉಪ್ಪು ಮಹಾಲಕ್ಷ್ಮೀಯ ಪ್ರತೀಕವಾಗಿದೆ. ಮನೆಯಲ್ಲಿ ಉಪ್ಪು ಖಾಲಿಯಾಗದಂತೆ ನೋಡಿಕೊಳ್ಳುವುದು ಬಹಳ ಮುಖ್ಯ. ಉಪ್ಪನ್ನು ಕೈಗೆ ನೇರವಾಗಿ ಕೊಡಬಾರದು ಮತ್ತು ನೆಲದ ಮೇಲೆ ಬಿದ್ದ ಉಪ್ಪನ್ನು ಪೊರಕೆಯಿಂದ ಗುಡಿಸಬಾರದು. ಉಪ್ಪಿನ ಋಣವನ್ನು ಪೂರ್ಣಗೊಳಿಸುವುದು ಮುಖ್ಯ. ಈ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ.
ಬೆಂಗಳೂರು, ಏಪ್ರಿಲ್ 21: ಹಿಂದೂ ಸಂಪ್ರದಾಯದಲ್ಲಿ ಉಪ್ಪಿಗೆ ಪವಿತ್ರ ಸ್ಥಾನವಿದೆ. ಸಮುದ್ರ ಮಥನದಿಂದ ಉಪ್ಪು ಉತ್ಪತ್ತಿಯಾಯಿ ಎನ್ನಲಾಗುತ್ತದೆ. ಉಪ್ಪನ್ನು ಲಕ್ಷ್ಮೀಯ ಪ್ರತೀಕವೆಂದು ಪರಿಗಣಿಸಲಾಗುತ್ತದೆ. ಮನೆಯಲ್ಲಿ ಉಪ್ಪು ಖಾಲಿಯಾಗದಂತೆ ನೋಡಿಕೊಳ್ಳುವುದು ಅತ್ಯಂತ ಮುಖ್ಯ. ಖಾಲಿ ಆದರೆ ಲಕ್ಷ್ಮೀ ದೇವಿಯ ಅನುಗ್ರಹ ಕಡಿಮೆಯಾಗುತ್ತದೆ ಎಂಬ ನಂಬಿಕೆ. ಉಪ್ಪನ್ನು ಕೈಗೆ ನೇರವಾಗಿ ಕೊಡುವುದು ಅಥವಾ ನೆಲದ ಮೇಲೆ ಬಿದ್ದ ಉಪ್ಪನ್ನು ಪೊರಕೆಯಿಂದ ಗುಡಿಸುವುದು ಅಶುಭವೆಂದು ಹೇಳಲಾಗುತ್ತದೆ. ಈ ಬಗ್ಗೆ ಗುರೂಜಿ ತಿಳಿಸಿಕೊಟ್ಟಿದ್ದಾರೆ ವಿಡಿಯೋ ನೋಡಿ.