AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾಗರ ಪಂಚಮಿಯ ಆಚರಣೆಯ ಮಹತ್ವ ಹಾಗೂ ಅದರ ಫಲ ತಿಳಿಯಿರಿ

ನಾಗರ ಪಂಚಮಿಯ ಆಚರಣೆಯ ಮಹತ್ವ ಹಾಗೂ ಅದರ ಫಲ ತಿಳಿಯಿರಿ

ಗಂಗಾಧರ​ ಬ. ಸಾಬೋಜಿ
|

Updated on: Jul 29, 2025 | 6:52 AM

Share

ನಾಗರ ಪಂಚಮಿಯು ಶ್ರಾವಣ ಮಾಸದ ಶುಕ್ಲ ಪಕ್ಷದ ಪಂಚಮಿಯಂದು ಆಚರಿಸುವ ಪ್ರಮುಖ ಹಬ್ಬವಾಗಿದೆ. ಈ ದಿನ ನಾಗ ದೇವರ ಪೂಜೆ, ಹಾಲು ಮತ್ತು ತನಿ ಅರ್ಪಿಸುವುದು, ಹಾಗೂ ವಿಶೇಷ ಭಕ್ಷ್ಯಗಳನ್ನು ಸಮರ್ಪಿಸುವುದು ವಾಡಿಕೆ. ಪುರಾಣಗಳ ಪ್ರಕಾರ, ಈ ದಿನ ಜನಮೇಜಯ ರಾಜನು ನಡೆಸುತ್ತಿದ್ದ ಮಹಾಯಾಗವನ್ನು ಆಸ್ತಿಕ ಮಹರ್ಷಿಗಳ ಮಧ್ಯಸ್ಥಿಕೆಯಿಂದ ನಿಲ್ಲಿಸಲಾಯಿತು ಎಂದು ಹೇಳಲಾಗುತ್ತದೆ.

ನಾಗರ ಪಂಚಮಿ ಹಬ್ಬವು ಶ್ರಾವಣ ಮಾಸದ ಶುಕ್ಲ ಪಕ್ಷದ ಪಂಚಮಿಯಂದು ಆಚರಿಸಲಾಗುತ್ತದೆ. ಇದನ್ನು ಗರುಡ ಪಂಚಮಿ ಮತ್ತು ಜೋಕಾಲಿ ಹಬ್ಬ ಎಂದೂ ಕರೆಯಲಾಗುತ್ತದೆ. ಈ ದಿನ ನಾಗ ದೇವರನ್ನು ಪೂಜಿಸುವುದು ಪ್ರಮುಖ. ಪೂಜೆಯಲ್ಲಿ ಹಾಲು, ತನಿ ಹಾಗೂ ವಿಶೇಷ ಭಕ್ಷ್ಯಗಳನ್ನು ನೀಡಲಾಗುತ್ತದೆ. ನಾಗಬನಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸುವುದು ಸಾಮಾನ್ಯ ಪದ್ಧತಿ. ಪುರಾಣಗಳ ಪ್ರಕಾರ, ಜನಮೇಜಯ ರಾಜನು ನಡೆಸುತ್ತಿದ್ದ ಮಹಾಯಾಗವನ್ನು ಆಸ್ತಿಕ ಮಹರ್ಷಿಗಳ ಮಧ್ಯಸ್ಥಿಕೆಯಿಂದ ನಿಲ್ಲಿಸಿದ ದಿನವೇ ನಾಗಪಂಚಮಿ ಎಂದು ಹೇಳಲಾಗುತ್ತದೆ. ಈ ದಿನ ನವನಾಗಸ್ತೋತ್ರ ಪಠಿಸುವುದು ಅಥವಾ ಓಂ ಅನಂತಾಯ ನಮಃ ಎಂದು ಜಪಿಸುವುದು ಶುಭಕರ ಎಂಬ ನಂಬಿಕೆ.