AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Daily Devotional: ದಕ್ಷಿಣಾಯನದ ಮಹತ್ವ ಹಾಗೂ ಇದರ ಫಲ ತಿಳಿಯಿರಿ

Daily Devotional: ದಕ್ಷಿಣಾಯನದ ಮಹತ್ವ ಹಾಗೂ ಇದರ ಫಲ ತಿಳಿಯಿರಿ

ಗಂಗಾಧರ​ ಬ. ಸಾಬೋಜಿ
|

Updated on: Jul 17, 2025 | 6:55 AM

Share

ದಕ್ಷಿಣಾಯನ ಕಾಲದಲ್ಲಿ ಸೂರ್ಯನ ತೀವ್ರತೆ ಕಡಿಮೆಯಾಗುವುದರಿಂದ ಪೂಜೆ ಪುನಸ್ಕಾರಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತದೆ. ಈ ಸಮಯದಲ್ಲಿ ಸೂರ್ಯನಮಸ್ಕಾರ, ವಿಷ್ಣು ಸಹಸ್ರನಾಮ ಪಠಣ, ದಾನ ಮತ್ತು ಗಾಯತ್ರಿ ಮಂತ್ರ ಪಠಣದಿಂದ ಶುಭ ಫಲಗಳು ದೊರೆಯುತ್ತವೆ ಎಂದು ಡಾ. ಬಸವರಾಜ್ ಗುರೂಜಿ ತಿಳಿಸಿದ್ದಾರೆ. ಪೂರ್ವಜರ ಪೂಜೆಯನ್ನೂ ಈ ಸಮಯದಲ್ಲಿ ವಿಶೇಷವಾಗಿ ಆಚರಿಸುವುದು ಉತ್ತಮ.

ಬೆಂಗಳೂರು, ಜುಲೈ 17: ಡಾ. ಬಸವರಾಜ್ ಗುರೂಜಿ ಅವರು ತಮ್ಮ ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ದಕ್ಷಿಣಾಯನದ ಮಹತ್ವವನ್ನು ವಿವರಿಸಿದ್ದಾರೆ. ಜುಲೈ 16ರಿಂದ ಜನವರಿ 14, 2026 ರವರೆಗೆ ಇರುವ ಈ ಆರು ತಿಂಗಳ ಕಾಲದಲ್ಲಿ ರಾತ್ರಿಗಳು ಉದ್ದವಾಗಿದ್ದು, ಹಗಲುಗಳು ಚಿಕ್ಕದಾಗಿರುತ್ತವೆ. ಉತ್ತರಾಯಣದಲ್ಲಿ ದೈವಿಕ ಶಕ್ತಿಯ ಪ್ರಭಾವ ಹೆಚ್ಚಿರುವಂತೆ, ದಕ್ಷಿಣಾಯನದಲ್ಲಿ ಪಿತೃಗಳ ಪ್ರಭಾವ ಹೆಚ್ಚಾಗಿರುತ್ತದೆ. ಈ ಸಮಯದಲ್ಲಿ ಸೂರ್ಯನ ತೀವ್ರತೆ ಕಡಿಮೆಯಾಗುವುದರಿಂದ, ಪೂಜೆ, ಉಪವಾಸ, ದಾನ ಮತ್ತು ಮಂತ್ರ ಪಠಣಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತದೆ. ವಿಷ್ಣು ಸಹಸ್ರನಾಮ, ಗಾಯತ್ರಿ ಮಂತ್ರ ಪಠಣ ಮತ್ತು ಸೂರ್ಯನಮಸ್ಕಾರ ಮಾಡುವುದು ಒಳ್ಳೆಯದು ಎಂದು ಅವರು ಹೇಳಿದ್ದಾರೆ. ಪೂರ್ವಜರ ಪೂಜೆಯನ್ನು ವಿಶೇಷವಾಗಿ ಆಚರಿಸುವುದರಿಂದ ಕುಟುಂಬದ ಒಳಿತಾಗುತ್ತದೆ ಎಂದು ಅವರು ತಿಳಿಸಿದ್ದಾರೆ.