ಮಾಲಾಶ್ರೀ ಎದುರು ನಟಿಸಲು ನನ್ನ ತಂದೆ ಭಯಪಡುತ್ತಿದ್ದರು: ದರ್ಶನ್

|

Updated on: Dec 14, 2023 | 11:35 PM

Katera: ಮಾಲಾಶ್ರೀ ಪುತ್ರಿ ರಾಧನಾ, ‘ಕಾಟೇರ’ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಇದು ಅವರ ಮೊದಲ ಸಿನಿಮಾ. ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಟ ದರ್ಶನ್, ನನ್ನ ತಂದೆ ತೂಗುದೀಪ ಶ್ರೀನಿವಾಸ್ ಅವರು, ಮಾಲಾಶ್ರೀ ಅವರೊಟ್ಟಿಗೆ ನಟಿಸಲು ಭಯವಾಗುತ್ತದೆ ಎಂದಿದ್ದರು ಎಂದು ನೆನಪು ಮಾಡಿಕೊಂಡರು.

ದರ್ಶನ್ (Darshan) ನಟನೆಯ ‘ಕಾಟೇರ’ (Katera) ಸಿನಿಮಾನಲ್ಲಿ ಹಿರಿಯ ನಟಿ ಮಾಲಾಶ್ರೀ ಪುತ್ರಿ ರಾಧನಾ ನಾಯಕಿಯಾಗಿ ನಟಿಸಿದ್ದಾರೆ. ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಟ ದರ್ಶನ್, ಮಾಲಾಶ್ರೀ ಅವರ ಬಗ್ಗೆ ಮಾತನಾಡುತ್ತಾ ಅವರೊಬ್ಬ ಅದ್ಭುತವಾದ ನಟಿ, ಅವರನ್ನು ಕಂಡರೆ ನಮ್ಮ ತಂದೆಯವರೇ ಭಯ ಪಡುತ್ತಿದ್ದರು. ಒಮ್ಮೆ ಸಿನಿಮಾದ ಚಿತ್ರೀಕರಣಕ್ಕೆ ಕರೆದುಕೊಂಡು ಹೋಗಿದ್ದಾಗ ಎಲ್ಲರನ್ನೂ ಪರಿಚಯ ಮಾಡಿಸಿ, ಈ ನಟಿಯೊಟ್ಟಿಗೆ ನಟಿಸಲು ನನಗೆ ಭಯವಾಗುತ್ತದೆ ಅಷ್ಟು ಅದ್ಭುತವಾಗಿ ಪ್ರತಿಕ್ರಿಯೆಗಳನ್ನು ಅವರು ನೀಡುತ್ತಾರೆ ಎಂದಿದ್ದರು ಎಂದು ನೆನಪು ಮಾಡಿಕೊಂಡರು. ‘ಕಾಟೇರ’ ಸಿನಿಮಾ ಡಿಸೆಂಬರ್ 29ಕ್ಕೆ ತೆರೆಗೆ ಬರಲಿದೆ. ಸಿನಿಮಾದ ಟ್ರೈಲರ್ ಡಿಸೆಂಬರ್ 16ಕ್ಕೆ ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:48 pm, Thu, 14 December 23

Follow us on