ಹಲವು ದಿನಗಳ ಬಳಿಕ ದರ್ಶನ್ ಮುಖದಲ್ಲಿ ನಗು; ಜಾಮೀನು ಸಿಗುವ ಮುನ್ಸೂಚನೆಯೇ?

| Updated By: ಮದನ್​ ಕುಮಾರ್​

Updated on: Sep 25, 2024 | 10:38 PM

ಬಳ್ಳಾರಿ ಜೈಲಿಗೆ ಶಿಫ್ಟ್ ಆದ ಬಳಿಕ ದರ್ಶನ್ ಮಂಕಾಗಿದ್ದರು. ಅವರ ವಿರುದ್ಧ ಚಾರ್ಜ್​ಶೀಟ್​ನಲ್ಲಿ ಗಂಭೀರ ಆರೋಪಗಳು ಇರುವುದು ಬಹಿರಂಗ ಆಯಿತು. ಜಾಮೀನು ಅರ್ಜಿ ಅರ್ಜಿಯ ವಿಚಾರಣೆ ಮುಂದೂಡಿಕೆ ಆಯಿತು. ಈ ಎಲ್ಲ ಕಾರಣಗಳಿಂದ ಅವರು ಸೈಲೆಂಟ್​ ಆಗಿದ್ದರು. ಆದರೆ ಇಂದು (ಸೆ.25) ದರ್ಶನ್​ ನಗು ನಗುತ್ತಾ ಇರುವುದು ಕಾಣಿಸಿದೆ. ಆ ವಿಡಿಯೋ ಇಲ್ಲಿದೆ ನೋಡಿ..

ಇಷ್ಟು ದಿನಗಳ ಕಾಲ ಕೊಂಚ ಟೆನ್ಷನ್​ ಆಗಿದ್ದ ದರ್ಶನ್​ ಈಗ ರಿಲ್ಯಾಕ್ಸ್​ ಆದಂತಿದೆ. ಅವರ ಮುಖದಲ್ಲಿ ನಗು ಕಾಣಿಸಿದೆ. ಜಾಮೀನು ಸಿಗುವ ನಿರೀಕ್ಷೆಯಲ್ಲಿ ಅವರು ಇದ್ದಾರೆ. ದರ್ಶನ್ ಪರ ವಕೀಲರು ಬಳ್ಳಾರಿ ಜೈಲಿಗೆ ಹೋಗಿ ಒಂದಷ್ಟು ವಿಚಾರಗಳ ಬಗ್ಗೆ ಚರ್ಚೆ ಮಾಡಿ ಬಂದಿದ್ದಾರೆ. ಸೆಷನ್ಸ್​ ಕೋರ್ಟ್​ನಲ್ಲಿ ಜಾಮೀನು ಸಿಗದಿದ್ದರೆ ಹೈಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಲಾಗುವುದು. ಅದಕ್ಕೆ ಎಲ್ಲ ತಯಾರಿ ನಡೆದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 10:38 pm, Wed, 25 September 24

Follow us on