ಜೈಲಿಗೆ ತೆರಳುವ ಮುನ್ನ ಕೈ ಮುಗಿದ ನಟ ದರ್ಶನ್ ತೂಗುದೀಪ

|

Updated on: Jun 22, 2024 | 5:17 PM

ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ ತೂಗುದೀಪ ಹಾಗೂ ಇತರೆ ಕೆಲವು ಆರೋಪಿಗಳಿಗೆ 13 ದಿನದ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಇಂದು ನ್ಯಾಯಾಲಯದಿಂದ ಜೈಲಿನ ಕಡೆಗೆ ತೆರಳುವ ಮುಂಚೆ ಅಲ್ಲಿ ನೆರೆದಿದ್ದವರಿಗೆ ಕೈಮುಗಿದಿದ್ದಾರೆ ದರ್ಶನ್.

ರೇಣುಕಾ ಸ್ವಾಮಿ (Renuka Swamy) ಕೊಲೆ ಪ್ರಕರಣದಲ್ಲಿ ನಟ ದರ್ಶನ್ (Darshan Thoogudeepa)​ ಹಾಗೂ ಇತರೆ ಮೂವರು ಆರೋಪಿಗಳಿಗೆ ಇಂದು (ಜೂನ್ 22) 24ನೇ ಎಸಿಎಂಎಂ ನ್ಯಾಯಾಲಯವು 13 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ಪ್ರಕರಣದ ಇತರೆ ಆರೋಪಿಗಳಿಗೆ ಈಗಾಗಲೇ ನ್ಯಾಯಾಂಗ ಬಂಧನ ವಿಧಿಸಿದ್ದು ಅವರೆಲ್ಲ ಪರಪ್ಪನ ಅಗ್ರಹಾರದಲ್ಲಿದ್ದಾರೆ. ನ್ಯಾಯಾಲಯದ ಆದೇಶದ ಬಳಿಕ ನಟ ದರ್ಶನ್ ಅನ್ನು ಪೊಲೀಸ್ ವಾಹನದಲ್ಲಿ ನ್ಯಾಯಾಲಯದಿಂದ ಪರಪ್ಪನ ಅಗ್ರಹಾರಕ್ಕೆ ಸ್ಥಳಾಂತರಿಸಲಾಯ್ತು. ನ್ಯಾಯಾಲಯದ ಕಲಾಪ ಮುಗಿದ ಬಳಿಕ ಪೊಲೀಸ್ ವಾಹನ ಹತ್ತಿ ಜೈಲಿನತ್ತ ಹೊರಡಲು ಸಜ್ಜಾದ ನಟ ದರ್ಶನ್, ನೆರೆದಿದ್ದವರಿಗೆ ಕೈ ಬೀಸಿ, ಕೈ ಮುಗಿದರು. ವಿಡಿಯೋ ನೋಡಿ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on