ದಸರಾ -ನವರಾತ್ರಿ 2024: ಕನಕ ದುರ್ಗಾ ದೇವಿಗೆ 2.5 ಕೋಟಿ ರೂ ಮೌಲ್ಯದ ಚಿನ್ನದ ಕಿರೀಟ ಉಡುಗೊರೆ ನೀಡಿದ ಮುಂಬೈ ಉದ್ಯಮಿ

|

Updated on: Oct 03, 2024 | 4:47 PM

Mumbai businessman Saurabh Gaur gift: ವಿಜಯವಾಡ ದುರ್ಗಮ್ಮ ಇನ್ನು ಮುಂದೆ ಭಕ್ತರಿಗೆ ಚಿನ್ನದ ಕಿರೀಟದೊಂದಿಗೆ ದರ್ಶನ ನೀಡಲಿದ್ದಾರೆ. ಬಂಗಾರ ಮತ್ತು ವಜ್ರದಿಂದ ತಯಾರಿಸಿದ ಈ ಚಿನ್ನದ ಕಿರೀಟದ ಮೌಲ್ಯ ಅಂದಾಜು 2.5 ಕೋಟಿ ರೂ. ನಷ್ಟಿದೆ. ಮುಂಬೈನ ಉದ್ಯಮಿ ಸೌರಭ್ ಗೌರ್ ಅವರು ದೇವಿಗೆ ಚಿನ್ನದ ಕಿರೀಟವನ್ನು (gold crown) ಉಡುಗೊರೆಯಾಗಿ ನೀಡಿದರು.

ದೇಶದಾದ್ಯಂತ ದಸರಾ / ನವರಾತ್ರಿ ಉತ್ಸವಗಳು (Dasara – Navratri 2024) ಆರಂಭಗೊಂಡಿವೆ. ಶಕ್ತಿಯ ರೂಪದಲ್ಲಿರುವ ದುರ್ಗಾದೇವಿಯು ಒಂಬತ್ತು ದಿನಗಳ ಕಾಲ ನವದುರ್ಗೆಯ ರೂಪದಲ್ಲಿ ವಿವಿಧ ಅವತಾರಗಳಲ್ಲಿ ತನ್ನ ಭಕ್ತರಿಂದ ಪೂಜಿಸಲ್ಪಡುತ್ತಾಳೆ. ಅಮ್ಮನವರ ದೇವಸ್ಥಾನಗಳು ಭಕ್ತರಿಂದ ತುಂಬಿವೆ. ದಸರಾ ನವರಾತ್ರಿಯ ಸಂದರ್ಭದಲ್ಲಿ, ಆಂಧ್ರಪ್ರದೇಶದ ವಿಜಯವಾಡದಲ್ಲಿರುವ ಇಂದ್ರಕಿಲಾದ್ರಿ ಬೆಟ್ಟದ ಮೇಲೆ ನೆಲೆಸಿರುವ ಕನಕ ದುರ್ಗಮ್ಮ ( Goddess Kanaka Durga in Vijayawada) ದೇವಸ್ಥಾನವನ್ನು ಸುಂದರವಾಗಿ ಅಲಂಕರಿಸಲಾಗಿದೆ. ದಸರಾ ಶರನ್ನವರಾತ್ರಿ ಉತ್ಸವಗಳು ಅದ್ದೂರಿಯಾಗಿ ಆರಂಭಗೊಂಡಿವೆ.

ನವರಾತ್ರಿಯ ಮೊದಲ ದಿನ ಕನಕ ದುರ್ಗಮ್ಮ ದೇವಿಯ ಸೊಬಬು ಎಲ್ಲೆಡೆ ಹರಡಿದೆ. ಈಗ ದುರ್ಗಮ್ಮ ದೇವಿ ತ್ರಿಪುರಾ ಸುಂದರ ದೇವತೆಯ ರೂಪದಲ್ಲಿ ಭಕ್ತರಿಗೆ ಕಾಣಿಸಿಕೊಂಡಿದ್ದಾಳೆ. ಬೆಳಗ್ಗೆಯಿಂದಲೇ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಅಮ್ಮನವರ ದರ್ಶನ ಪಡೆದರು. ಶುದ್ಧಮನಸ್ಸಿನಿಂದ ಪೂಜಿಸಿದರೆ ಭಕ್ತರಿಗೆ ಬೇಡಿದ ವರಗಳನ್ನು ನೀಡುವ ದೇವಿಯಾಗಿದ್ದಾಳೆ. ಮಹಾರಾಷ್ಟ್ರದ ಭಕ್ತರೊಬ್ಬರು (Mumbai businessman, Saurabh Gaur gift) ಕೋಟ್ಯಂತರ ರೂಪಾಯಿ ಮೌಲ್ಯದ ವಜ್ರ ಕಿರೀಟವನ್ನು ಉಡುಗೊರೆಯಾಗಿ ನೀಡಿದ್ದಾರೆ. ವಿವರಗಳಿಗೆ ಹೋದರೆ..

ವಿಜಯವಾಡ ದುರ್ಗಮ್ಮ ಇನ್ನು ಮುಂದೆ ಭಕ್ತರಿಗೆ ಚಿನ್ನದ ಕಿರೀಟದೊಂದಿಗೆ ದರ್ಶನ ನೀಡಲಿದ್ದಾರೆ. ಬಂಗಾರ ಮತ್ತು ವಜ್ರದಿಂದ ತಯಾರಿಸಿದ ಈ ಚಿನ್ನದ ಕಿರೀಟದ ಮೌಲ್ಯ ಅಂದಾಜು 2.5 ಕೋಟಿ ರೂ. ನಷ್ಟಿದೆ. ಮುಂಬೈನ ಉದ್ಯಮಿ ಸೌರಭ್ ಗೌರ್ ಅವರು ದೇವಿಗೆ ಚಿನ್ನದ ಕಿರೀಟವನ್ನು (gold crown) ಉಡುಗೊರೆಯಾಗಿ ನೀಡಿದರು. ಇಂದು ದುರ್ಗಾ ದೇವಿಯು ತನ್ನ ಮೊದಲ ಅವತಾರದಲ್ಲಿ ಈ ವಜ್ರ ಕಿರೀಟವನ್ನು ಧರಿಸಿ ತ್ರಿಪುರ ಸುಂದರಿ ರೂಪದಲ್ಲಿ ಭಕ್ತರಿಗೆ ಕಾಣಿಸಿಕೊಂಡಳು.

ಸೌರಭ್ ಗೌರ್ ಅವರಿಗೆ ‘ಕನಕ ದುರ್ಗಮ್ಮ’ ಎಂದರೆ ಅಪಾರ ಭಕ್ತಿ. ಹಾಗಾಗಿ ನವರಾತ್ರಿಗಳಲ್ಲಿ ಮೊದಲ ದಿನದಂದು ತಾನು ದೇವಿಗೆ ಭಕ್ತಿಯಿಂದ ಕಿರೀಟ ನೀಡಿದ್ದಾಗಿ ಅವರು ಹೇಳಿದ್ದಾರೆ. ಮತ್ತೊಂದೆಡೆ ದಸರಾ ನವರಾತ್ರಿಯ ಸಂದರ್ಭದಲ್ಲಿ ದೇವಿಯ ದರ್ಶನಕ್ಕೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಇದರಿಂದ ಇಂದ್ರಕೀಲಾದ್ರಿ ಭಕ್ತರಿಂದ ತುಂಬಿ ತುಳುಕುತ್ತಿದೆ.

Published On - 4:14 pm, Thu, 3 October 24

Follow us on