AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೆಚ್ ವಿಶ್ವನಾಥ್ ಕಾಂಗ್ರೆಸ್ ಪಕ್ಷ ಸೇರಲು ದಿನಾಂಕ ನಿಗದಿಯಾಗಿದೆ: ಡಿಕೆ ಶಿವಕುಮಾರ್

ಹೆಚ್ ವಿಶ್ವನಾಥ್ ಕಾಂಗ್ರೆಸ್ ಪಕ್ಷ ಸೇರಲು ದಿನಾಂಕ ನಿಗದಿಯಾಗಿದೆ: ಡಿಕೆ ಶಿವಕುಮಾರ್

ಅರುಣ್​ ಕುಮಾರ್​ ಬೆಳ್ಳಿ
|

Updated on:Jan 20, 2023 | 5:33 PM

ಹಳೇ ಮೈಸೂರು ಭಾಗದ ಹಲವಾರು ಜೆಡಿ(ಎಸ್) ಮುಖಡರು ಸಹ ತಮ್ಮ ಪಕ್ಷವನ್ನು ಸೇರಲಿದ್ದಾರೆ ಅಮ ಎಂದು ಶಿವಕುಮಾರ ಹೇಳಿದರು

ಬೆಂಗಳೂರು: ಇದು ಬಹಳ ದಿನಗಳಿಂದ ಚರ್ಚೆಯಲ್ಲಿದ್ದ ವಿಷಯವಾಗಿತ್ತು. ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಮತ್ತು ರಾಜ್ಯದ ಹಿರಿಯ ರಾಜಕಾರಣಿ ಹೆಚ್ ವಿಶ್ವನಾಥ (H Vishwanath) ಅವರು ಪಕ್ಷ ತ್ಯಜಿಸಿ ಕಾಂಗ್ರೆಸ್ ಸೇರಲಿರುವುದು ಹೆಚ್ಚು ಕಡಿಮೆ ಖಚಿತವಾಗಿದೆ. ಇಂದು ಜೆಡಿ(ಎಸ್) ನಾಯಕರಾಗಿದ್ದ ಬೆಮೆಲ್ ಕಾಂತರಾಜು (BEML Kantha Raju) ಮತ್ತು ಅವರ ಬೆಂಬಲಿಗರನ್ನು ಬೆಂಗಳೂರಿನಲ್ಲಿರುವ ತಮ್ಮ ನಿವಾಸದ ಬಳಿ ಕಾಂಗ್ರೆಸ್ ಪಕ್ಷಕ್ಕೆ ಬರಮಾಡಿಕೊಂಡ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಅವರು ವಿಶ್ವನಾಥ್ ಅವರು ಕೂಡ ಪಕ್ಷಕ್ಕೆ ಸೇರುವುದಕ್ಕೆ ದಿನಾಂಕ ನಿಗದಿಯಾಗಿದೆ ಎಂದು ಹೇಳಿದರು. ಹಳೇ ಮೈಸೂರು ಭಾಗದ ಹಲವಾರು ಜೆಡಿ(ಎಸ್) ಮುಖಡರು ಸಹ ತಮ್ಮ ಪಕ್ಷವನ್ನು ಸೇರಲಿದ್ದಾರೆ ಅಮ ಎಂದು ಶಿವಕುಮಾರ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

Published on: Jan 20, 2023 01:30 PM