ಶಾಸಕ ರಾಜು ಕಾಗೆ ಮಾಡಿರುವ ಆರೋಪಗಳಿಗೆ ಡಿಸಿಎಂ ಡಿಕೆ ಶಿವಕುಮಾರ್ ಸಮಂಜಸ ಪ್ರತಿಕ್ರಿಯೆ ನೀಡಲಿಲ್ಲ

ಅರುಣ್​ ಕುಮಾರ್​ ಬೆಳ್ಳಿ

Updated on: Jun 25, 2025 | 6:10 PM

ನಮ್ಮ ಶಾಸಕರು ತಮ್ಮ ಮೇಲೆ ಪ್ರೀತಿ ಅಕ್ಕರೆ ಇಟ್ಟುಕೊಳ್ಳಲಿ ಅಂತ ನನ್ನ ಮುಖ ನೋಡುತ್ತಿರುತ್ತಾರೆ ಎಂದು ಹೇಳಿದ ಶಿವಕುಮಾರ್, ರಾಜು ಕಾಗೆಯವರು ಹೇಳಿದ ಕೆಲಸಗಳನ್ನೆಲ್ಲ ಮಾಡಿಕೊಟ್ಟಿದ್ದೇನೆ ಎನ್ನುತ್ತಾರೆ. ಆದರೆ ರಾಜು ಅವರು, ಕಂದಾಯ ಇಲಾಖೆ ಕಾರ್ಯದರ್ಶಿ ರಾಜೇಂದ್ರ ಕಠಾರಿಯರನ್ನು ಬೇರೆಡೆ ವರ್ಗ ಮಾಡಿ, ಅವರು ಶಾಸಕರೊಂದಿಗೆ ವರ್ತಿಸುವ ರೀತಿ ಸರಿಯಿಲ್ಲ ಎಂದು ಹೇಳಿದರೂ ಅಧಿಕಾರಿಯ ವರ್ಗ ಆಗಿಲ್ಲ ಎನ್ನುತ್ತಾರೆ.

ಬೆಂಗಳೂರು, ಜೂನ್ 25: ಕಾಂಗ್ರೆಸ್ ಶಾಸಕ ರಾಜು ಕಾಗೆ (Raju Kage) ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕಮಾರ್ ವಿರುದ್ಧ ಮಾಡಿರುವ ಅರೋಪಗಳಿಗೆ ಸಮಂಜಸ ಉತ್ತರ ಸಿಗುವಂತೆ ಕಾಣುತ್ತಿಲ್ಲ. ಮಾಧ್ಯಮ ಗೋಷ್ಠಿಯಲ್ಲಿ ಪತ್ರಕರ್ತರು, ರಾಜು ಕಾಗೆ ಅವರೊಂದಿಗೆ ನೀವು ಸರಿಯಾಗಿ ಮಾತಾಡುತ್ತಿಲ್ಲವಂತೆ ಅಸಡ್ಡೆ ಮಾಡುತ್ತೀರಂತೆ ಅಂತ ಕೇಳಿದಾಗ ಶಿವಕುಮಾರ್, ಅವರ ಜೊತೆ ನೀವೂ ಬಂದು ನೋಡಿ ನನ್ನ ವರ್ತನೆ ಹೇಗಿರುತ್ತೆ ಅಂತ ಎನ್ನುತ್ತಾರೆ. ಮುಂದುವರಿದು ಮಾತಾಡುವ ಅವರು, ಮಾಧ್ಯಮದವರು ಪ್ರತಿದಿನ ಬೆಳಗ್ಗೆ ನನ್ನನ್ನು ನೋಡುತ್ತಾರೆ, ಎಲ್ಲರೊಂದಿಗೆ ನಗುತ್ತಲೇ ಮಾತಾಡುತ್ತೇನೆ ಎನ್ನುತ್ತಾರೆ.

ಇದನ್ನೂ ಓದಿ:   ಸತೀಶ್ ಜಾರಕಿಹೊಳೆ ಮನೆಗೆ ಸಿಎಂ ಸಿದ್ದರಾಮಯ್ಯ ಊಟಕ್ಕೆ ಹೋದರೆ ಅದರಲ್ಲೇನು ತಪ್ಪು? ಡಿಕೆ ಶಿವಕುಮಾರ್

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.