AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಸ ವಿಲೇವಾರಿ ಮರು ಟೆಂಡರ್​​ಗೆ ಹೈಕೋರ್ಟ್ ತಡೆಯಾಜ್ಞೆ, ಪ್ರತಿಕ್ರಿಯೆ ನೀಡಿದ ಡಿಸಿಎಂ ಶಿವಕುಮಾರ್

ಕಸ ವಿಲೇವಾರಿ ಮರು ಟೆಂಡರ್​​ಗೆ ಹೈಕೋರ್ಟ್ ತಡೆಯಾಜ್ಞೆ, ಪ್ರತಿಕ್ರಿಯೆ ನೀಡಿದ ಡಿಸಿಎಂ ಶಿವಕುಮಾರ್

ಅರುಣ್​ ಕುಮಾರ್​ ಬೆಳ್ಳಿ
|

Updated on:Jun 17, 2025 | 11:32 AM

ಡಿಸಿಎಂ ಡಿಕೆ ಶಿವಕುಮಾರ್ ಮಾಧ್ಯಮಗಳ ಜೊತೆ ಮಾತಾಡುವ ಮೊದಲು ವಿಧಾನಸೌಧದ ಅವರಣದಲ್ಲಿ ಸೈಕ್ಲಿಂಗ್ ಮಾಡಿದರು. ಅವರೊಂದಿಗೆ ಮಳವಳ್ಳಿ ಶಾಸಕ ನರೇಂದ್ರ ಸ್ವಾಮಿ ಕೂಡ ಇದ್ದರು. ಆದರೆ ಅರಣ್ಯ ಖಾತೆ ಸಚಿವ ಈಶ್ವರ್ ಖಂಡ್ರೆ ಅವರು ಶಿವಕುಮಾರ್ ಸೈಕ್ಲಿಂಗ್ ಮಾಡುವಾಗ ಕಾಣಿಸದಿದ್ದರೂ ಮಾಧ್ಯಮಗಳೊಂದಿಗೆ ಮಾತಾಡುವಾಗ ಅವರ ಎಡಭಾಗದಲ್ಲಿ ನಿಂತಿದ್ದರು.

ಬೆಂಗಳೂರು, ಜೂನ್ 17: ವಿಧಾನ ಸೌಧ ಆವರಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಕಸ ವಿಲೇವಾರಿಗೆ ಮರು ಟೆಂಡರ್ ಆಹ್ವಾನಿಸಿರುವುದರ ವಿರುದ್ಧ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ (interim stay order) ನೀಡಿರುವುದಕ್ಕೆ ಪ್ರತಿಕ್ರಿಯಿಸುತ್ತಾ, ನಗರದಲ್ಲಿ ಕಸದ ವಿಲೇವಾರಿ ಆಗದಿದ್ದರೆ ಬಹಳ ಕಷ್ಟವಾಗುತ್ತದೆ, ಉಚ್ಚ ನ್ಯಾಯಾಲಯದ ಆದೇಶದ ಬಗ್ಗೆ ಕಾಮೆಂಟ್ ಮಾಡಲ್ಲ, ಆದರೆ ಕಸ ವಿಲೇವಾರಿ ಮಾಡುವ ಒಂದು ಗುಂಪು ಕಾರ್ಟೆಲ್ ಮಾಡಿಕೊಂಡು ಬಿಬಿಎಂಪಿಯನ್ನು ಓವರ್ ಮಾಡಬಹುದು ಅಂದುಕೊಂಡಿದೆ, ವಸ್ತುಸ್ಥಿತಿಯನ್ನು ಕೋರ್ಟ್​ಗೆ ಅರ್ಥ ಮಾಡಿಸುತ್ತೇವೆ ಎಂದರು.

ಇದನ್ನೂ ಓದಿ:   ಬಿಜೆಪಿ ಮತ್ತು ಜೆಡಿಎಸ್ ನಾಯಕರ ಹಾಗೆ ನಾನು ಹೆಣಗಳ ಮೇಲೆ ರಾಜಕೀಯ ಮಾಡಲ್ಲ: ಡಿಕೆ ಶಿವಕುಮಾರ್

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

Published on: Jun 17, 2025 11:31 AM