ಸದಾಶಿವನಗರದ ನಿವಾಸದಲ್ಲಿ ತಮ್ಮ ಕಾರಿಗೆ ಪೂಜೆ ನೆರವೇರಿಸಿದ ಡಿಕೆ ಶಿವಕುಮಾರ್ ದಂಪತಿ

|

Updated on: Oct 11, 2024 | 11:49 AM

ಉಪ ಮುಖ್ಯಮಂತ್ರಿಗೆ ದಸರಾ ಹಬ್ಬದ ಶುಭಾಷಯಗಳನ್ನು ಹೇಳಲು ನೂರಾರು ಜನ ಅವರ ನಿವಾಸದ ಮುಂದೆ ನೆರೆದಿದ್ದರು. ಕೆಲವರು ದೂರು ದುಮ್ಮಾನುಗಳನ್ನು ಹೇಳಿಕೊಳ್ಳಲು ಬಂದಿದ್ದರು. ಮನೆಯ ಗೇಟ್ ಬಳಿ ಬಂದ ಶಿವಕುಮಾರ್ ಎಲ್ಲರಿಗೆ ವಿಶ್ ಮಾಡಿ ಅಹವಾಲುಗಳನ್ನು ಸ್ವೀಕರಿಸಿದರು.

ಬೆಂಗಳೂರು: ಇಂದು ಆಯುಧ ಪೂಜೆ, ಜನ ತಮ್ಮ ಮನೆಯಲ್ಲಿರುವ ಆಯುಧ ಮತ್ತು ವಾಹನಗಳಿಗೆ ಪೂಜೆ ಸಲ್ಲಿಸುತ್ತಾರೆ. ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಪತ್ನಿಯೊಂದಿಗೆ ತಮ್ಮ ಕಾರಿಗೆ ಪೂಜೆ ಸಲ್ಲಿಸಿದರು. ಸದಾಶಿವನಗರದಲ್ಲಿರುವ ತಮ್ಮ ಭವ್ಯ ಬಂಗ್ಲೆಯಲ್ಲಿ ಶಿವಕುಮಾರ್ ದಂಪತಿ ಪೂಜೆಯನ್ನು ನೆರವೇರಿಸಿದರು. ಉಷಾ ಶಿವಕುಮಾರ್ ಅವರು ಎರಡನೇ ಬಾರಿಗೆ ಹೊರಬಂದು ಕಾರಿಗೆ ಆರತಿ ಬೆಳಗಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ನವೆಂಬರ್​ 1 ರಂದು ಐಟಿಬಿಟಿ ಕಂಪನಿಗಳು ಕನ್ನಡ ಬಾವುಟ ಹಾರಿಸುವುದು ಕಡ್ಡಾಯ: ಡಿಕೆ ಶಿವಕುಮಾರ್​

Follow us on