ಪರಿಚಿತ ಯುವಕನಿಂದಲೇ ನಡೆಯಿತಾ ಶಿಕ್ಷಕಿ ದೀಪಿಕಾ ಕೊಲೆ? ಮೂರು ದಿನಗಳಿಂದ ಅವನು ನಾಪತ್ತೆ ಅಂತಾರೆ ಮೃತಳ ಪತಿ!

ದೀಪಿಕಾ ಮತ್ತು ಯುವಕನ ನಡುವೆ ಸ್ನೇಹವೇನೂ ಇರಲಿಲ್ಲ, ಒಂದೇ ಊರಿನವರಾದ ಕಾರಣ ಪರಿಚಯವಿತ್ತು ಮತ್ತು ಅವನ್ಯಾವತ್ತೂ ಮನೆಗೆ ಬಂದವನಲ್ಲ ಎಂದು ದೀಪಿಕಾ ಪತಿ ಹೇಳುತ್ತಾರೆ. ದೀಪಿಕಾ ಫೋನ್ ಗೆ ಅದೇ ಯುವಕನಿಂದ ಕೊನೆಯ ಕಾಲ್ ಬಂದಿದ್ದು ಎಂದು ಅವರು ಹೇಳುತ್ತಾರೆ.

ಪರಿಚಿತ ಯುವಕನಿಂದಲೇ ನಡೆಯಿತಾ ಶಿಕ್ಷಕಿ ದೀಪಿಕಾ ಕೊಲೆ? ಮೂರು ದಿನಗಳಿಂದ ಅವನು ನಾಪತ್ತೆ ಅಂತಾರೆ ಮೃತಳ ಪತಿ!
|

Updated on: Jan 23, 2024 | 2:29 PM

ಮಂಡ್ಯ: ನಿನ್ನೆ ಸಾಯಂಕಾಲ ಮೇಲುಕೋಟೆ ಬೆಟ್ಟದ ತಪ್ಪಲಲ್ಲಿ ಶವವಾಗಿ ಪತ್ತೆಯಾದ ಖಾಸಗಿ ಶಾಲೆಯೊಂದರ ಶಿಕ್ಷಕಿ 28-ವರ್ಷ ವಯಸ್ಸಿನ ದೀಪಿಕಾ (Deepika) ಕೊಲೆಯಾಗಿದ್ದು ದೃಢಪಟ್ಟಿದೆ. ದೀಪಿಕಾ ಪತಿ ಹೇಳುವ ಹಾಗೆ ಅವರ ಕುಟುಂಬಕ್ಕೆ ಪರಿಚಿತನಾಗಿದ್ದು ಒಬ್ಬ ಯುವಕ (youth) ಆಕೆಯ ಕೊಲೆ ಮಾಡಿದ್ದಾನೆ. ಈಗ ನಾಪತ್ತೆಯಾಗಿರುವ ಯುವಕ ದೀಪಿಕಾರನ್ನು ಅಕ್ಕ ಅಂತಲೇ ಕರೆಯುತ್ತಿದ್ದ ಮತ್ತು ಅವರ ಪತಿಯನ್ನು ಅಣ್ಣ ಅನ್ನುತ್ತಿದ್ದನಂತೆ. ಯುವಕನಿಗೆ ನಿರ್ದಿಷ್ಟವಾದ ಉದ್ಯೋಗ (job) ಅಂತ ಇರಲಿಲ್ಲ ಊರಲ್ಲಿ ವ್ಯವಸಾಯ ಮಾಡಿಕೊಂಡಿದ್ದವನು ಕೆಲಸಕ್ಕೆ ಅಂತ ಮೈಸೂರಿಗೂ ಹೋಗುತ್ತಿದ್ದನಂತೆ. ದೀಪಿಕಾ ಮತ್ತು ಯುವಕನ ನಡುವೆ ಸ್ನೇಹವೇನೂ ಇರಲಿಲ್ಲ, ಒಂದೇ ಊರಿನವರಾದ ಕಾರಣ ಪರಿಚಯವಿತ್ತು ಮತ್ತು ಅವನ್ಯಾವತ್ತೂ ಮನೆಗೆ ಬಂದವನಲ್ಲ ಎಂದು ದೀಪಿಕಾ ಪತಿ ಹೇಳುತ್ತಾರೆ. ದೀಪಿಕಾ ಫೋನ್ ಗೆ ಅದೇ ಯುವಕನಿಂದ ಕೊನೆಯ ಕಾಲ್ ಬಂದಿದ್ದು ಎಂದು ಹೇಳುವ ಅವರು ತನ್ನನ್ನು ಮತ್ತು ತಮ್ಮ ಮಗನನ್ನು ದೀಪಿಕಾ ಒಂದು ಗಂಟೆ ಕೂಡ ಬಿಟ್ಟಿರುತ್ತಿರಲಿಲ್ಲ ಎನ್ನುತ್ತಾರೆ. ದೀಪಿಕಾ ನಾಪತ್ತೆಯಾದ ಬಗ್ಗೆ ದೂರು ಸಲ್ಲಿಸಿದ ಬಳಿಕ ಪೊಲೀಸರು ಕೂಡಲೇ ಕಾರ್ಯೋನ್ಮುಖರಾಗಲಿಲ್ಲ, ಪ್ರಕರಣ ದಾಖಲಿಸಿಕೊಳ್ಳಲು ಒಂದು ದಿನದಷ್ಟು ಸಮಯ ತೆಗೆದುಕೊಂಡರು ಎಂದು ದೀಪಿಕಾ ಪತಿ ದೂರುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us
ವಿದ್ಯಾರ್ಥಿಗೆ ಬಾಸುಂಡೆ ಬರುವಂತೆ ಹೊಡೆದ ಶಿಕ್ಷಕಿ! ಪೋಷಕರಿಂದ ಶಾಲೆಗೆ ಬೀಗ
ವಿದ್ಯಾರ್ಥಿಗೆ ಬಾಸುಂಡೆ ಬರುವಂತೆ ಹೊಡೆದ ಶಿಕ್ಷಕಿ! ಪೋಷಕರಿಂದ ಶಾಲೆಗೆ ಬೀಗ
 ಪವಿತ್ರಾ ಗೌಡರನ್ನು ನೋಡಲು ಬುತ್ತಿಯೊಂದಿಗೆ ಜೈಲಿಗೆ ಬಂದ ತಂದೆ-ತಾಯಿ, ಸಹೋದರ
 ಪವಿತ್ರಾ ಗೌಡರನ್ನು ನೋಡಲು ಬುತ್ತಿಯೊಂದಿಗೆ ಜೈಲಿಗೆ ಬಂದ ತಂದೆ-ತಾಯಿ, ಸಹೋದರ
ವಿದ್ಯಾರ್ಥಿಗಳ ನಡುವೆಯೂ  ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಕಷ್ಟು ಜನಪ್ರಿಯರು
ವಿದ್ಯಾರ್ಥಿಗಳ ನಡುವೆಯೂ  ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಕಷ್ಟು ಜನಪ್ರಿಯರು
 ದುಡ್ಡಿನ ವಿಷಯದಲ್ಲಿ ದರ್ಶನ್ ಕಡ್ಡಿ ಮುರಿದಂತೆ ಮಾತಾಡುತ್ತಿದ್ದರು: ಕೆ ಮಂಜು
 ದುಡ್ಡಿನ ವಿಷಯದಲ್ಲಿ ದರ್ಶನ್ ಕಡ್ಡಿ ಮುರಿದಂತೆ ಮಾತಾಡುತ್ತಿದ್ದರು: ಕೆ ಮಂಜು
ಲೂಟಿ ಹೋಡೆಯೋಕೆ ಸರ್ಕಾರ ಸಿದ್ಧತೆ ಮಾಡ್ತಿದೆ -ಆರ್.ಅಶೋಕ್
ಲೂಟಿ ಹೋಡೆಯೋಕೆ ಸರ್ಕಾರ ಸಿದ್ಧತೆ ಮಾಡ್ತಿದೆ -ಆರ್.ಅಶೋಕ್
ಏಯ್ ಅಂದ ಬಿಜೆಪಿ ಶಾಸಕ ವೇದವ್ಯಾಸ್ ಕಾಮತ್ ಜೊತೆ ಜಗಳಕ್ಕೆ ನಿಂತ ಪೊಲೀಸ್!
ಏಯ್ ಅಂದ ಬಿಜೆಪಿ ಶಾಸಕ ವೇದವ್ಯಾಸ್ ಕಾಮತ್ ಜೊತೆ ಜಗಳಕ್ಕೆ ನಿಂತ ಪೊಲೀಸ್!
ವಿದ್ಯಾರ್ಥಿಗಳೊಂದಿಗೆ ಕುಣಿದು ಕುಪ್ಪಳಿಸಿದ ಶಾಸಕ ಸಮೃದ್ದಿ ಮಂಜುನಾಥ್
ವಿದ್ಯಾರ್ಥಿಗಳೊಂದಿಗೆ ಕುಣಿದು ಕುಪ್ಪಳಿಸಿದ ಶಾಸಕ ಸಮೃದ್ದಿ ಮಂಜುನಾಥ್
ರಾಷ್ಟ್ರಪತಿ ಭಾಷಣದ ವಂದನಾ ನಿರ್ಣಯದ ಮೇಲೆ ರಾಜ್ಯಸಭೆಯಲ್ಲಿ ಮೋದಿ ಮಾತು
ರಾಷ್ಟ್ರಪತಿ ಭಾಷಣದ ವಂದನಾ ನಿರ್ಣಯದ ಮೇಲೆ ರಾಜ್ಯಸಭೆಯಲ್ಲಿ ಮೋದಿ ಮಾತು
ಮುಡಾ ಹಗರಣದ ಕಡತಗಳನ್ನು ಸಚಿವ ಸುರೇಶ್ ಬೆಂಗಳೂರುಗೆ ತಂದಿದ್ದಾರೆ: ವಿಜಯೇಂದ್ರ
ಮುಡಾ ಹಗರಣದ ಕಡತಗಳನ್ನು ಸಚಿವ ಸುರೇಶ್ ಬೆಂಗಳೂರುಗೆ ತಂದಿದ್ದಾರೆ: ವಿಜಯೇಂದ್ರ
ಉಡುಪಿ: ಬೈಕ್​ನ ಹೆಡ್ ಲೈಟ್ ವೈಸರ್​ನಲ್ಲಿ ಹಾವು ಪ್ರತ್ಯಕ್ಷ
ಉಡುಪಿ: ಬೈಕ್​ನ ಹೆಡ್ ಲೈಟ್ ವೈಸರ್​ನಲ್ಲಿ ಹಾವು ಪ್ರತ್ಯಕ್ಷ