AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಧರ್ಮಸ್ಥಳ ಪ್ರಕರಣ: 2ನೇ ದಿನವೂ ಶವಗಳಿಗಾಗಿ ಮುಂದುವರಿದ ಶೋಧ, ಇಲ್ಲಿಯವರೆಗೂ ಸಿಗದ ಕುರುಹು

ಧರ್ಮಸ್ಥಳ ಪ್ರಕರಣ: 2ನೇ ದಿನವೂ ಶವಗಳಿಗಾಗಿ ಮುಂದುವರಿದ ಶೋಧ, ಇಲ್ಲಿಯವರೆಗೂ ಸಿಗದ ಕುರುಹು

ರಮೇಶ್ ಬಿ. ಜವಳಗೇರಾ
|

Updated on:Jul 30, 2025 | 4:03 PM

Share

ಧರ್ಮಸ್ಥಳದಲ್ಲಿ ನೂರಾರು ಶವ ಹೂತಿದ್ದಾಗಿ ತಪ್ಪೊಪ್ಪಿಗೆ ಪ್ರಕರಣ‌ಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ದಳ (ಎಸ್‌ಐಟಿ) ತನಿಖೆಯನ್ನು ತೀವ್ರಗೊಳಿಸಿದ್ದು, ನೇತ್ರಾವತಿ ಸ್ನಾನಘಟ್ಟದ ಬಳಿಯ ಅರಣ್ಯದಲ್ಲಿ ಉತ್ಖನನ ಕಾರ್ಯ ಮುಂದುವರಿಸಿದ್ದಾರೆ. ಆದ್ರೆ, ವ್ಯಕ್ತಿ ತೋರಿಸಿದ್ದ ಮೊದಲ ಪಾಯಿಂಟ್​ ನಲ್ಲಿ ನಿನ್ನೆ ಏನು ಸಿಕ್ಕಿರಲಿಲ್ಲ. ಇಂದು 2ನೇ ದಿನವೂ ಸಹ ಕಾರ್ಯಚರಣೆ ನಡೆಸಿದ್ದು, ಇಂದೂ ಸಹ 2 ಹಾಗೂ ಮೂರನೇ ಪಾಯಿಂಟ್​ ನಲ್ಲೂ ಸಹ ಅಗೆದು ನೋಡಿದ್ರೆ ಯಾವುದೇ ಕುರುಹುಗಳು ಸಿಕ್ಕಿಲ್ಲ.

ಮಂಗಳೂರು, (ಜುಲೈ 30): ಧರ್ಮಸ್ಥಳದಲ್ಲಿ ನೂರಾರು ಶವ ಹೂತಿದ್ದಾಗಿ ತಪ್ಪೊಪ್ಪಿಗೆ ಪ್ರಕರಣ‌ಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ದಳ (ಎಸ್‌ಐಟಿ) ತನಿಖೆಯನ್ನು ತೀವ್ರಗೊಳಿಸಿದ್ದು, ನೇತ್ರಾವತಿ ಸ್ನಾನಘಟ್ಟದ ಬಳಿಯ ಅರಣ್ಯದಲ್ಲಿ ಉತ್ಖನನ ಕಾರ್ಯ ಮುಂದುವರಿಸಿದ್ದಾರೆ. ಆದ್ರೆ, ವ್ಯಕ್ತಿ ತೋರಿಸಿದ್ದ ಮೊದಲ ಪಾಯಿಂಟ್​ ನಲ್ಲಿ ನಿನ್ನೆ ಏನು ಸಿಕ್ಕಿರಲಿಲ್ಲ. ಇಂದು 2ನೇ ದಿನವೂ ಸಹ ಕಾರ್ಯಚರಣೆ ನಡೆಸಿದ್ದು, ಇಂದೂ ಸಹ 2 ಹಾಗೂ ಮೂರನೇ ಪಾಯಿಂಟ್​ ನಲ್ಲೂ ಸಹ ಅಗೆದು ನೋಡಿದ್ರೆ ಯಾವುದೇ ಕುರುಹುಗಳು ಸಿಕ್ಕಿಲ್ಲ. 6 ಅಡಿ ಅಳ-ಅಗಲ ಅಗೆದರೂ ಸಹ ಎರಡನೇ ಸ್ಥಳದಲ್ಲೂ ಅಸ್ಥಿಪಂಜರ ಪತ್ತೆಯಾಗಿಲ್ಲ. ಅಲ್ಲದೇ ವ್ಯಕ್ತಿ ತೋರಿಸಿದ ಮೂರನೇ ಸ್ಥಳವನ್ನು ಸಹ 20‌ ಮಂದಿ‌ ಕಾರ್ಮಿಕರು ಭೂಮಿ ಅಗೆದು ನೋಡಿದ್ರೆ ಏನು ಪತ್ತೆಯಾಗಿಲ್ಲ. ಹೀಗಾಗಿ ಇದೀಗ 4ನೇ ಸ್ಥಳದಲ್ಲಿ ಶೋಧಾ ಕಾರ್ಯ ಮುಂದುವರೆದಿದೆ.

Published on: Jul 30, 2025 04:00 PM

Follow Us
Ramesh B Jawalagera
Ramesh B Jawalagera

ಟಿವಿ9 ಕನ್ನಡದಲ್ಲಿ ಹಿರಿಯ ಉಪ ಸಂಪಾದಕ. ಕಳೆದ 07 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದದ್ದು, ರಾಯಚೂರು ಜಿಲ್ಲೆಯ ಸಿಂಧನೂರಿನ ಜವಳಗೇರಾದಲ್ಲಿ. ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದೇನೆ. ನನ್ನ ವೃತ್ತಿ ಆರಂಭವಾಗಿದ್ದೇ ಡಿಜಿಟಲ್​ ಮಾಧ್ಯಮದಿಂದ. ಒನ್​ ಇಂಡಿಯಾ ಕನ್ನಡ, ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಕೆಲಸ ಮಾಡಿದ್ದೇನೆ. ಕ್ರೈಂ, ರಾಜಕೀಯ ಹಾಗೂ ಪ್ರಚಲಿತ ಸುದ್ದಿ ಬಗ್ಗೆ ಆಸಕ್ತಿ. ಪ್ರವಾಸ ಮಾಡುವುದು, ಸಂಗೀತ ಕೇಳುವುದು ನನ್ನ ಹವ್ಯಾಸಗಳು.

Read More