AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಧರ್ಮಸ್ಥಳ ಪ್ರಕರಣ: 2ನೇ ದಿನವೂ ಶವಗಳಿಗಾಗಿ ಮುಂದುವರಿದ ಶೋಧ, ಇಲ್ಲಿಯವರೆಗೂ ಸಿಗದ ಕುರುಹು

ಧರ್ಮಸ್ಥಳ ಪ್ರಕರಣ: 2ನೇ ದಿನವೂ ಶವಗಳಿಗಾಗಿ ಮುಂದುವರಿದ ಶೋಧ, ಇಲ್ಲಿಯವರೆಗೂ ಸಿಗದ ಕುರುಹು

ರಮೇಶ್ ಬಿ. ಜವಳಗೇರಾ
|

Updated on:Jul 30, 2025 | 4:03 PM

Share

ಧರ್ಮಸ್ಥಳದಲ್ಲಿ ನೂರಾರು ಶವ ಹೂತಿದ್ದಾಗಿ ತಪ್ಪೊಪ್ಪಿಗೆ ಪ್ರಕರಣ‌ಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ದಳ (ಎಸ್‌ಐಟಿ) ತನಿಖೆಯನ್ನು ತೀವ್ರಗೊಳಿಸಿದ್ದು, ನೇತ್ರಾವತಿ ಸ್ನಾನಘಟ್ಟದ ಬಳಿಯ ಅರಣ್ಯದಲ್ಲಿ ಉತ್ಖನನ ಕಾರ್ಯ ಮುಂದುವರಿಸಿದ್ದಾರೆ. ಆದ್ರೆ, ವ್ಯಕ್ತಿ ತೋರಿಸಿದ್ದ ಮೊದಲ ಪಾಯಿಂಟ್​ ನಲ್ಲಿ ನಿನ್ನೆ ಏನು ಸಿಕ್ಕಿರಲಿಲ್ಲ. ಇಂದು 2ನೇ ದಿನವೂ ಸಹ ಕಾರ್ಯಚರಣೆ ನಡೆಸಿದ್ದು, ಇಂದೂ ಸಹ 2 ಹಾಗೂ ಮೂರನೇ ಪಾಯಿಂಟ್​ ನಲ್ಲೂ ಸಹ ಅಗೆದು ನೋಡಿದ್ರೆ ಯಾವುದೇ ಕುರುಹುಗಳು ಸಿಕ್ಕಿಲ್ಲ.

ಮಂಗಳೂರು, (ಜುಲೈ 30): ಧರ್ಮಸ್ಥಳದಲ್ಲಿ ನೂರಾರು ಶವ ಹೂತಿದ್ದಾಗಿ ತಪ್ಪೊಪ್ಪಿಗೆ ಪ್ರಕರಣ‌ಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ದಳ (ಎಸ್‌ಐಟಿ) ತನಿಖೆಯನ್ನು ತೀವ್ರಗೊಳಿಸಿದ್ದು, ನೇತ್ರಾವತಿ ಸ್ನಾನಘಟ್ಟದ ಬಳಿಯ ಅರಣ್ಯದಲ್ಲಿ ಉತ್ಖನನ ಕಾರ್ಯ ಮುಂದುವರಿಸಿದ್ದಾರೆ. ಆದ್ರೆ, ವ್ಯಕ್ತಿ ತೋರಿಸಿದ್ದ ಮೊದಲ ಪಾಯಿಂಟ್​ ನಲ್ಲಿ ನಿನ್ನೆ ಏನು ಸಿಕ್ಕಿರಲಿಲ್ಲ. ಇಂದು 2ನೇ ದಿನವೂ ಸಹ ಕಾರ್ಯಚರಣೆ ನಡೆಸಿದ್ದು, ಇಂದೂ ಸಹ 2 ಹಾಗೂ ಮೂರನೇ ಪಾಯಿಂಟ್​ ನಲ್ಲೂ ಸಹ ಅಗೆದು ನೋಡಿದ್ರೆ ಯಾವುದೇ ಕುರುಹುಗಳು ಸಿಕ್ಕಿಲ್ಲ. 6 ಅಡಿ ಅಳ-ಅಗಲ ಅಗೆದರೂ ಸಹ ಎರಡನೇ ಸ್ಥಳದಲ್ಲೂ ಅಸ್ಥಿಪಂಜರ ಪತ್ತೆಯಾಗಿಲ್ಲ. ಅಲ್ಲದೇ ವ್ಯಕ್ತಿ ತೋರಿಸಿದ ಮೂರನೇ ಸ್ಥಳವನ್ನು ಸಹ 20‌ ಮಂದಿ‌ ಕಾರ್ಮಿಕರು ಭೂಮಿ ಅಗೆದು ನೋಡಿದ್ರೆ ಏನು ಪತ್ತೆಯಾಗಿಲ್ಲ. ಹೀಗಾಗಿ ಇದೀಗ 4ನೇ ಸ್ಥಳದಲ್ಲಿ ಶೋಧಾ ಕಾರ್ಯ ಮುಂದುವರೆದಿದೆ.

Published on: Jul 30, 2025 04:00 PM