ಧರ್ಮಸ್ಥಳ ಪ್ರಕರಣಕ್ಕೆ ಮತ್ತೊಂದು ಸ್ಫೋಟಕ ತಿರುವು: ಬಂಗ್ಲೆಗುಡ್ಡ ಬಳಿ ಮೂಳೆಗಳು ಪತ್ತೆ
ಎಲ್ಲವೂ ಮುಗಿದೋಯ್ತು ಅಂದುಕೊಂಡಾಗಲೇ ಹೊಸ ಅದ್ಯಾಯ ಶುರುವಾಗಿದೆ. ಧರ್ಮಸ್ಥಳದ ಬುರುಡೆ ಮತ್ತು ಅಸ್ಥಿಪಂಜರ ಶೋಧ ಪ್ರಕರಣ ಹೊಸ ದಿಕ್ಕಿಗೆ ಬಂದು ನಿಂತಿದೆ. ಯಾವ ಸ್ಥಳದಲ್ಲಿ 17 ಗುಂಡಿ ತೋಡಿ ಏನು ಸಿಗದೇ ಇದ್ದಾಗ ವಿಚಾರಣೆ ಆರಂಭಿಸಿತ್ತು. ಇದೀಗ ಅದೇ ಎಸ್ಐಟಿ ಮತ್ತೆ ಬಂಗ್ಲೆಗುಡ್ಡದ ಕಾಡಿಗೆ ಬಂದು ನಿಂತಿದೆ. ಶವಗಳ ಶೋಧಕ್ಕೆ ಸೆಕೆಂಡ್ ಇನ್ನಿಂಗ್ಸ್ ಶುರುಮಾಡಿದ್ದು, ಈ ವೇಳೆ ಮೂಳೆಗಳು ಪತ್ತೆಯಾಗಿವೆ.
ಮಂಗಳೂರು, (ಸೆಪ್ಟೆಂಬರ್ 17): ಎಲ್ಲವೂ ಮುಗಿದೋಯ್ತು ಅಂದುಕೊಂಡಾಗಲೇ ಹೊಸ ಅದ್ಯಾಯ ಶುರುವಾಗಿದೆ. ಧರ್ಮಸ್ಥಳದ ಬುರುಡೆ ಮತ್ತು ಅಸ್ಥಿಪಂಜರ ಶೋಧ ಪ್ರಕರಣ ಹೊಸ ದಿಕ್ಕಿಗೆ ಬಂದು ನಿಂತಿದೆ. ಯಾವ ಸ್ಥಳದಲ್ಲಿ 17 ಗುಂಡಿ ತೋಡಿ ಏನು ಸಿಗದೇ ಇದ್ದಾಗ ವಿಚಾರಣೆ ಆರಂಭಿಸಿತ್ತು. ಇದೀಗ ಅದೇ ಎಸ್ಐಟಿ ಮತ್ತೆ ಬಂಗ್ಲೆಗುಡ್ಡದ ಕಾಡಿಗೆ ಬಂದು ನಿಂತಿದೆ. ಶವಗಳ ಶೋಧಕ್ಕೆ ಸೆಕೆಂಡ್ ಇನ್ನಿಂಗ್ಸ್ ಶುರುಮಾಡಿದ್ದು, ಈ ವೇಳೆ ಮೂಳೆಗಳು ಪತ್ತೆಯಾಗಿವೆ.
ಹೌದು.. ಎಸ್ಐಟಿ ಶೋಧದ ವೇಳೆ ಅಲ್ಪಸ್ವಲ್ಪ ಮೂಳೆಗಳು ಪತ್ತೆಯಾಗಿವೆ. ಸೋಕೋ ತಂಡ ಮೂಳೆ ಪತ್ತೆಯಾದ ಭಾಗದ ಮಣ್ಣಿನ ಸ್ಯಾಂಪಲ್ ಪಡೆದಿದ್ದು, ಈ ಜಾಗವನ್ನ ಎಸ್ಐಟಿ ಮಹಜರು ಮಾಡುತ್ತಿದೆ. ಭೂಮಿಯ ಮೇಲ್ಭಾಗದಲ್ಲಿದ್ದ ಬಟ್ಟೆ ತುಂಡುಗಳು ಕೂಡ ಸಿಕ್ಕಿವೆ. ವಿಠ್ಠಲ್ಗೌಡನ ಹೇಳಿಕೆ, ಮೂಳೆ ಸಿಕ್ಕಿರೋ ಬೆಳವಣಿಗೆ ಪ್ರಕರಣದ ಕುತೂಹಲ ಹೆಚ್ಚಿಸಿದೆ.
Loading...
Unable to load recommendations.
Follow Us
