ನಿಮ್ಮ ಪ್ರೀತಿಯನ್ನು ಮಂಜುನಾಥಸ್ವಾಮಿಗೆ ಒಪ್ಪಿಸುತ್ತೇನೆ: ಧರ್ಮಸ್ಥಳ ಕೇಸ್ ಬಗ್ಗೆ ವೀರೇಂದ್ರ ಹೆಗ್ಗಡೆ ಮೊದಲ ಮಾತು
ಶ್ರೀಕ್ಷೇತ್ರ ಧರ್ಮಸ್ಥಳ ವಿರುದ್ಧ ಅಪಪ್ರಚಾರ ಆರೋಪ ಪ್ರಕರಣ ಸಂಬಂಧ ದಿನಕ್ಕೊಂದು ಬೆಳವಣಿಗಳು ನಡೆಯುತ್ತಿವೆ. ಈ ಸಂಬಂಧ ಬಿಜೆಪಿ ಧರ್ಮಸ್ಥಳ ಪರವಾಗಿ ನಿಂತಿದ್ದು, ಇಂದು (ಆಗಸ್ಟ್ 25) ಬಿಜೆಪಿ ನಿಯೋಗ ಧರ್ಮಸ್ಥಳಕ್ಕೆ ತೆರಳಿ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಿದರು. ಈ ವೇಳೆ ಭಕ್ತರನ್ನು ಉದ್ದೇಶಿಸಿ ಮಾತನಾಡಿದ ವಿರೇಂದ್ರ ಹೆಗ್ಗಡೆ, ಮನಸಾರೆ ಗೌರವ ಸೂಚಿಸುವವರು ಇದ್ದೀರಿ. ಕ್ಷೇತ್ರದ ಮೇಲಿನ ಗೌರವದಿಂದ ಬಹಳಷ್ಟು ಜನರು ಬಂದಿದ್ದೀರಿ. ಅದನ್ನು ಹೊರಲು ನನ್ನಿಂದ ಸಾಧ್ಯವಿಲ್ಲ. ನಿಮ್ಮ ಪ್ರೀತಿಯನ್ನು ಮಂಜುನಾಥಸ್ವಾಮಿಗೆ ಒಪ್ಪಿಸುತ್ತೇನೆ. ಸೂಕ್ತ ಸಮಯ ಬಂದಾಗ ಹೆಚ್ಚಿನ ವಿಚಾರ ಮಾತನಾಡುತ್ತೇನೆ ಎಂದರು.
ಮಂಗಳೂರು, (ಆಗಸ್ಟ್ 25): ಶ್ರೀಕ್ಷೇತ್ರ ಧರ್ಮಸ್ಥಳ ವಿರುದ್ಧ ಅಪಪ್ರಚಾರ ಆರೋಪ ಪ್ರಕರಣ ಸಂಬಂಧ ದಿನಕ್ಕೊಂದು ಬೆಳವಣಿಗಳು ನಡೆಯುತ್ತಿವೆ. ಈ ಸಂಬಂಧ ಬಿಜೆಪಿ ಧರ್ಮಸ್ಥಳ ಪರವಾಗಿ ನಿಂತಿದ್ದು, ಇಂದು (ಆಗಸ್ಟ್ 25) ಬಿಜೆಪಿ ನಿಯೋಗ ಧರ್ಮಸ್ಥಳಕ್ಕೆ ತೆರಳಿ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಿದರು. ಈ ವೇಳೆ ಭಕ್ತರನ್ನು ಉದ್ದೇಶಿಸಿ ಮಾತನಾಡಿದ ವಿರೇಂದ್ರ ಹೆಗ್ಗಡೆ, ಮನಸಾರೆ ಗೌರವ ಸೂಚಿಸುವವರು ಇದ್ದೀರಿ. ಕ್ಷೇತ್ರದ ಮೇಲಿನ ಗೌರವದಿಂದ ಬಹಳಷ್ಟು ಜನರು ಬಂದಿದ್ದೀರಿ. ಅದನ್ನು ಹೊರಲು ನನ್ನಿಂದ ಸಾಧ್ಯವಿಲ್ಲ. ನಿಮ್ಮ ಪ್ರೀತಿಯನ್ನು ಮಂಜುನಾಥಸ್ವಾಮಿಗೆ ಒಪ್ಪಿಸುತ್ತೇನೆ. ಸೂಕ್ತ ಸಮಯ ಬಂದಾಗ ಹೆಚ್ಚಿನ ವಿಚಾರ ಮಾತನಾಡುತ್ತೇನೆ ಎಂದರು.
Loading...
Unable to load recommendations.
Follow Us
