ರಕ್ಷಿತಾ ಭಾಷೆ ಬಗ್ಗೆ ಧ್ರುವಂತ ಮತ್ತೆ ಅಪಸ್ವರ; ಸುದೀಪ್ ಹೇಳಿದ್ದು ಮರೆತೇಹೋಯ್ತಾ?
ಈ ವಾರದ ನಾಮಿನೇಷನ್ ವಿಚಾರ ಮತ್ತೆ ಚರ್ಚೆಗೆ ಬಂದಿದೆ. ರಕ್ಷಿತಾ ಶೆಟ್ಟಿ ಹಾಗೂ ಗಿಲ್ಲಿ ನಟನ ಧ್ರುವಂತ್ ಅವರು ನಾಮಿನೇಟ್ ಮಾಡಿದ್ದಾರೆ. ಇದಕ್ಕೆ ಅವರು ತೆಗೆದುಕೊಂಡ ಕಾರಣಗಳು ಬೇರೆ ಬೇರೆ. ಹಾಗಾದರೆ ಅವರು ನೀಡಿದ ಕಾರಣಗಳು ಏನು? ಆ ಬಗ್ಗೆ ಇಲ್ಲಿದೆ ವಿವರ.
ಧ್ರುವಂತ್ ಅವರು ಕಳೆದ ವಾರ ರಕ್ಷಿತಾ ಶೆಟ್ಟಿ ಭಾಷೆ ಬಗ್ಗೆ ಟೀಕೆ ಮಾಡಿದ್ದರು. ಆದರೆ, ಸುದೀಪ್ ಅವರು ರಕ್ಷಿತಾನ ಬೆಂಬಲಿಸಿದ್ದರು. ‘ಈ ಭಾಷೆ ನಮಗೆ ಓಕೆ’ ಎಂದಿದ್ದರು ಸುದೀಪ್. ಇದನ್ನು ಧ್ರುವಂತ್ ಅವರು ಕಿವಿಮೇಲೆ ಹಾಕಿಕೊಂಡಂತೆ ಇಲ್ಲ. ಈ ವಾರ ನಾಮಿನೇಟ್ ಮಾಡುವಾಗ ಮತ್ತೆ ಅದೇ ವಿಚಾರ ಇಟ್ಟುಕೊಂಡು ನಾಮಿನೇಟ್ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

