ಚಿತ್ರದುರ್ಗ ಜಿಲ್ಲೆಯ ಹಳ್ಳಿಯೊಂದರಿಂದ ಜಿಲ್ಲಾಸ್ಪತ್ರೆಗೆ ಡಯಾಲಿಸಿಸ್ ಗೆ (dialysis) ಬಂದಿರುವ ಈ ಹಿರಿಯ ನಾಯಕರು (senior citizen) ಪಡುತ್ತಿರುವ ಪಡಿಪಾಟಲು ಕೇಳುತ್ತಿದ್ದರೆ ಬೇಜಾರುಗುತ್ತದೆ ಮಾರಾಯ್ರೇ. ಆಸ್ಪತ್ರೆ ಡಯಾಲಿಸಿಸ್ ವಿಭಾಗದ ಸಿಬ್ಬಂದಿ ವಿವಿಧ ಬೇಡಿಕಗಳನ್ನು ಆಗ್ರಹಿಸಿ ಮುಷ್ಕರ (protest) ನಡೆಸುತ್ತಿರುವುದರಿಂದ ಡಯಾಲಿಸಿಸ್ ಗೆ ಬಂದವರು ಅತಂತ್ರರಾಗಿದ್ದಾರೆ. ಸರ್ಕಾರ ಡಯಾಲಿಸಿಸ್ ಕೇಂದ್ರಗಳನ್ನು ಖಾಸಗಿಯವರಿಗೆ ಒಪ್ಪಿಸಿದ ಬಳಿಕ ಈ ಪ್ರಕ್ರಿಯೆಗೆ ಪ್ರತಿರೋಗಿಯಿಂದ ಕನಿಷ್ಟ ರೂ. 5,000 ಖರ್ಚಾಗುತ್ತಿದೆ ಎಂದು ಹಿರಿಯ ನಾಗರಿಕರು ಹೇಳುತ್ತಿದ್ದಾರೆ. ಗಂಜಿ ಕುಡಿದು ಬದುಕುವ ನಾವು ರೂ. 5,000 ಎಲ್ಲಿಂದ ತರಬೇಕು ಅಂತ ಅವರು ಕೇಳುತ್ತಾರೆ. ಅವರಿಗೆ ಪರ್ಯಯ ವ್ಯವಸ್ಥೆ ಕಲ್ಪಿಸಬೇಕಿದೆ, ಆದರೆ ಮೊರೆ ಯಾರಿಗಿಡಬೇಕು?