ವಂಚನೆ ಆರೋಪ, ಸ್ಪಷ್ಟನೆ ನೀಡಿದ ನಿರ್ದೇಶಕ ಓಂ ಪ್ರಕಾಶ್ ರಾವ್

Updated on: Aug 22, 2026 | 6:31 PM

ತಮ್ಮ ಮೇಲಿನ ವಂಚನೆ ಆರೋಪಕ್ಕೆ ಟಿವಿ9ಗೆ ಸ್ಪಷ್ಟನೆ ನೀಡಿರುವ ಓಂ ಪ್ರಕಾಶ್ ರಾವ್, ‘ನಾನು ಯಾರಿಗೂ ಧಮ್ಕಿ ಹಾಕಿಲ್ಲ, ಸಿನಿಮಾ ಮಾಡೋದು ತಡ ಆಗಿರುವ ಕಾರಣ ಬೇಸರ ಮಾಡಿಕೊಂಡು ಈ ರೀತಿ ಮಾತನಾಡಿದ್ದಾರೆ. ಆ ಸಿನಿಮಾದಲ್ಲಿ ಭಾಸ್ಕರ್ ಶೆಟ್ಟಿ ಕೂಡ ನಟಿಸಿದ್ದಾರೆ. ಅವರನ್ನು ಹೀರೋ ಅಂತಾ ಪ್ರಮೋಟ್ ಮಾಡಿಲ್ಲ ಅನ್ನೋದಕ್ಕೆ ಈ ರೀತಿ ಆರೋಪ ಮಾಡಿದ್ದಾರೆ. ಇನ್ನೂ 5 ದಿನಗಳ ಶೂಟಿಂಗ್ ಬಾಕಿಯಿದೆ. ಅವರು ಫೈನಾನ್ಸ್ ಕೊಡ್ಸಿದ್ದಾರೆ ಹೊರತು. ಅವರಿಂದದ ಅಷ್ಟು ದುಡ್ಡು ಪಡೆದಿಲ್ಲ. ಈಗ ನನ್ನ ಮೇಲೆ ಸುಮ್ಮನೆ ಅಪಪ್ರಚಾರ ಮಾಡುತ್ತಿದ್ದಾರೆ’ ಎಂದಿದ್ದಾರೆ ರಾವ್.

ನಿರ್ದೇಶಕ ಓಂ ಪ್ರಕಾಶ್ ರಾವ್ (Om Prakash Rao) ವಿರುದ್ಧ ಹಣಕಾಸು ವಂಚನೆ ಆರೋಪ ಕೇಳಿ ಬಂದಿದೆ. ಫಿನಿಕ್ಸ್’ ಎಂಬ ಸಿನಿಮಾ ನಿರ್ಮಾಣ ಮಾಡುವುದಾಗಿ ಹೇಳಿ ಓಂ ಪ್ರಕಾಶ್ ರಾವ್ ಅವರು ಭಾಸ್ಕರ್ ಶೆಟ್ಟಿ ಅವರಿಂದ ಒಟ್ಟು 3 ಕೋಟಿ 85 ಲಕ್ಷ ರೂಪಾಯಿಗಳನ್ನು ಪಡೆದುಕೊಂಡಿದ್ದರು ಎನ್ನಲಾಗಿದೆ. ಇದೀಗ ಹಣಕೊಟ್ಟಿರುವ ಭಾಸ್ಕರ್ ಶೆಟ್ಟಿ ದೂರು ದಾಖಲಿಸಿದ್ದಾರೆ. ತಮ್ಮ ಮೇಲಿನ ವಂಚನೆ ಆರೋಪಕ್ಕೆ ಟಿವಿ9ಗೆ ಸ್ಪಷ್ಟನೆ ನೀಡಿರುವ ಓಂ ಪ್ರಕಾಶ್ ರಾವ್, ‘ನಾನು ಯಾರಿಗೂ ಧಮ್ಕಿ ಹಾಕಿಲ್ಲ, ಸಿನಿಮಾ ಮಾಡೋದು ತಡ ಆಗಿರುವ ಕಾರಣ ಬೇಸರ ಮಾಡಿಕೊಂಡು ಈ ರೀತಿ ಮಾತನಾಡಿದ್ದಾರೆ. ಆ ಸಿನಿಮಾದಲ್ಲಿ ಭಾಸ್ಕರ್ ಶೆಟ್ಟಿ ಕೂಡ ನಟಿಸಿದ್ದಾರೆ. ಅವರನ್ನು ಹೀರೋ ಅಂತಾ ಪ್ರಮೋಟ್ ಮಾಡಿಲ್ಲ ಅನ್ನೋದಕ್ಕೆ ಈ ರೀತಿ ಆರೋಪ ಮಾಡಿದ್ದಾರೆ. ಇನ್ನೂ 5 ದಿನಗಳ ಶೂಟಿಂಗ್ ಬಾಕಿಯಿದೆ. ಅವರು ಫೈನಾನ್ಸ್ ಕೊಡ್ಸಿದ್ದಾರೆ ಹೊರತು. ಅವರಿಂದದ ಅಷ್ಟು ದುಡ್ಡು ಪಡೆದಿಲ್ಲ. ಈಗ ನನ್ನ ಮೇಲೆ ಸುಮ್ಮನೆ ಅಪಪ್ರಚಾರ ಮಾಡುತ್ತಿದ್ದಾರೆ’ ಎಂದಿದ್ದಾರೆ ರಾವ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Loading...
Unable to load recommendations.
Follow Us