ದರ್ಶನ್ ಪ್ರಕರಣದ ಬಗ್ಗೆ ಹಳೆ ಗೆಳೆಯ ಓಂ ಪ್ರಕಾಶ್ ರಾವ್ ಮಾತು
ದರ್ಶನ್ ತೂಗುದೀಪ ಜೊತೆಗೆ ಈ ಹಿಂದೆ ಸಿನಿಮಾ ಮಾಡಿ ಬಾಂಧವ್ಯ ಹೊಂದಿದ್ದ ಓಂ ಪ್ರಕಾಶ್ ರಾವ್ ಆ ನಂತರ ಪರಸ್ಪರ ದೂರಾಗಿದ್ದರು. ಇದೀಗ ದರ್ಶನ್ ಕೊಲೆ ಆರೋಪದಲ್ಲಿ ಜೈಲು ಸೇರಿರುವ ಸಂದರ್ಭದಲ್ಲಿ ಓಂ ಪ್ರಕಾಶ್, ದರ್ಶನ್ ಕುರಿತು ಮಾತನಾಡಿದ್ದಾರೆ.
ರೇಣುಕಾ ಸ್ವಾಮಿ (Renuka Swamy) ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ಜೈಲು ಸೇರಿರುವ ನಟ ದರ್ಶನ್ ಕುರಿತು ಹಲವರು ತಮ್ಮ ತಮ್ಮ ಅಭಿಪ್ರಾಯಗಳನ್ನು ಹೊರಹಾಕುತ್ತಿದ್ದಾರೆ. ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ, ನಟ, ನಿರ್ಮಾಪಕರೂ ಆಗಿರುವ ಓಂ ಪ್ರಕಾಶ್ ರಾವ್ ಈ ಹಿಂದೆ ದರ್ಶನ್ ಜೊತೆ ಸಿನಿಮಾ ಮಾಡಿದ್ದು, ಆ ನಂತರ ಕೆಲವು ಕಾರಣಗಳಿಗಾಗಿ ಪರಸ್ಪರ ದೂರಾದರು. ಇದೀಗ ದರ್ಶನ್ ಕೊಲೆ ಆರೋಪಿಯಾಗಿ ಜೈಲು ಸೇರಿರುವ ಕಾರಣ ಓಂ ಪ್ರಕಾಶ್ ರಾವ್, ನಟ ದರ್ಶನ್ ಕುರಿತಾಗಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಒಳ್ಳೆಯ ಸಿನಿಮಾಗಳು, ಅಭಿಮಾನಿಗಳು, ಕುಟುಂಬ ಎಲ್ಲವನ್ನೂ ಹೊಂದಿದ್ದ ದರ್ಶನ್ಗೆ ಇದು ಬೇಕಿರಲಿಲ್ಲ ಎಂದಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Loading...
Unable to load recommendations.
Follow Us
