ಕಬ್ಜ ಸಿನಿಮಾ ಆಗಲು ಮುಖ್ಯ ಕಾರಣ ಯಾರು? ಬಹಿರಂಗಪಡಿಸಿದ ನಿರ್ದೇಶಕ ಆರ್.ಚಂದ್ರು
ಕಬ್ಜ ಸಿನಿಮಾ ಇನ್ನೆರಡು ದಿನಗಳಲ್ಲಿ ಬಿಡುಗಡೆ ಆಗಲಿದೆ. ಈ ಸಿನಿಮಾ ನಿರ್ಮಾಣದ ಹಿಂದೆ ಇರುವ ಶಕ್ತಿಯನ್ನು ನಿರ್ದೇಶಕ ಆರ್ ಚಂದ್ರು ಪರಿಚಯಿಸಿದ್ದಾರೆ.
ಆರ್.ಚಂದ್ರು(R Chandr) ನಿರ್ದೇಶನದ ಕಬ್ಜ (Kabzaa) ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಉಪೇಂದ್ರ (Upendra), ಸುದೀಪ್, ಶಿವರಾಜ್ ಕುಮಾರ್ ನಟಿಸಿರುವ ಈ ಸಿನಿಮಾದ ಬಗ್ಗೆ ದೊಡ್ಡ ನಿರೀಕ್ಷೆ ಇದೆ. ಕೆಜಿಎಫ್ ಮಾದರಿಯಲ್ಲಿಯೇ ಅದ್ಧೂರಿಯಾಗಿ ಈ ಸಿನಿಮಾವನ್ನು ತೆರೆಗೆ ತಂದಿದ್ದಾರೆ ಆರ್.ಚಂದ್ರು. ಭಾರಿ ಬಜೆಟ್ನ ಈ ಸಿನಿಮಾ ಆಗಲು ನಟರಾದ ಸುದೀಪ್, ಉಪೇಂದ್ರ, ಶಿವರಾಜ್ ಕುಮಾರ್ ಜೊತೆಗೆ ಮತ್ತೊಬ್ಬರು ಬಹಳ ಮುಖ್ಯಪಾತ್ರವಹಿಸಿದ್ದಾರೆ ಎಂದ ಚಂದ್ರು, ನಾನು ಕಷ್ಟದಲ್ಲಿದ್ದಾಗ ನನಗೆ ಮೈಲಾರಿ ಸಿನಿಮಾ ಕೊಟ್ಟ ಕೆ.ಪಿ.ಶ್ರೀಕಾಂತ್ ಅವರೇ ಈಗ ಕಬ್ಜ ಸಿನಿಮಾ ಆಗಲು ಕಾರಣ ಎಂದಿದ್ದಾರೆ.
Loading...
Unable to load recommendations.
Follow Us
