ನಟಿ ಪವಿತ್ರಾ ಗೌಡ ಅವರು ಬೆರಳೆಣಿಕೆಯಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಈಗ ಅವರು ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಎ1 ಆರೋಪಿಯಾಗಿ ಜೈಲು ಸೇರಿದ್ದಾರೆ. ಪವಿತ್ರಾ ಗೌಡ ಕೊನೆಯದಾಗಿ ನಟಿಸಿದ್ದು ‘ಸಾಗುವ ದಾರಿಯಲ್ಲಿ’ ಸಿನಿಮಾದಲ್ಲಿ. ಆ ಚಿತ್ರದ ನಿರ್ದೇಶಕ ಶಿವಕುಮಾರ್ ಗೌಡ ಅವರು ಕೆಲವು ಇಂಟರೆಸ್ಟಿಂಗ್ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ‘ಸಾಗುವ ದಾರಿಯಲ್ಲಿ’ ಚಿತ್ರದಲ್ಲಿ ನಟಿಸಲು ಪವಿತ್ರಾ ಗೌಡ ಹೆಚ್ಚು ಸಂಭಾವನೆ ಪಡೆದಿರಲಿಲ್ಲ. ಅದಕ್ಕೆ ಕಾರಣ ಏನು ಎಂಬುದನ್ನು ನಿರ್ದೇಶಕರು ವಿವರಿಸಿದ್ದಾರೆ. ‘ನಮ್ಮ ಸಿನಿಮಾದಲ್ಲಿ ದೊಡ್ಡ ತಾರಾಗಣ ಇತ್ತು. ದೇವರಾಜ್, ಜೈ ಜಗದೀಶ್, ರಂಗಾಯಣ ರಘು, ಶರತ್ ಲೋಹಿತಾಶ್ವ, ಸಾಧು ಕೋಕಿಲ, ಬುಲೆಟ್ ಪ್ರಕಾಶ್ ಮುಂತಾದ ಕಲಾವಿದರು ಇದ್ದರು. ಪವಿತ್ರಾ ಗೌಡ ಇನ್ನೂ ಹೊಸಬರಾಗಿದ್ದರು. ಈ ಚಿತ್ರದಿಂದ ತಾವು ಬೆಳಕಿಗೆ ಬರಬಹುದು ಎಂಬ ಆಲೋಚನೆ ಅವರಿಗೆ ಇತ್ತು. ಹಾಗಾಗಿ ನಾವು ಅವರಿಗೆ ಹೆಚ್ಚು ಸಂಭಾವನೆ ಕೊಟ್ಟಿಲ್ಲ ಎನಿಸುತ್ತದೆ’ ಎಂದು ಶಿವಕುಮಾರ್ ಗೌಡ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.