ರಾಮನಗರ: ಲೋಕಸಭಾ ಚುನಾವನೆಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ (Bengaluru Rural constituency) ಬಿಜೆಪಿyu ಪ್ರಖ್ಯಾತ ವೈದ್ಯ ಡಾ ಸಿಎನ್ ಮಂಜುನಾಥ್ (Dr CN Manjunath) ಅವರನ್ನು ಫೀಲ್ಡಿಗಳಿಸಿರುವುದರಿಂದ ಡಿಕೆ ಸಹೋದರರ (DK brothers) ಕ್ಯಾಂಪ್ ನಲ್ಲಿ ಪ್ಯಾನಿಕ್ ಸೃಷ್ಟಿಯಾಗಿದೆಯೇ? ನಿನ್ನೆ ರಾಮನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡುವಾಗ ಕೆಪಿಸಿಸಿ ಅಧ್ಯಕ್ಷ ಶಿವಕುಮಾರ್ ಪ್ರಶ್ನೆಯೊಂದಕ್ಕೆ ನೀಡಿದ ಪ್ರತಿಕ್ರಿಯೆ ಅಂಥ ಅನುಮಾನ ಮೂಡಿಸುತ್ತದೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ನಡೆಯಲಿರುವುದು ಧರ್ಮಯುದ್ಧ, ಸತ್ಯವನ್ನು ಗೆಲ್ಲಿಸಿ ಅಂತ ಜಯದೇವ ಹೃದ್ರೋಗ ಸಂಸ್ಥೆಯ ಮಾಜಿ ನಿರ್ದೇಶಕ ಮತದಾರರಿಗೆ ಅಪೀಲ್ ಮಾಡುತ್ತಿರುವುದನ್ನು ಶಿವಕುಮಾರ್ ಗಮನಕ್ಕೆ ತಂದಾಗ ಅವರು ಉತ್ತರಿಸಲು ಸಮಯ ತೆಗೆದುಕೊಂಡರೂ ಪ್ರಶ್ನೆಯನ್ನು ಬಿಟ್ಟು ಬೇರೆ ವಿಷಯದ ಬಗ್ಗೆ ಮಾತಾಡಿದರು. ಚುನಾವಣೆ ಡೇಟ್ಸ್ ಪ್ರಕಟವಾದ ಬಳಿಕ ಅದನ್ನೆಲ್ಲ ಮಾತಾಡೋಣ, ಈಗ ನಮಗೆ ವೋಟು ನೀಡಿ ಆಧಿಕಾರ ನೀಡಿರುವ ಜನರ ಋಣ ತೀರಿಸಬೇಕಿದೆ, ಅದು ನಮಗೆ ಬಹಳ ಪ್ರಾಮುಖ್ಯವಾದದ್ದು, ಉಳಿದ ವಿಷಯಗಳನ್ನು ಆಮೇಲೆ ಮಾತಾಡೋಣ ಎಂದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಕುಮಾರಸ್ವಾಮಿ ಯಾರಿಗೆ ಧಮ್ಕಿ ಹಾಕುತ್ತಿದ್ದಾರೆ ಎಂದು ಗೊತ್ತಿದೆ: ಡಿಕೆ ಶಿವಕುಮಾರ್ ಗಂಭೀರ ಆರೋಪ