Karnataka Assembly Polls: ರಾಜಕಾರಣಿಗಳಿಗೆ ಸಾವಿನ ಮನೆಯಲ್ಲೂ ರಾಜಕೀಯದ ಮಾತು ಬೇಕೇ?
ಸತ್ತವರ ಮನೆಯಲ್ಲಿ ಕುಟುಂಬಸ್ಥರು, ಆಪ್ತರು, ಸ್ನೇಹಿತರು ಶೋಕದಲ್ಲಿ ಮುಳುಗಿರುತ್ತಾರೆ. ರಾಜಕಾರಣಿಗಳು ಅಲ್ಲಿ ಸ್ವಲ್ಪ ಸಮಯದವರೆಗೆ ಮೌನವಾಗಿ ಕೂತಿದ್ದರೆ ಅದೇ ಅಗಲಿದ ಆತ್ಮಕ್ಕೆ ಸಲ್ಲಿಸುವ ಗೌರವ.
ದೇವನಹಳ್ಳಿ: ಇಂದು ಬೆಳಗಿನ ಜಾವ ಹೃದಯಾಘಾತದಿಂದ ನಿಧನರಾದ ಕಾಂಗ್ರೆಸ್ ಪಕ್ಷದ ಮಾಜಿ ಶಾಸಕ ವೆಂಕಟಸ್ವಾಮಿ (Venkataswamy) ಪಾರ್ಥೀವ ಶರೀರಕ್ಕೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಶ್ರದ್ಧಾಂಜಲಿ ಸಲ್ಲಿಸಿದರು. ದೇವನಹಳ್ಳಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆಹೆಚ್ ಮುನಿಯಪ್ಪ (KH Muniyappa) ಸಹ ಶಿವಕುಮಾರ್ ಜೊತೆ ತೆರಳಿ ತಮ್ಮ ಅಂತಿಮ ನಮನ ಸಲ್ಲಿಸಿದರು. ಅದೆಲ್ಲ ಸರಿ, ಆದರೆ ಈ ನಾಯಕರು ಸಾವಿನ ಮನೆಯಲ್ಲಿ ಕೂತು ರಾಜಕೀಯದ ವಿಷಯಗಳನ್ನು ಚರ್ಚಿಸುವುದು ಬೇಸರ ಹುಟ್ಟಿಸುತ್ತದೆ. ರಾಜಕೀಯವನ್ನು ಸೂತಕದ ಮನೆ ಬಿಟ್ಟು ಎಲ್ಲಿ ಬೇಕಾದರೂ ಚರ್ಚಿಸಬಹುದು. ಸತ್ತವರ ಮನೆಯಲ್ಲಿ ಕುಟುಂಬಸ್ಥರು, ಆಪ್ತರು, ಸ್ನೇಹಿತರು ಶೋಕದಲ್ಲಿ ಮುಳುಗಿರುತ್ತಾರೆ. ರಾಜಕಾರಣಿಗಳು ಅಲ್ಲಿ ಸ್ವಲ್ಪ ಸಮಯದವರೆಗೆ ಮೌನವಾಗಿ ಕೂತಿದ್ದರೆ ಅದೇ ಅಗಲಿದ ಆತ್ಮಕ್ಕೆ ಸಲ್ಲಿಸುವ ಗೌರವ ಮಾರಾಯ್ರೇ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಮತ್ತಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Apr 15, 2023 12:31 PM
ಕರ್ನಾಟಕದ ಐವರು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ
ರಾಷ್ಟ್ರಪತಿ ಭವನದಲ್ಲಿ ರೋಹಿತ್ ಶರ್ಮಾಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
‘ಪದ್ಮಭೂಷಣ’ ಸ್ವೀಕರಿಸಿ ಪ್ರಧಾನಿ ಮೋದಿ ಭೇಟಿ ಮಾಡಿದ ಮಲಯಾಳಂ ನಟ ಮಮ್ಮುಟ್ಟಿ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ
