ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್ಗೆ ಆಶೀರ್ವಾದ
ಬೆಂಗಳೂರಿನ ಸದಾಶಿವನಗರದಲ್ಲಿರುವ ಡಿಸಿಎಂ ಡಿಕೆ ಶಿವಕುಮಾರ್ ನಿವಾಸಕ್ಕೆ ಉತ್ತರ ಪ್ರದೇಶ ಮತ್ತು ಉತ್ತರಾಖಂಡ್ನಿಂದ ಆಗಮಿಸಿದ ಹತ್ತಕ್ಕೂ ಹೆಚ್ಚು ನಾಗಾಸಾಧುಗಳು ಆಶೀರ್ವಾದ ನೀಡಿದ್ದಾರೆ. ಈ ಹಿಂದೆ ಸಹ ಡಿಕೆಗೆ ಆಶೀರ್ವದಿಸಿದ್ದ ಸಾಧುಗಳು, ಅವರು ಕರ್ನಾಟಕದ ಮುಖ್ಯಮಂತ್ರಿಯಾಗಲಿ ಎಂದು ಹಾರೈಸಿದ್ದಾರೆ. ಇಲ್ಲಿದೆ ನೋಡಿ ವಿಡಿಯೋ.
ಬೆಂಗಳೂರು, ಡಿಸೆಂಬರ್ 20: ಶುಕ್ರವಾರ ಗೋಕಾರ್ಣದ ದೇಗುಲಕ್ಕೆ ಡಿಸಿಎಂ ಡಿಕೆ ಶಿಕವಕುಮಾರ್ ತೆರಳಿದ್ದರು. ಈ ವೇಳೆ ಪ್ರಾರ್ಥನೆ ಸಲ್ಲಿಸುವಾಗ ಗಣಪತಿಯ ಬಲಗಡೆಯಿಂದ ಹೂ ಬಿದ್ದಿತ್ತು. ಜಗದೀಶ್ವರಿ ದೇಗುಲದಲ್ಲಿ ಬೇಡಿಕೆ ಇಟ್ಟಾಗಲೂ ಒಳ್ಳೆಯ ಮುನ್ಸೂಚನೆ ಸಿಕ್ಕಿತ್ತು. ಈ ಮಧ್ಯೆ ಇಂದು ಸದಾಶಿವನಗರದ ನಿವಾಸಕ್ಕೆ ಉತ್ತರ ಪ್ರದೇಶ, ಉತ್ತರಾಖಂಡ್ನಿಂದ 10ಕ್ಕೂ ಹೆಚ್ಚು ನಾಗಾಸಾಧುಗಳು ಆಗಮಿಸಿ ಡಿಕೆ ಶಿವಕುಮಾರ್ಗೆ ಆಶೀರ್ವಾದ ಮಾಡಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
