ಮಡಿಕೇರಿಯಲ್ಲಿ (Madikeri) ಮಾಂಸಾಹಾರ ಸೇವಿಸಿ ದೇವಸ್ಥಾನಕ್ಕೆ ಹೋಗಿದ್ದನ್ನು ಸಮರ್ಥಿಸಿಕೊಂಡಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು (Siddaramaiah) ಮಾಂಸಹಾರ ಸೇವಿಸಿ ದೇವಸ್ಥಾನಕ್ಕೆ ಹೋದರೆ ಅದರಲ್ಲಿ ತಪ್ಪೆಲ್ಲಿಂದ ಬಂತು, ದೇವರು ಮಾಂಸಾಹಾರ (non-veg food) ಸೇವಿಸಬಾರದು ಅಂತ ಹೇಳಿದ್ದಾನಾ ಅಂತ ಪ್ರಶ್ನಿಸಿದ್ದಾರೆ. ರಾತ್ರಿ ಮಾಂಸಾಹಾರ ಸೇವಿಸಿ ಬೆಳಗ್ಗೆ ದೇವಸ್ಥಾನಕ್ಕೆ ಹೋಗಬಹುದಂತೆ, ಬೆಳಗ್ಗೆ ತಿಂದವನು ಸಾಯಂಕಾಲ ಗುಡಿಗೆ ಹೋಗಬಾರದಂತೆ-ಕೇವಲ ಇಂಥ ಮೌಢ್ಯಗಳನ್ನು ಮಾತ್ರ ಬಿಜೆಪಿ ಜನರ ಮನಸ್ಸಿನಲ್ಲಿ ಬಿತ್ತುತ್ತಿದೆ ಎಂದು ಅವರು ಕಿಡಿಕಾರಿದರು.