AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Daily Devotional: ಬದುಕಿರುವವರು ಸತ್ತಂತೆ ಕನಸಿನಲ್ಲಿ ಬಂದರೆ ಏನರ್ಥ? ವಿಡಿಯೋ ನೋಡಿ

Daily Devotional: ಬದುಕಿರುವವರು ಸತ್ತಂತೆ ಕನಸಿನಲ್ಲಿ ಬಂದರೆ ಏನರ್ಥ? ವಿಡಿಯೋ ನೋಡಿ

ವಿವೇಕ ಬಿರಾದಾರ
|

Updated on: May 19, 2025 | 8:59 AM

ಬದುಕಿರುವ ವ್ಯಕ್ತಿ ಕನಸಿನಲ್ಲಿ ಸತ್ತಂತೆ ಕಾಣಿಸಲು ಕಾರಣವೇನು ಎಂಬುವುದನ್ನು ಖ್ಯಾತ ಜ್ಯೋತಿಷಿ ಡಾ. ಬಸವರಾಜ್ ಗುರುಜಿ ಅವರು ತಿಳಿಸಿದ್ದಾರೆ. ಗುರುಜಿ ಅವರು ಇದನ್ನು ಎಚ್ಚರಿಕೆಯ ಸಂಕೇತವೆಂದು ಪರಿಗಣಿಸುತ್ತಾರೆ ಮತ್ತು ದೈವ ಪ್ರಜ್ಞೆಯನ್ನು ಬೆಳೆಸಿಕೊಳ್ಳುವುದು. ದೇವರ ದರ್ಶನ, ಹೋಮ, ಅರ್ಚನೆ ಮುಂತಾದ ಪರಿಹಾರಗಳನ್ನು ಸೂಚಿಸುತ್ತಾರೆ.

ಡಾ. ಬಸವರಾಜ್ ಗುರುಜಿ ಅವರು ಕನಸುಗಳ ಅರ್ಥವನ್ನು ವಿವರಿಸಿದ್ದಾರೆ. ಜೀವಂತವಾಗಿರುವವರು ಕನಸಿನಲ್ಲಿ ಮೃತಪಟ್ಟಂತೆ ಕಾಣುವುದನ್ನು ಒಂದು ಎಚ್ಚರಿಕೆಯ ಸಂಕೇತವೆಂದು ಹೇಳಿದ್ದಾರೆ. ಇದು ಯಾವುದೋ ಒಂದು ಅಪಾಯ ಅಥವಾ ತೊಂದರೆಗೆ ಸಂಕೇತವಾಗಿರಬಹುದು ಎಂದು ಅವರು ಹೇಳುತ್ತಾರೆ. ಈ ರೀತಿಯ ಕನಸು ಕಂಡರೆ, ದೈವ ಪ್ರಜ್ಞೆಯನ್ನು ಬೆಳೆಸಿಕೊಳ್ಳುವುದು, ದೇವರ ದರ್ಶನ ಪಡೆಯುವುದು, ಅಥವಾ ಹನುಮ, ವಿನಾಯಕ, ಸುಬ್ರಹ್ಮಣ್ಯ ದೇವರ ಪೂಜೆ ಮಾಡುವುದು ಉತ್ತಮ ಎಂದು ಸಲಹೆ ನೀಡಿದ್ದಾರೆ. ಕುಟುಂಬದವರ ಬಗ್ಗೆ ಕನಸು ಕಂಡರೆ, ಅವರ ಕಲ್ಯಾಣಕ್ಕಾಗಿ ಪ್ರಾರ್ಥನೆ ಮಾಡುವುದು ಅಥವಾ ಶಿವನ ದೇವಸ್ಥಾನದಲ್ಲಿ ಅರ್ಚನೆ, ಅಭಿಷೇಕ ಅಥವಾ ರುದ್ರಾಭಿಷೇಕ ಮಾಡಿಸುವುದು ಒಳ್ಳೆಯದು ಎಂದು ಹೇಳಿದ್ದಾರೆ. ಸುಳ್ಳು ಹೇಳುವುದರಿಂದಲೂ ಕೆಟ್ಟ ಪರಿಣಾಮಗಳು ಉಂಟಾಗಬಹುದು ಎಂದು ಅವರು ಎಚ್ಚರಿಸಿದ್ದಾರೆ.