ಬೆಂಗಳೂರಿನ ಸಾಯಿ ಲೇಔಟ್ನಲ್ಲಿ ಅರ್ಧಭಾಗದಷ್ಟು ಮುಳುಗಿದ ಕಾರುಗಳು, ಟ್ರ್ಯಾಕ್ಟರ್ನಲ್ಲಿ ಬಂದ ಅಧಿಕಾರಿಗಳು
ಬಿಬಿಎಂಪಿಯ ಅಧಿಕಾರಿಗಳು ಸ್ಥಳ ಬಂದಿರೋದೇನೋ ನಿಜ, ಅದರೆ ಅವರು ಟ್ರ್ಯಾಕ್ಟರ್ನಲ್ಲಿ ಬಂದಿದ್ದಾರೆ. ಒಬ್ಬ ಅಧಿಕಾರಿ ಟ್ರ್ಯಾಕ್ಟರ್ನಲ್ಲಿ ಕುಳಿತು ಹೋಗುತ್ತಿರುವುದನ್ನು ದೃಶ್ಯಗಳಲ್ಲಿ ನೋಡಬಹದು. ಏರಿಯಾದ ಜನ ಅವರಿಗೆ ಹಿಡಿಶಾಪ ಹಾಕುತ್ತಿದ್ದಾರೆ, ಆದರೆ ಅದು ಅವರ ಮೇಲೆ ಯಾವುದೇ ಪ್ರಭಾವ ಬೀರದು! ಬೈಸಿಕೊಂಡು, ಉಗಿಸಿಕೊಂಡು ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ಅಭ್ಯಾಸವಾಗಿ ಹೋಗಿದೆ.
ಬೆಂಗಳೂರು, ಮೇ 19: ಬೆಂಗಳೂರು ಮಹಾನಗರದಲ್ಲಿ (Bengaluru city) ನಿನ್ನೆ ರಾತ್ರಿ ಸುರಿದ ಭಾರೀ ಮಳೆಯಿಂದ ಅಗಿರುವ ಅವಾಂತರಗಳನ್ನು ನಾವು ವರದಿ ಮಾಡುತ್ತಲೇ ಇದ್ದೇವೆ. ನಗರದ ಕೆಅರ್ ಪುರಂ ಕ್ಷೇತ್ರದಲ್ಲಿರುವ ಸಾಯಿ ಲೇಔಟ್ ಕತೆಯನ್ನು ಮೊನ್ನೆಯಷ್ಟೇ ಹೇಳಿದ್ದೆವು. ಅವತ್ತು ಸುರಿದಿದ್ದು ಅಂಥ ದೊಡ್ಡ ಮಳೆಯೇನಲ್ಲ, ಅದರೆ ನಿನ್ನೆ ರಾತ್ರಿಯಾಗಿದ್ದು ಮಾತ್ರ ಭಯಂಕರ ಮಳೆ. ಹಾಗಾಗೇ ಏರಿಯಾದ ಜನರ ಸಮಸ್ಯೆಗಳು ಇಮ್ಮಡಿಗೊಂಡಿವೆ. ಮನೆಗಳ ಮುಂದಿನ ರಸ್ತೆಗಳಲ್ಲಿ ನೀರು ನಿಂತಿರುವುದರಿಂದ ಕಾರುಗಳ ಅರ್ಧಭಾಗ ಮುಳುಗಡೆಯಾಗಿದೆ. ಇಲ್ಲೊಂದು ಕಾರನ್ನು ಮೂವ್ ಮಾಡಲೂ ಆಗುತ್ತಿಲ್ಲ, 6-7 ಜನ ಸೇರಿ ತಳ್ಳುತ್ತಿದ್ದಾರೆ.
ಇದನ್ನೂ ಓದಿ:ಕೆಅರ್ ಪುರದ ಸಾಯಿ ಲೇಔಟ್ನಲ್ಲಿ ಮನೆಗಳನ್ನು ಹೊಕ್ಕ ಮಳೆನೀರು, ರಸ್ತೆಗಳು ಹೊಂಡ, ಜನರ ಪರದಾಟ
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Follow Us
Latest Videos
ಸಚಿವ ಸಂಪುಟ ಸಭೆಯಲ್ಲಿ ಒಳ ಮೀಸಲಾತಿ ಬಗ್ಗೆ ಭಾರೀ ಚರ್ಚೆ: ಫೈನಲಿ ಏನಾಯ್ತು?
ವಿಚಾರಣೆಗೆ ಬಂದಿದ್ದ ಮಲ್ಲಿಕಾರ್ಜುನ ಮುತ್ಯಾಗೆ ಶಾಕ್ ಕೊಟ್ಟ ಪೊಲೀಸ್ರು
ಇಸ್ರೇಲ್ ಮೇಲೆ 2,000 ಕಿ.ಮೀ ವ್ಯಾಪ್ತಿಯ ಕ್ಷಿಪಣಿ ಉಡಾಯಿಸಿದ ಇರಾನ್
ಬುರ್ಖಾ ಧರಿಸಿ ಹೋಳಿ ಆಚರಣೆ: ಅಪಮಾನ ಮಾಡಿದ್ದಾರೆಂದು ದಲಿತ ಮುಖಂಡ ದೂರು

