‘ನೀವೇನು ಮೇಲಿನಿಂದ ಇಳಿದುಬಂದಿಲ್ಲ’; ವಿನಯ್, ಸ್ನೇಹಿತ್ ಗುಂಪುಗಾರಿಕೆಗೆ ಪ್ರತಾಪ್ ತಿರುಗೇಟು
ಡ್ರೋನ್ ಪ್ರತಾಪ್ ಹಾಗೂ ಸ್ನೇಹಿತ್ ಮಧ್ಯೆ ಕಿತ್ತಾಟ ಆಗಿದೆ. ಬಾತ್ರೂಂನ ತಮಗೆ ಬೇಕಾದವರಿಗೆ ಬಿಟ್ಟುಕೊಡಲು ವಿನಯ್ ಹಾಗೂ ಸ್ನೇಹಿತ್ ತಮ್ಮದೇ ತಂತ್ರ ರೂಪಿಸಿದ್ದರು. ಇದನ್ನು ಪ್ರತಾಪ್ ಪ್ರಶ್ನೆ ಮಾಡಿದ್ದಾರೆ.
ಪ್ರತಾಪ್ (Prathap) ಅವರನ್ನು ತಮ್ಮತ್ತ ಸೆಳೆದುಕೊಳ್ಳಲು ವಿನಯ್, ಸ್ನೇಹಿತ್ ಹಾಗೂ ನಮ್ರತಾ ಪ್ರಯತ್ನಿಸಿದ್ದರು. ಇದರಲ್ಲಿ ಅವರು ಯಶಸ್ಸು ಪಡೆದಿದ್ದರು ಕೂಡ. ಆದರೆ, ಇದು ಹೆಚ್ಚು ದಿನ ನಿಲ್ಲಲಿಲ್ಲ. ಪ್ರತಾಪ್ಗೆ ಅವರ ಜೊತೆ ಸರಿ ಹೊಂದುತ್ತಲೇ ಇಲ್ಲ. ಈಗ ಡ್ರೋನ್ ಪ್ರತಾಪ್ ಹಾಗೂ ಸ್ನೇಹಿತ್ ಮಧ್ಯೆ ಕಿತ್ತಾಟ ಆಗಿದೆ. ಬಾತ್ರೂಂನ ತಮಗೆ ಬೇಕಾದವರಿಗೆ ಬಿಟ್ಟುಕೊಡಲು ವಿನಯ್ ಹಾಗೂ ಸ್ನೇಹಿತ್ ತಮ್ಮದೇ ತಂತ್ರ ರೂಪಿಸಿದ್ದರು. ಇದನ್ನು ಪ್ರತಾಪ್ ಪ್ರಶ್ನೆ ಮಾಡಿದ್ದಾರೆ. ‘ನೀವೇನು ಮೇಲಿನಿಂದ ಬಂದವರಲ್ಲ’ ಎಂದು ಪ್ರತಾಪ್ ನೇರವಾಗಿ ಹೇಳಿದ್ದಾರೆ. ಈ ವಿಚಾರ ವೀಕೆಂಡ್ನಲ್ಲಿ ಚರ್ಚೆಗೆ ಬರೋ ಸಾಧ್ಯತೆ ಇದೆ. ಕಲರ್ಸ್ ಕನ್ನಡ ಹಾಗೂ ಜಿಯೋ ಸಿನಿಮಾದಲ್ಲಿ ಎಪಿಸೋಡ್ ವೀಕ್ಷಿಸಬಹುದು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:59 am, Fri, 24 November 23