Hassan: ಬಾಡೂಟಕ್ಕೆ ಮೊದಲು ಗುಂಡು ಹಾಕಿದವರು ಊಟದ ಸ್ಥಳಕ್ಕೆ ಬಂದು ಧೊಪ್ಪನೆ ಬಿದ್ದರು!
ಆದರೆ ಎಂಗೂ ಬಾಡೂಟ ಐತೆ, ವಸಿ ಎಣ್ಣೆ ಹೊಡ್ಕೊಂಡ್ ಊಟ ಮಾಡುವ ಅಂದುಕೊಂಡ ಕೆಲವರು ಮದ್ಯದಂಡಿಗೆ ಹೋಗಿ ಕಂಠಮಟ್ಟ ಕುಡಿದುಬಿಟ್ಟಿದ್ದಾರೆ. ಅಲ್ಲಿಂದ ಬಾಡೂಟ ಆಯೋಜಿಸಿದ ಸ್ಥಳದವರೆಗೆ ತೂರಾಡುತ್ತಾ ಬಂದವರು ಅಲ್ಲಿ ತಲುಪುತ್ತಿದ್ದಂತೆಯೇ ನೆಲಕ್ಕುರುಳಿದ್ದಾರೆ!
ಹಾಸನ: ಗುಂಡಿನ ಮತ್ತೇ ಗಮ್ಮತ್ತು… ಅಂತ ಹಳೆಯ ಕನ್ನಡ ಸಿನಿಮಾ ಹಾಡೊಂದಿದೆ, ಆದರೆ ಜಿಲ್ಲೆಯ ಬೇಲೂರು ತಾಲ್ಲೂಕಿನ ಅಗಸರಹಳ್ಳಿ ಬಾರೆಯಲ್ಲಿ ಗುಂಡು ಹಾಕಿದವರೇ ಬೇರೆಯವರಿಗೆ ಗಮ್ಮತ್ತಿನ ವಸ್ತುಗಳಾದರು. ಅಸಲಿಗೆ ಆಗಿದ್ದೇನು ಗೊತ್ತಾ, ಇದು ಎಲೆಕ್ಷನ್ ಟೈಮಲ್ವಾ? ಹಾಸನ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಹೆಚ್ ಕೆ ಸುರೇಶ್ (HK Suresh) ಗ್ರಾಮಸ್ಥರಿಗೆ ಬಾಡೂಟ (non veg feast) ಆಯೋಜಿಸಿದ್ದಾರೆ. ಮದ್ಯದ (liquor) ಸರಬರಾಜು ಇದ್ದ ಬಗ್ಗೆ ಖಚಿತ ಮಾಹಿತಿ ಇಲ್ಲ ಮಾರಾಯ್ರೇ. ಆದರೆ ಎಂಗೂ ಬಾಡೂಟ ಐತೆ, ವಸಿ ಎಣ್ಣೆ ಹೊಡ್ಕೊಂಡ್ ಊಟ ಮಾಡುವ ಅಂದುಕೊಂಡ ಕೆಲವರು ಮದ್ಯದಂಡಿಗೆ ಹೋಗಿ ಕಂಠಮಟ್ಟ ಕುಡಿದುಬಿಟ್ಟಿದ್ದಾರೆ. ಅಲ್ಲಿಂದ ಬಾಡೂಟ ಆಯೋಜಿಸಿದ ಸ್ಥಳದವರೆಗೆ ತೂರಾಡುತ್ತಾ ಬಂದವರು ಅಲ್ಲಿ ತಲುಪುತ್ತಿದ್ದಂತೆಯೇ ನೆಲಕ್ಕುರುಳಿದ್ದಾರೆ! ಅವರ ಅವತಾರ ನೀವೇ ನೋಡಿ, ಒಬ್ಬ ವ್ಯಕ್ತಿ ತೂರಾಡುತ್ತಾ ಹೋಗಿತ್ತಿರುವುದು ವಿಡಿಯೋದಲ್ಲಿ ಕಾಣುತ್ತದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಕರ್ನಾಟಕದ ಐವರು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ
ರಾಷ್ಟ್ರಪತಿ ಭವನದಲ್ಲಿ ರೋಹಿತ್ ಶರ್ಮಾಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
‘ಪದ್ಮಭೂಷಣ’ ಸ್ವೀಕರಿಸಿ ಪ್ರಧಾನಿ ಮೋದಿ ಭೇಟಿ ಮಾಡಿದ ಮಲಯಾಳಂ ನಟ ಮಮ್ಮುಟ್ಟಿ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ
