Sign In

By signing in or creating an account, you agree with Associated Broadcasting Company's Terms & Conditions and Privacy Policy.

Kalaburagi: ಬರಿದಾಗಿರುವ ಭೀಮೆಯ ಒಡಲು, ಇನ್ನೊಂದು ವಾರ ಮಳೆಯಾಗದಿದ್ದರೆ ಕುಡಿಯುವ ನೀರಿಗೂ ಎದುರಾಗಲಿದೆ ಹಾಹಾಕಾರ

Kalaburagi: ಬರಿದಾಗಿರುವ ಭೀಮೆಯ ಒಡಲು, ಇನ್ನೊಂದು ವಾರ ಮಳೆಯಾಗದಿದ್ದರೆ ಕುಡಿಯುವ ನೀರಿಗೂ ಎದುರಾಗಲಿದೆ ಹಾಹಾಕಾರ

ಅರುಣ್​ ಕುಮಾರ್​ ಬೆಳ್ಳಿ
|

Updated on: Jun 30, 2023 | 10:18 AM

ಉತ್ತರ ಭಾಗದ ಜೀವನಾಡಿಯಾಗಿರುವ ಭೀಮೆಯ ಒಡಲು ಬರಿದಾಗಿದೆ. ಬ್ರಿಜ್ ಕಮ್ ಬ್ಯಾರೇಜ್ ಇರುವ ಕಡೆಗಳಲ್ಲಿ ಮಾತ್ರ ಅಲ್ಪ ಸ್ವಲ್ಪ ನೀರಿದೆ

ಕಲಬುರಗಿ: ರಾಜ್ಯದಲ್ಲಿ ನಾನಾಭಾಗಗಳಲ್ಲಿ ಮಳೆಯಾಗುತ್ತಿರುವುದು ನಿಜವಾದರೂ ಉತ್ತರ ಭಾಗದಲ್ಲಿ ಹರಿಯುವ ನದಿಗಳನ್ನು (rivers) ನೋಡಿದರೆ ವಾಸ್ತವಾಂಶ ಭಿನ್ನವಾಗಿರುವುದು ನಿಚ್ಚಳವಾಗುತ್ತದೆ. ಯಾದಗಿರಿ ಮತ್ತು ಕಲಬುರಗಿ ಜಿಲ್ಲೆಗಳ ಮೂಲಕ ಹರಿಯುವ ಭೀಮಾ ನದಿಯ (Bhima River) ಸ್ಥಿತಿ ನೋಡಿ ಹೇಗಿದೆ. ಮಾನ್ಸೂನ್ ಋತು (monsoon season) ಶುರುವಾಗಿ ಒಂದು ತಿಂಗಳು ಕಳೆದರೂ ಕಲ್ಯಾಣ ಕರ್ನಾಟಕದಲ್ಲಿ ಮಳೆಯಾಗುತ್ತಿಲ್ಲ. ಈ ಭಾಗದ ಜೀವನಾಡಿಯಾಗಿರುವ ಭೀಮೆಯ ಒಡಲು ಬರಿದಾಗಿದೆ. ಬ್ರಿಜ್ ಕಮ್ ಬ್ಯಾರೇಜ್ ಇರುವ ಕಡೆಗಳಲ್ಲಿ ಮಾತ್ರ ಅಲ್ಪ ಸ್ವಲ್ಪ ನೀರಿದೆ. ಇನ್ನೊಂದು ವಾರದಲ್ಲಿ ಉತ್ತಮ ಮಳೆಯಾಗದಿದ್ದರೆ ಕುಡಿಯುವ ನೀರಿಗೂ ಪರದಾಡುವ ಸ್ಥಿತಿ ನಿರ್ಮಾಣವಾಗಲಿದೆ. ಟಿವಿ ಕನ್ನಡ ವಾಹಿನಿ ಕಲಬುರಗಿ ವರದಿಗಾರ ಸ್ಥಿತಿಯ ಕುರಿತು ಒಂದು ಪ್ರತ್ಯಕ್ಷ ವರದಿ ನೀಡಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ