AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಖೈರತಾಬಾದ್‌ನಲ್ಲಿ ಜೋರು ಮಳೆಗೆ ರಸ್ತೆ ಮಧ್ಯೆ ಧುತ್ತನೆ ಎದುರಾಯಿತು ಆ ಕಪ್ಪು ಆಕಾರ! ಮುಂದೇನಾಯ್ತು? ವಿಡಿಯೋ ನೋಡಿ

ಖೈರತಾಬಾದ್‌ನಲ್ಲಿ ಜೋರು ಮಳೆಗೆ ರಸ್ತೆ ಮಧ್ಯೆ ಧುತ್ತನೆ ಎದುರಾಯಿತು ಆ ಕಪ್ಪು ಆಕಾರ! ಮುಂದೇನಾಯ್ತು? ವಿಡಿಯೋ ನೋಡಿ

ಸಾಧು ಶ್ರೀನಾಥ್​
|

Updated on:Sep 28, 2023 | 4:07 PM

ಹೈದರಾಬಾದ್‌ನಲ್ಲಿ ಬುಧವಾರ ಏನಾಯಿತೆಂದರೆ ಭಾರೀ ಮಳೆಯಿಂದಾಗಿ ದೊಡ್ಡ ಚರಂಡಿಯಲ್ಲಿ ಮೊಸಳೆ ಕಾಣಿಸಿಕೊಂಡು ಸಂಚಲನ ಮೂಡಿಸಿದೆ. ಖೈರತಾಬಾದ್‌ನ ಆನಂದ್ ನಗರ ಮತ್ತು ಚಿಂತಲಬಸ್ತಿ ನಡುವೆ ಹೊಸದಾಗಿ ನಿರ್ಮಿಸಲಾದ ಸೇತುವೆಯಡಿ ಮೊಸಳೆ ಕಾಣಿಸಿಕೊಂಡಿದೆ.

ಹೈದರಾಬಾದ್ ಮಹಾನಗರವು ಇತ್ತೀಚೆಗೆ ಸುರಿದ ಭಾರಿ ಮಳೆಗೆ ನಲುಗಿದೆ. ಜನವಸತಿ ಪ್ರದೇಶಗಳಿಗೆ ಹಾವು, ಮೊಸಳೆಗಳು ನುಗ್ಗಿವೆ. ಇವು ಅನೇಕ ಪ್ರದೇಶಗಳಲ್ಲಿ ಕಂಡುಬರುತ್ತಿರುವುದು ಆತಂಕಕಾರಿಯಾಗಿದೆ. ಹೈದರಾಬಾದ್‌ನಲ್ಲಿ ಬುಧವಾರ ಏನಾಯಿತೆಂದರೆ ಭಾರೀ ಮಳೆಯಿಂದಾಗಿ ದೊಡ್ಡ ಚರಂಡಿಯಲ್ಲಿ ಮೊಸಳೆ ಕಾಣಿಸಿಕೊಂಡು ಸಂಚಲನ ಮೂಡಿಸಿದೆ. ಖೈರತಾಬಾದ್‌ನ ಆನಂದ್ ನಗರ ಮತ್ತು ಚಿಂತಲಬಸ್ತಿ ನಡುವೆ ಹೊಸದಾಗಿ ನಿರ್ಮಿಸಲಾದ ಸೇತುವೆಯಡಿ ಮೊಸಳೆ ಕಾಣಿಸಿಕೊಂಡಿದೆ. ಬುಧವಾರ ಸಂಜೆ ಸುರಿದ ಭಾರಿ ಮಳೆಗೆ ಬಲ್ಕಾಪುರ ನಾಲಾದಲ್ಲಿ ಪ್ರವಾಹ ಹೆಚ್ಚಾದ ಹಿನ್ನೆಲೆಯಲ್ಲಿ ಮೊಸಳೆ ಸಮೀಪದ ಕೆರೆಗೆ ಬಂದಿತ್ತು ಎನ್ನಲಾಗಿದೆ.

ಆದರೆ ನಾಲಾದಲ್ಲಿ ಮೊಸಳೆ ಮರಿ ಕೊಚ್ಚಿ ಬಂದಿರುವುದನ್ನು ಕಂಡು ಜನ ಭಯಗೊಂಡಿದ್ದಾರೆ. ಎದುರಿಗೆ ಬಂದ ಮೊಸಳೆಯನ್ನು ಕಂಡ ಸ್ಥಳೀಯರು ಭಯದಿಂದ ಓಡಿ ಹೋಗಿದ್ದಾರೆ. ಕೂಡಲೇ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಅಧಿಕಾರಿಗಳು ಬರುವ ಮುನ್ನವೇ ಮೊಸಳೆ ಸಮೀಪದ ಕಾಲುವೆಗೆ ನುಗ್ಗಿದೆ. ಇದೇ ರಸ್ತೆಯಲ್ಲಿ ಗಣೇಶ ಮಂಟಪವಿದ್ದು, ಸ್ಥಳೀಯರಲ್ಲಿ ಇನ್ನಷ್ಟು ಭಯ ಮೂಡಿಸಿದೆ. ಈ ಮಧ್ಯೆ, ಮೊಸಳೆಯು ಗೋಡೆಗಳು ಮತ್ತು ಲೋಹದ ಸರಳುಗಳ ನಡುವಿನ ಕಿರಿದಾದ ಹಾದಿಯಲ್ಲಿ ಸಿಲುಕಿಕೊಂಡಿರುವುದು ಪತ್ತೆಯಾಗಿದೆ. ಮೊಸಳೆಯನ್ನು ರಕ್ಷಿಸಲು ಪೊಲೀಸರು ಮತ್ತು ಅರಣ್ಯಾಧಿಕಾರಿಗಳು ಸಂಜೆ 7 ಗಂಟೆಗೆ ಸ್ಥಳಕ್ಕೆ ತಲುಪಿದ್ದಾರೆ. ಪೊಲೀಸರು, ಅರಣ್ಯ ಮತ್ತು ಡಿಆರ್‌ಎಫ್‌ನ ಸುಮಾರು 20 ಅಧಿಕಾರಿಗಳ ತಂಡ ಲೋಹದ ರಾಡ್‌ಗಳ ನಡುವೆ ಮೊಸಳೆಯನ್ನು ಹೊರತೆಗೆಯಲು ಬಹಳ ಸಮಯ ಶ್ರಮಿಸಿದರು.

ಕೊನೆಗೆ ಮೊಸಳೆಯನ್ನು ಹಿಡಿದು ಮೃಗಾಲಯಕ್ಕೆ ಕೊಂಡೊಯ್ಯಲಾಯಿತು. ಸ್ಥಳೀಯರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಮೂರು ತಿಂಗಳಾದರೂ ಗಣಿ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿಲ್ಲ ಎಂದು ಇದೇ ಪ್ರದೇಶಕ್ಕೆ ಮೊಸಳೆ ಮರಿ ಬಂದಿರುವುದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಈ ನಾಲೆಯಲ್ಲಿ ಇದೊಂದೇ ಮೊಸಳೆ ಇರುವುದಾ? ಅಥವಾ ಅದರ ಜೊತೆಗೆ ಇನ್ನೂ ಕೆಲವು ಇವೆಯೇ? ಎಂಬುದನ್ನು ಪತ್ತೆ ಹಚ್ಚಲು ಅಧಿಕಾರಿಗಳು ಸ್ಥಳವನ್ನು ಜಾಲಾಡುತ್ತಿದ್ದಾರೆ. ಈಗ ಸಿಕ್ಕಿರುವ ಮೊಸಳೆ ಎಲ್ಲಿಂದ ಬಂತು ಎಂಬುದರ ಬಗ್ಗೆಯೂ ಅಧಿಕಾರಿಗಳು ತಲೆಕೆಡಿಸಿಕೊಂಡಿದ್ದಾರೆ.

ಆದರೆ, ಈ ಹಿಂದೆಯೂ ಹೈದರಾಬಾದ್ ನಗರದ ಹಲವೆಡೆ ಮೊಸಳೆಗಳು ಮತ್ತು ಹಾವುಗಳು ಕಾಣಿಸಿಕೊಂಡಿದ್ದವು. ಇತ್ತೀಚೆಗೆ ಸುರಿದ ಭಾರೀ ಮಳೆಗೆ ಮೊಸಳೆ ಕಾಣಿಸಿಕೊಂಡು ಸ್ಥಳೀಯರು ಆತಂಕಗೊಂಡಿದ್ದಾರೆ. ಇನ್ನೂ ಮೂರು ದಿನಗಳ ಕಾಲ ಮಳೆಯಾಗಲಿದೆ ಎಂದು ಹೈದರಾಬಾದ್ ಹವಾಮಾನ ಕೇಂದ್ರ ಎಚ್ಚರಿಕೆ ನೀಡಿದೆ. ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಕಡಿಮೆ ಒತ್ತಡದ ಪ್ರಭಾವದಿಂದ ಸಾಧಾರಣದಿಂದ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಕೇಂದ್ರ ಎಚ್ಚರಿಕೆ ನೀಡಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Sep 28, 2023 04:04 PM