Sign In

By signing in or creating an account, you agree with Associated Broadcasting Company's Terms & Conditions and Privacy Policy.

ದ್ವಾರಕೀಶ್ ಕೊನೆಯ ಆಸೆ ಏನಾಗಿತ್ತು? ಅದನ್ನು ಈಡೇರಿಸಿದ ನಟಿ ಶ್ರುತಿ

ದ್ವಾರಕೀಶ್ ಕೊನೆಯ ಆಸೆ ಏನಾಗಿತ್ತು? ಅದನ್ನು ಈಡೇರಿಸಿದ ನಟಿ ಶ್ರುತಿ

ರಾಜೇಶ್ ದುಗ್ಗುಮನೆ
|

Updated on: Apr 18, 2024 | 8:41 AM

ದ್ವಾರಕೀಶ್ ಅವರು ನಟಿ ಶ್ರುತಿಯನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದರು. ಅವರ ಬಗ್ಗೆ ಶ್ರುತಿಗೆ ಅಪಾರ ಗೌರವ ಇದೆ. ದ್ವಾರಕೀಶ್ ಅವರು ತಮ್ಮ ಬಳಿ ಹೇಳಿದ್ದ ಕೊನೆಯ ಆಸೆಯನ್ನು ಅವರು ಈಡೇರಿಸಿದ್ದಾರೆ. ಅವರ ಕೊನೆಯ ಆಸೆ ಏನಿತ್ತು ಎನ್ನುವ ಬಗ್ಗೆ ಶ್ರುತಿ ಅವರು ಟಿವಿ9 ಕನ್ನಡದ ಜೊತೆ ಮಾತನಾಡಿದ್ದಾರೆ.

ದ್ವಾರಕೀಶ್ ಅವರು ಇಂದು ನಮ್ಮೊಂದಿಗೆ ಇಲ್ಲ. ಅವರನ್ನು ಕಳೆದುಕೊಂಡು ಕನ್ನಡ ಚಿತ್ರರಂಗ ಬಡವಾಗಿದೆ. ಅವರು ಅನೇಕರನ್ನು ಪರಿಚಯಿಸಿದ್ದರು. ಅವರಿಲ್ಲ ಎನ್ನುವ ನೋವು ಇಂದು-ನಾಳೆಗೆ ಮರೆಯಾಗುವಂಥದ್ದಲ್ಲ. ನಟಿ ಶ್ರುತಿಯನ್ನು ದ್ವಾರಕೀಶ್ (Dwarakish) ಅವರೇ ಪರಿಚಯಿಸಿದ್ದರು. ಅವರ ಬಗ್ಗೆ ಶ್ರುತಿಗೆ ಅಪಾರ ಗೌರವ ಇದೆ. ದ್ವಾರಕೀಶ್ ಅವರು ತಮ್ಮ ಬಳಿ ಹೇಳಿದ್ದ ಕೊನೆಯ ಆಸೆಯನ್ನು ಅವರು ಈಡೇರಿಸಿದ್ದಾರೆ. ‘ದ್ವಾರಕೀಶ್ ಅಣ್ಣ ತಮ್ಮ ಮಕ್ಕಳಿಗೆ ಬಿಟ್ಟು ಯಾರಿಗಾದರೂ ಹೆಸರು ಇಟ್ಟಿದ್ದಾರೆ ಎಂದರೆ ಅದು ನನಗೆ. ನಿನ್ನ ಹೆಜ್ಜೆ ಒಂದು ಇತಿಹಾಸ ಆಗಬೇಕು ಎಂದು ಹೇಳುತ್ತಿದ್ದರು. ಶೂಟಿಂಗ್ ಜೊತೆಯಲ್ಲಿದ್ದಾಗೆಲ್ಲ ಒಂದು ಆಸೆ ಹೇಳಿಕೊಳ್ಳುತ್ತಿದ್ದರು. ಅದನ್ನು ಈಡೇರಿಸುತ್ತೀಯಾ ಎಂದು ಕೇಳುತ್ತಿದ್ದರು. ನಾನು ಸತ್ತಾಗ ನಾನು ಪರಿಚಯಿಸಿದ ನಟ-ನಟಿಯರು ನನ್ನ ಸುತ್ತು ಅಳಬೇಕು ಎಂದು ಕೇಳಿಕೊಂಡಿದ್ದರು. ನಾನು ಅದನ್ನು ಮಾಡಿದೆ’ ಎಂದು ಗಳಗಳನೆ ಅತ್ತಿದ್ದಾರೆ ಶ್ರುತಿ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ