ವಿಶ್ವಸಂಸ್ಥೆಯಲ್ಲಿ ಇಸ್ರೇಲ್ ಪ್ರಧಾನಿಗೆ ಭಾರೀ ಮುಖಭಂಗ; ಖಾಲಿ ಕುರ್ಚಿಗಳಿಗೆ ಭಾಷಣ ಮಾಡಿದ ನೆತನ್ಯಾಹು!

Updated on: Sep 26, 2025 | 10:23 PM

ಇಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅಧಿವೇಶನವನ್ನು ಉದ್ದೇಶಿಸಿ ಮಾತನಾಡಲು ಸಭಾಂಗಣ ಪ್ರವೇಶಿಸಿದಾಗ ಹಲವಾರು ರಾಜತಾಂತ್ರಿಕರು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಿಂದ ಹೊರನಡೆದರು. ಗಾಜಾದಲ್ಲಿ ತನ್ನ ಮಿಲಿಟರಿ ಕ್ರಮದಿಂದಾಗಿ ಇಸ್ರೇಲ್ ಜಾಗತಿಕವಾಗಿ ಟೀಕೆಗಳನ್ನು ಎದುರಿಸುತ್ತಿರುವಾಗ ಈ ವಾಕ್-ಔಟ್ ಪ್ರತಿಭಟನೆ ನಡೆಯಿತು. ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಯುದ್ಧ ಅಪರಾಧಗಳ ಆರೋಪ ಎದುರಿಸುತ್ತಿರುವ ನೆತನ್ಯಾಹು, ಇಸ್ರೇಲ್ ಗಾಜಾದಲ್ಲಿ "ಸಾಧ್ಯವಾದಷ್ಟು ಬೇಗ ತನ್ನ ಕೆಲಸವನ್ನು ಮುಗಿಸುತ್ತದೆ" ಎಂದು ಘೋಷಿಸಿದರು. ತಮ್ಮ ಭಾಷಣಕ್ಕೂ ಮುನ್ನ, ಪ್ಯಾಲೆಸ್ಟೀನಿಯನ್ನರಿಗೆ ತಮ್ಮ ಹೇಳಿಕೆಗಳನ್ನು ಪ್ರಸಾರ ಮಾಡಲು ಗಾಜಾ ಪಟ್ಟಿಯ ಸುತ್ತಲೂ ಲೌಡ್ ಸ್ಪೀಕರ್​​ಗಳನ್ನು ಇರಿಸಲು ಅವರು ಇಸ್ರೇಲ್ ಸೈನ್ಯಕ್ಕೆ ಆದೇಶಿಸಿದರು.

ನ್ಯೂಯಾರ್ಕ್, ಸೆಪ್ಟೆಂಬರ್ 26: ವಿಶ್ವಸಂಸ್ಥೆಯಲ್ಲಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು (Israel PM Netanyahu) ಅವರು ಭಾಷಣ ಶುರು ಮಾಡುತ್ತಿದ್ದಂತೆ ವಿಶ್ವಸಂಸ್ಥೆಯ ಪ್ರತಿನಿಧಿಗಳು ಸಾಮೂಹಿಕವಾಗಿ ಎದ್ದು ಹೊರನಡೆದಿದ್ದಾರೆ. ಇದರಿಂದ ಇಡೀ ಸಭಾಂಗಣ ಬಹುತೇಕ ಖಾಲಿಯಾಯಿತು. ಬೆಂಜಮಿನ್ ನೆತನ್ಯಾಹು ಖಾಲಿ ಕುರ್ಚಿಗಳಿಗೆ ಭಾಷಣ ಮಾಡಬೇಕಾಯಿತು. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಗಾಜಾದಲ್ಲಿ ನಡೆಸಿದ ಯುದ್ಧವನ್ನು ಪ್ರತಿಭಟಿಸಿ, ಅವರ ಭಾಷಣವನ್ನು ವಿಶ್ವಸಂಸ್ಥೆಯ ಹಲವು ಪ್ರತಿನಿಧಿಗಳು ಬಹಿಷ್ಕರಿಸಿದ್ದಾರೆ.

ಇಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅಧಿವೇಶನವನ್ನು ಉದ್ದೇಶಿಸಿ ಮಾತನಾಡಲು ಸಭಾಂಗಣ ಪ್ರವೇಶಿಸಿದಾಗ ಹಲವಾರು ರಾಜತಾಂತ್ರಿಕರು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಿಂದ ಹೊರನಡೆದರು. ಗಾಜಾದಲ್ಲಿ ತನ್ನ ಮಿಲಿಟರಿ ಕ್ರಮದಿಂದಾಗಿ ಇಸ್ರೇಲ್ ಜಾಗತಿಕವಾಗಿ ಟೀಕೆಗಳನ್ನು ಎದುರಿಸುತ್ತಿರುವಾಗ ಈ ವಾಕ್-ಔಟ್ ಪ್ರತಿಭಟನೆ ನಡೆಯಿತು. ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಯುದ್ಧ ಅಪರಾಧಗಳ ಆರೋಪ ಎದುರಿಸುತ್ತಿರುವ ನೆತನ್ಯಾಹು, ಇಸ್ರೇಲ್ ಗಾಜಾದಲ್ಲಿ “ಸಾಧ್ಯವಾದಷ್ಟು ಬೇಗ ತನ್ನ ಕೆಲಸವನ್ನು ಮುಗಿಸುತ್ತದೆ” ಎಂದು ಘೋಷಿಸಿದರು. ತಮ್ಮ ಭಾಷಣಕ್ಕೂ ಮುನ್ನ, ಪ್ಯಾಲೆಸ್ಟೀನಿಯನ್ನರಿಗೆ ತಮ್ಮ ಹೇಳಿಕೆಗಳನ್ನು ಪ್ರಸಾರ ಮಾಡಲು ಗಾಜಾ ಪಟ್ಟಿಯ ಸುತ್ತಲೂ ಲೌಡ್ ಸ್ಪೀಕರ್​​ಗಳನ್ನು ಇರಿಸಲು ಅವರು ಇಸ್ರೇಲ್ ಸೈನ್ಯಕ್ಕೆ ಆದೇಶಿಸಿದರು.

ನೆತನ್ಯಾಹು ಭಾಷಣದ ವೇಳೆ ಅರಬ್ ಮತ್ತು ಮುಸ್ಲಿಂ ರಾಷ್ಟ್ರಗಳ ಬಹುತೇಕ ಎಲ್ಲಾ ಪ್ರತಿನಿಧಿಗಳು ಹೊರನಡೆದರು. ಹಲವಾರು ಆಫ್ರಿಕನ್ ರಾಷ್ಟ್ರಗಳು ಮತ್ತು ಕೆಲವು ಯುರೋಪಿಯನ್ ರಾಜ್ಯಗಳ ಪ್ರತಿನಿಧಿಗಳು ಕೂಡ ಹೊರನಡೆದರು. ಇದರಿಂದ ನೆತನ್ಯಾಹು ಮುಜುಗರಕ್ಕೀಡಾದರು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Follow Us
Sushma Chakre

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More