ಕೇರಳದಿಂದ ಮಂಗಳೂರಿಗೆ ನೋ ಎಂಟ್ರಿ, ತಲಪಾಡಿ ಬಳಿ ಪೊಲೀಸರಿಂದ ತಡೆ

[lazy-load-videos-and-sticky-control id=”dTwEdLY1ctQ”]ಮಂಗಳೂರು: ಕೇರಳಿಗರು ಪ್ರತಿನಿತ್ಯ ಮಂಗಳೂರು ಪ್ರಯಾಣಿಸುವುದಕ್ಕೆ ಕೇರಳ ಸರ್ಕಾರ ನಿಷೇಧ ಹೊರಡಿಸಿರುವ ಹಿನ್ನೆಲೆಯಲ್ಲಿ ಕೇರಳದಿಂದ ಮಂಗಳೂರಿಗೆ ಆಗಮಿಸುತ್ತಿದ್ದ ಜನರನ್ನ ತಡೆ ಹಿಡಿಯಲಾಗಿದೆ. ಸರ್ಕಾರದ ಆದೇಶದ ಮಾಹಿತಿಯಿಲ್ಲದೇ ಬಂದ ನೂರಾರು ಜನರನ್ನು ಕರ್ನಾಟಕ-ಕೇರಳ ರಾಜ್ಯದ ಗಡಿಭಾಗ ತಲಪಾಡಿಯಲ್ಲಿ ತಡೆಯಲಾಗಿದೆ. ಉದ್ಯೋಗ ಮತ್ತು ವ್ಯಾಪಾರದ ಹಿನ್ನೆಲೆಯಲ್ಲಿ ದಿನದ ಪಾಸ್ ಪಡೆದು ನೂರಾರು ಕೇರಳಿಗರು ಮಂಗಳೂರಿಗೆ ಬಂದು ಹೋಗುತ್ತಿದ್ದರು. ದ.ಕ ಜಿಲ್ಲೆಯಲ್ಲಿ ಕೋವಿಡ್ ಪ್ರಕರಣ ಹೆಚ್ಚಳ ಹಿನ್ನೆಲೆಯಲ್ಲಿ ಕೇರಳ ಸರ್ಕಾರ ದಿನದ ಪಾಸ್ ರದ್ದು ಮಾಡಿದೆ. ಈ ಮಾಹಿತಿ ತಿಳಿಯದೆ […]

ಕೇರಳದಿಂದ ಮಂಗಳೂರಿಗೆ ನೋ ಎಂಟ್ರಿ, ತಲಪಾಡಿ ಬಳಿ ಪೊಲೀಸರಿಂದ ತಡೆ
ಆಯೇಷಾ ಬಾನು

Updated on: Jul 07, 2020 | 6:18 PM

[lazy-load-videos-and-sticky-control id=”dTwEdLY1ctQ”]ಮಂಗಳೂರು: ಕೇರಳಿಗರು ಪ್ರತಿನಿತ್ಯ ಮಂಗಳೂರು ಪ್ರಯಾಣಿಸುವುದಕ್ಕೆ ಕೇರಳ ಸರ್ಕಾರ ನಿಷೇಧ ಹೊರಡಿಸಿರುವ ಹಿನ್ನೆಲೆಯಲ್ಲಿ ಕೇರಳದಿಂದ ಮಂಗಳೂರಿಗೆ ಆಗಮಿಸುತ್ತಿದ್ದ ಜನರನ್ನ ತಡೆ ಹಿಡಿಯಲಾಗಿದೆ. ಸರ್ಕಾರದ ಆದೇಶದ ಮಾಹಿತಿಯಿಲ್ಲದೇ ಬಂದ ನೂರಾರು ಜನರನ್ನು ಕರ್ನಾಟಕ-ಕೇರಳ ರಾಜ್ಯದ ಗಡಿಭಾಗ ತಲಪಾಡಿಯಲ್ಲಿ ತಡೆಯಲಾಗಿದೆ.

ಉದ್ಯೋಗ ಮತ್ತು ವ್ಯಾಪಾರದ ಹಿನ್ನೆಲೆಯಲ್ಲಿ ದಿನದ ಪಾಸ್ ಪಡೆದು ನೂರಾರು ಕೇರಳಿಗರು ಮಂಗಳೂರಿಗೆ ಬಂದು ಹೋಗುತ್ತಿದ್ದರು. ದ.ಕ ಜಿಲ್ಲೆಯಲ್ಲಿ ಕೋವಿಡ್ ಪ್ರಕರಣ ಹೆಚ್ಚಳ ಹಿನ್ನೆಲೆಯಲ್ಲಿ ಕೇರಳ ಸರ್ಕಾರ ದಿನದ ಪಾಸ್ ರದ್ದು ಮಾಡಿದೆ. ಈ ಮಾಹಿತಿ ತಿಳಿಯದೆ ನೂರಾರು ಜನರು ಕೇರಳದ ಕಾಸರಗೋಡು, ಮಂಜೇಶ್ವರ ಭಾಗದಿಂದ ಆಗಮಿಸಿದ್ದಾರೆ. ಹೀಗಾಗಿ ಕೇರಳ ಪೊಲೀಸರು ಅವರನ್ನು ತಲಪಾಡಿ ಬಳಿ ತಡೆದಿದ್ದಾರೆ. ಈ ಹಿನ್ನೆಲೆಯಲ್ಲಿ ರೊಚ್ಚಿಗೆದ್ದ ಕೆಲ ಕೇರಳಿಗರು ಪೊಲೀಸರ ಜೊತೆ ವಾಗ್ವಾದಕ್ಕಿಳಿದಿದ್ದಾರೆ. ಇನ್ನೂ ಕೆಲ ಪ್ರಯಾಣಿಕರು ತಲಪಾಡಿ ಗಡಿಯಲ್ಲಿ ಅಸಹಾಯಕರಂತೆ ನಿಂತಿದ್ದಾರೆ.

Published On - 12:21 pm, Tue, 7 July 20

Ayesha Banu

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

Follow Us