AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆ್ಯಂಬುಲೆನ್ಸ್ ಸಮಸ್ಯೆಗೆ ಕೊನೆಗೂ ಮುಕ್ತಿ ಹಾಡಿದ BBMP

[lazy-load-videos-and-sticky-control id=”JLbT5OmGMWo”]ಬೆಂಗಳೂರು: ಈ ವಾರದಲ್ಲಿ ಸರ್ಕಾರ ಕೊರೊನಾ ವಿರುದ್ಧದ ಸಮರದಲ್ಲಿ ಒಂದಷ್ಟು ಖಡಕ್ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ. ಕೊರೊನಾ ಸೋಂಕಿತರು ಬೀದಿ ಹೆಣಗಳಾಗುವುದನ್ನು ತಪ್ಪಿಸಲು ಸರ್ಕಾರ ಆಸ್ಪತ್ರೆಗಳಿಗೆ ಚಾಟಿ ಏಟು ಬೀಸಿದೆ. ಯಾವುದೇ ಸೋಂಕಿತ ಅಥವಾ ಮಾಮೂಲಿ ರೋಗಿಗೆ ಚಿಕಿತ್ಸೆ ನಿರಾಕರಿಸುವಂತಿಲ್ಲ ಎಂದು ಕೋವಿಡ್ ಉಸ್ತುವಾರಿ ಸಚಿವ ಆರ್. ಅಶೋಕ್ ಘರ್ಜಿಸಿದ್ದಾರೆ.  ಈ ಮಧ್ಯೆ ಬಿಬಿಎಂಪಿ ಸಹ ಒಂದಷ್ಟು ಬಿಗಿ ಕ್ರಮಗಳನ್ನು ಕೈ ಗೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ಪಾಲಿಕೆ ವ್ಯಾಪ್ತಿಯ 8 ವಲಯಗಳಿಗೆ ತಲಾ ಒಂದಿಷ್ಟು ಆ್ಯಂಬುಲೆನ್ಸ್ […]

ಆ್ಯಂಬುಲೆನ್ಸ್ ಸಮಸ್ಯೆಗೆ ಕೊನೆಗೂ ಮುಕ್ತಿ ಹಾಡಿದ BBMP
ಆಯೇಷಾ ಬಾನು
|

Updated on:Jul 07, 2020 | 6:12 PM

Share

[lazy-load-videos-and-sticky-control id=”JLbT5OmGMWo”]ಬೆಂಗಳೂರು: ಈ ವಾರದಲ್ಲಿ ಸರ್ಕಾರ ಕೊರೊನಾ ವಿರುದ್ಧದ ಸಮರದಲ್ಲಿ ಒಂದಷ್ಟು ಖಡಕ್ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ. ಕೊರೊನಾ ಸೋಂಕಿತರು ಬೀದಿ ಹೆಣಗಳಾಗುವುದನ್ನು ತಪ್ಪಿಸಲು ಸರ್ಕಾರ ಆಸ್ಪತ್ರೆಗಳಿಗೆ ಚಾಟಿ ಏಟು ಬೀಸಿದೆ. ಯಾವುದೇ ಸೋಂಕಿತ ಅಥವಾ ಮಾಮೂಲಿ ರೋಗಿಗೆ ಚಿಕಿತ್ಸೆ ನಿರಾಕರಿಸುವಂತಿಲ್ಲ ಎಂದು ಕೋವಿಡ್ ಉಸ್ತುವಾರಿ ಸಚಿವ ಆರ್. ಅಶೋಕ್ ಘರ್ಜಿಸಿದ್ದಾರೆ.

 ಈ ಮಧ್ಯೆ ಬಿಬಿಎಂಪಿ ಸಹ ಒಂದಷ್ಟು ಬಿಗಿ ಕ್ರಮಗಳನ್ನು ಕೈ ಗೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ಪಾಲಿಕೆ ವ್ಯಾಪ್ತಿಯ 8 ವಲಯಗಳಿಗೆ ತಲಾ ಒಂದಿಷ್ಟು ಆ್ಯಂಬುಲೆನ್ಸ್ ಮತ್ತು ಟೆಂಪೊ ಟ್ರಾವೆಲರ್​ಗಳನ್ನು ಹಂಚಿಕೆ ಮಾಡಿ ರೋಗಿಗಳನ್ನು ಕರೆದೊಯ್ಯಲು ಸೂಕ್ತ ವ್ಯವಸ್ಥೆ ಮಾಡಿದೆ. ವಿವಿರ ಇಂತಿದೆ.

ಕೊರೊನಾ ರೋಗಿಗಳನ್ನ ಶಿಫ್ಟ್ ಮಾಡಲು ಟೆಂಪೊ ಟ್ರಾವೆಲರ್ ಬಳಕೆ ಮಾಡಲು ಬಿಬಿಎಂಪಿ ನಿರ್ಧರಿಸಿದೆ. ಒಟ್ಟು‌ 71 ಆ್ಯಂಬುಲೆನ್ಸ್, 179 ಟೆಂಪೊ ಟ್ರಾವೆಲರ್​ಗಳನ್ನು ಇದಕ್ಕಾಗಿಯೇ ನಿಯೋಜಿಸಲಾಗಿದೆ. ಸೋಂಕಿತರನ್ನು ಶಿಫ್ಟ್ ಮಾಡಲು ಟೆಂಪೊ ಟ್ರಾವೆಲರ್, ಆ್ಯಂಬುಲೆನ್ಸ್ ಸೇರಿ ಒಟ್ಟು 250 ವಾಹನಗಳನ್ನು ಬಿಬಿಎಂಪಿ ನಿಯೋಜನೆ ಮಾಡಿದೆ.

ಬೆಂಗಳೂರು ದಕ್ಷಿಣ ವಲಯದಲ್ಲಿ 20 ಆ್ಯಂಬುಲೆನ್ಸ್ ಮತ್ತು 47 ಟೆಂಪೊ ಟ್ರಾವೆಲರ್​ಗಳು ಕಾರ್ಯ ನಿರ್ವಹಿಸಲಿವೆ. ಬೆಂಗಳೂರು ಪಶ್ಚಿಮ ವಲಯದಲ್ಲಿ 10 ಆ್ಯಂಬುಲೆನ್ಸ್ ಮತ್ತು 54 ಟೆಂಪೊ ಟ್ರಾವೆಲರ್ಸ್.  ಆರ್.ಆರ್ ನಗರ ವಲಯದಲ್ಲಿ 10 ಆ್ಯಂಬುಲೆನ್ಸ್, 10 ಟಿಟಿ ಇರಲಿವೆ. ಪೂರ್ವ ವಲಯದಲ್ಲಿ 6ಆ್ಯಂಬುಲೆನ್ಸ್ ಮತ್ತು 33 ಟಿಟಿ ಬಳಕೆ. ದಾಸರಹಳ್ಳಿ 5 ಆ್ಯಂಬುಲೆನ್ಸ್, 7 ಟಿಟಿ. ಯಲಹಂಕದಲ್ಲಿ 9 ಆ್ಯಂಬುಲೆನ್ಸ್ ಮತ್ತು 6 ಟಿಟಿ ಕಾರ್ಯ ನಿರ್ವಹಿಸಲಿವೆ. ಮಹದೇವ ಪುರದಲ್ಲಿ 5 ಆ್ಯಂಬುಲೆನ್ಸ್ , 11 ಟಿಟಿಗಳ ನಿಯೋಜನೆ. ಬೊಮ್ಮನಹಳ್ಳಿ 6 ಆ್ಯಂಬುಲೆನ್ಸ್ ಮತ್ತು 11 ಟಿಟಿಗಳು. ಸೋಂಕಿತರು ಹೆಚ್ಚಿರುವ ವಲಯಗಳಿಗೆ ಹೆಚ್ಚು ಆ್ಯಂಬುಲೆನ್ಸ್ ಮತ್ತು ಟೆಂಪೊ ಟ್ರಾವೆಲರ್ ನಿಯೋಜನೆ ಮಾಡಲಾಗಿದೆ.

Published On - 11:11 am, Tue, 7 July 20

ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಯಾವತ್ತೋ ಸಿಎಂ ಆಗಬೇಕಿತ್ತು: ಹೆಚ್​ಡಿಕೆ
ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಯಾವತ್ತೋ ಸಿಎಂ ಆಗಬೇಕಿತ್ತು: ಹೆಚ್​ಡಿಕೆ
ಮಗನಿಗೆ ದುಬಾರಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದ ಹಾರ್ದಿಕ್ ಪಾಂಡ್ಯ
ಮಗನಿಗೆ ದುಬಾರಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದ ಹಾರ್ದಿಕ್ ಪಾಂಡ್ಯ
ಹನುಮನ ಆಶೀರ್ವಾದದಿಂದಲೇ ರಿಷಬ್​​ಗೆ ಪಾತ್ರ ಸಿಕ್ಕಿದೆ ಎಂದ ಪತ್ನಿ: ವಿಡಿಯೋ
ಹನುಮನ ಆಶೀರ್ವಾದದಿಂದಲೇ ರಿಷಬ್​​ಗೆ ಪಾತ್ರ ಸಿಕ್ಕಿದೆ ಎಂದ ಪತ್ನಿ: ವಿಡಿಯೋ
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್
ಆ್ಯಂಬುಲೆನ್ಸ್ ಅಡ್ಡಗಟ್ಟಿ ಕಾರು ಚಾಲಕನ ರಸ್ತೆ ರಂಪಾಟ
ಆ್ಯಂಬುಲೆನ್ಸ್ ಅಡ್ಡಗಟ್ಟಿ ಕಾರು ಚಾಲಕನ ರಸ್ತೆ ರಂಪಾಟ
‘ಜೈ ಹನುಮಾನ’ ಚಿತ್ರದ ಮುಹೂರ್ತ: ಅಂಜನಾದ್ರಿ ಬೆಟ್ಟಕ್ಕೆ ಬಂದ ರಿಷಬ್ ಶೆಟ್ಟಿ
‘ಜೈ ಹನುಮಾನ’ ಚಿತ್ರದ ಮುಹೂರ್ತ: ಅಂಜನಾದ್ರಿ ಬೆಟ್ಟಕ್ಕೆ ಬಂದ ರಿಷಬ್ ಶೆಟ್ಟಿ