ಗಾಯಗೊಂಡ ಕಾಗೆಯನ್ನು ಮನೆಯಲ್ಲಿಟ್ಟುಕೊಂಡು ಆರೈಕೆ ಮಾಡುತ್ತಿರುವ ಕೊಪ್ಳಳ ಶ್ರೀನಿವಾಸ ರೆಡ್ಡಿಯ ಮಾನವೀಯತೆ ಅನನ್ಯ

Updated on: Nov 29, 2023 | 1:41 PM

ಕಾಗೆಯ ಕಾಲುಗಳಿಗೆ ಪೆಟ್ಟಾಗಿದ್ದು ಸಂಪೂರ್ಣವಾಗಿ ಗುಣ ಹೊಂದಿದ ಬಳಿಕ ರೆಡ್ಡಿ ಹಾರಿಬಿಡಲಿದ್ದಾರಂತೆ. ಕಾಗೆಗೆ ಸಮಯಕ್ಕೆ ಸರಿಯಾಗಿ ಊಟ-ನೀರು ನೀಡಿ ಆರೈಕೆ ಮಾಡುತ್ತಿರುವ ಅವರು ನಮ್ಮೆಲ್ಲರಿಗೆ ಮಾದರಿಯಾಗಿ ಗೋಚರಿಸುತ್ತಾರೆ. ಅವರ ಪಕ್ಷಿಪ್ರೇಮ, ಮಾನವೀಯತೆ ಮತ್ತು ದಯಾಳುತನಕ್ಕೆ ಎಣೆಯಿಲ್ಲ.

ಕೊಪ್ಪಳ: ಈ ವ್ಯಕ್ತಿಯನ್ನು ನೋಡಿ, ಇವರ ಹೆಸರು ಶ್ರೀನಿವಾಸ ರೆಡ್ಡಿ (Srinivas Reddy), ಜಿಲ್ಲೆಯ ಕಾರಟಗಿ (Karatagi) ತಾಲ್ಲೂಕಿನ ಮರ್ಲಾನ್ ಹಳ್ಳಿಯ ಹೊರವಲಯಲ್ಲಿ ರಾಜ್ಯ ಹೆದ್ದಾರಿ ಪಕ್ಕ ಒಂದು ಅಂಗಡಿ ಇಟ್ಟುಕೊಡು ಬದುಕು ನಡೆಸುತ್ತಿದ್ದಾರೆ. ಇವರು ಆರೈಕೆ ಮಾಡಿ ಒಂದು ಚಿಕ್ಕಮಗುವಿನಂತೆ ಪೋಷಿಸುತ್ತಿರೋದು ಒಂದು ಕಾಗೆಯನ್ನು (crow)! ಕಾಗೆಯನ್ನು ನಾವೆಲ್ಲ ಅಪಶಕುನ ಎಂದು ಭಾವಿಸುತ್ತೇವೆ. ಆದರೆ, ರೆಡ್ಡಿಯವರ ಮಾನವೀಯತೆ, ಅಂತಕರಣಗಳು ನಮ್ಮ ಪುರಾತನ ಭಾವನೆಗಿಂತ ಉನ್ನತವಾದವು. ತಮ್ಮ ಅಂಗಡಿಯ ಮುಂದೆ ಬೈಕೊಂದಕ್ಕೆ ಅಪ್ಪಳಿಸಿ ಗಾಯಗೊಂಡು ಬಿದ್ದಿದ್ದ ಈ ಕಾಗೆಯನ್ನು ಅವರು ಕೂಡಲೇ ಪಶುವೈದ್ಯಶಾಲೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿ ಮನೆಯಲ್ಲಿಟ್ಟುಕೊಂಡು ಸಾಕುತ್ತಿದ್ದಾರೆ. ಅದರ ಕಾಲುಗಳಿಗೆ ಪೆಟ್ಟಾಗಿದ್ದು ಸಂಪೂರ್ಣವಾಗಿ ಗುಣ ಹೊಂದಿದ ಬಳಿಕ ಹಾರಿಬಿಡಲಿದ್ದಾರಂತೆ. ಕಾಗೆಗೆ ಸಮಯಕ್ಕೆ ಸರಿಯಾಗಿ ಊಟ-ನೀರು ನೀಡಿ ಆರೈಕೆ ಮಾಡುತ್ತಿರುವ ರೆಡ್ಡಿ ನಮ್ಮೆಲ್ಲರಿಗೆ ಮಾದರಿಯಾಗಿ ಗೋಚರಿಸುತ್ತಾರೆ. ಅವರ ಪಕ್ಷಿಪ್ರೇಮ, ಮಾನವೀಯತೆ ಮತ್ತು ದಯಾಳುತನಕ್ಕೆ ನಮ್ಮದೊಂದು ಸಲಾಂ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

Read More