Video: ಕೊಳ್ಳೇಗಾಲದಲ್ಲಿದ್ದಾರೆ ಆಯಿಲ್ ಮ್ಯಾನ್, 29 ವರ್ಷಗಳಿಂದ ಇಂಜಿನ್ ಆಯಿಲ್ ಕುಡಿದೇ ಬದುಕುತ್ತಿರುವ ವ್ಯಕ್ತಿ

Edited By:

Updated on: Aug 30, 2025 | 9:32 AM

ವಲ, ಚಹಾ, ಕಾಫಿ ಕುಡಿದುಕೊಂಡೇ ಬದುಕಿರುವವರನ್ನು ನೋಡಿದ್ದೇವೆ, ಇನ್ಯಾರೋ ಕೇವಲ ತರಕಾರಿಗಳನ್ನೇ ತಿಂದು ಬಂದುಕುವವರನ್ನು ಕಂಡಿದ್ದೇವೆ. ಈಗ ಕೇವಲ ಇಂಜಿನ್ ಆಯಿಲ್ ಕುಡಿದು ಬದುಕುತ್ತಿರುವ ವ್ಯಕ್ತಿ ಕೂಡ ನಮ್ಮ ಕಣ್ಣಮುಂದಿದ್ದಾರೆ. ಕೊಳ್ಳೇಗಾಲದಲ್ಲಿ ಕುಮಾರ್ ಎಂಬುವವರು ಕೇವಲ ಇಂಜಿನ್ ಆಯಿಲ್ ಕುಡಿದು ಕಳೆದ 29 ವರ್ಷಗಳಿಂದ ಬದುಕುತ್ತಿದ್ದಾರೆ.ಬೈಕ್ ಕಾರಿಗೆ ಬಳಕೆಯಾದ ಇಂಜಿನ್ ಆಯಿಲ್ ಈತನ ದಿನ ನಿತ್ಯದ ಊಟ ಉಪಹಾರವಾಗಿದೆ. ವಿಜ್ಞಾನಕ್ಕೆ ಸವಾಲಾಗಿರುವ ಮೈಸೂರು ಮೂಲದ ಕುಮಾರ್ ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ವಾಸವಾಗಿರುವ ಕುಮಾರ್ ಮಾಲೆ ಧಾರಣೆ ಮಾಡಿ ಕೊಳ್ಳೇಗಾಲದಿಂದ ಶಬರಿ ಮಲೆಗೆ ಪಾದಯಾತ್ರೆ ಕೈಗೊಂಡಿದ್ದಾರೆ.

ಚಾಮರಾಜನಗರ, ಆಗಸ್ಟ್​ 30: ಕೇವಲ, ಚಹಾ, ಕಾಫಿ ಕುಡಿದುಕೊಂಡೇ ಬದುಕಿರುವವರನ್ನು ನೋಡಿದ್ದೇವೆ, ಇನ್ಯಾರೋ ಕೇವಲ ತರಕಾರಿಗಳನ್ನೇ ತಿಂದು ಬಂದುಕುವವರನ್ನು ಕಂಡಿದ್ದೇವೆ. ಈಗ ಕೇವಲ ಇಂಜಿನ್ ಆಯಿಲ್ ಕುಡಿದು ಬದುಕುತ್ತಿರುವ ವ್ಯಕ್ತಿ ಕೂಡ ನಮ್ಮ ಕಣ್ಣಮುಂದಿದ್ದಾರೆ. ಕೊಳ್ಳೇಗಾಲದಲ್ಲಿ ಕುಮಾರ್ ಎಂಬುವವರು ಕೇವಲ ಇಂಜಿನ್ ಆಯಿಲ್ ಕುಡಿದು ಕಳೆದ 29 ವರ್ಷಗಳಿಂದ ಬದುಕುತ್ತಿದ್ದಾರೆ.ಬೈಕ್ ಕಾರಿಗೆ ಬಳಕೆಯಾದ ಇಂಜಿನ್ ಆಯಿಲ್ ಈತನ ದಿನ ನಿತ್ಯದ ಊಟ ಉಪಹಾರವಾಗಿದೆ. ವಿಜ್ಞಾನಕ್ಕೆ ಸವಾಲಾಗಿರುವ ಮೈಸೂರು ಮೂಲದ ಕುಮಾರ್ ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ವಾಸವಾಗಿರುವ ಕುಮಾರ್ ಮಾಲೆ ಧಾರಣೆ ಮಾಡಿ ಕೊಳ್ಳೇಗಾಲದಿಂದ ಶಬರಿ ಮಲೆಗೆ ಪಾದಯಾತ್ರೆ ಕೈಗೊಂಡಿದ್ದಾರೆ. ಕುಮಾರ್ ಹಣವಿಲ್ಲದ ಕಾರಣ ನಡೆದುಕೊಂಡೆ ಶಬರಿಮಲೆಗೆ ತೆರಳುತ್ತಿದ್ದು, ಕೊಳ್ಳೇಗಾಲದ ಜನ ಇಂಜಿನ್ ಆಯಿಲ್ ಕುಡಿದಿದ್ದು ನೋಡಿ ನಿಬ್ಬೆರಗಾಗಿದ್ದಾರೆ.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
Suraj Prasad SN

ಸೂರಜ್ ಪ್ರಸಾದ್ ಎಸ್.ಎನ್ ಆದ ನಾನು ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ. ಬೆಳೆದಿದ್ದು ದಾವಣಗರೆ ಜಿಲ್ಲೆ ನ್ಯಾಮತಿ ತಾಲೂಕಿನಲ್ಲಿ. ಶಿವಮೊಗ್ಗದ ಸಹ್ಯಾದ್ರಿ ಕಾಲೇಜ್ ನಲ್ಲಿ ಪತ್ರಿಕೋದ್ಯಮದಲ್ಲಿ ಪದವಿಪೂರ್ವ ಶಿಕ್ಷಣ ಪಡೆದಿದ್ದು 2014ರಿಂದ ನನ್ನ ಎಲೆಕ್ಟ್ರಾನಿಕ್ ಮಾದ್ಯಮದ ವೃತ್ತಿ ಜೀವನವನ್ನ ಬೆಂಗಳೂರಿನಲ್ಲಿ ಕ್ರೈಂ ಬೀಟ್ ವರದಿಗಾರನಾಗಿ ಆರಂಭಿಸಿದ್ದು ಬೆಂಗಳೂರಿನಲ್ಲಿ 8 ವರ್ಷಗಳ ಕ್ರೈಂ ವರದಿಗಾರನಾಗಿ ಸೇವೆ ಸಲ್ಲಿಸಿ. ನಾಲ್ಕು ಸಂಸ್ಥೆಯಲ್ಲಿ ಕ್ರೈಂ ರಿಪೋರ್ಟರ್ ಹಾಗೂ ಕ್ರೈಂ ಇನ್ವೆಸ್ಟಿಗೇಟಿವ್ ವರದಿಗಾರನಾಗಿ ಹಾಗೂ ಸ್ಟಿಂಗ್ ಅಪರೇಷನ್ ಗಳನ್ನ ಮಾಡಿದ್ದೇನೆ. ಗೌರಿ ಲಂಕೇಶ್ ಕೊಲೆ ಕೇಸನ್ನ ರಾಜ್ಯದಲ್ಲೇ ಮೊದಲು ಬ್ರೇಕ್ ಮಾಡಿ ಈ ಹಿಂದಿನ ಸಂಸ್ಥೆಯಿಂದ ಪ್ರಶಂಸೆ ಪಡೆದಿರುತ್ನೇನೆ2019 ರಲ್ಲಿ ಪಿಎಸ್ಐ ಅಕ್ರಮದ ಸ್ಟಿಂಗ್ ಆಪರೇಷನ್ ಹಾಗೂ ಬೆಂಗಳೂರು ಸಿಂಥಟಿಕ್ ಡ್ರಗ್ ಮಾಫಿಯಾದ ಸ್ಟಿಂಗ್ ಆಪರೇಷನ್ ಮಾಡಿದ್ದು. ಕಳೆದ 10 ವರ್ಷಗಳಿಂದ ಸಕ್ರೀಯವಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಟಿವಿ9 ಸಂಸ್ಥೆಗೆ ಮಂಡ್ಯ ಜಿಲ್ಲಾ ವರದಿಗಾರನಾಗಿ ಕೆಲಸ ಮಾಡಿ ಬಳಿಕ ಚಾಮರಾಜನಗರಕ್ಕೆ ವರ್ಗಾವಣೆಯಾಗಿ ಈಗ ಪ್ರಸ್ಥುತ ಚಾಮರಾಜನಗರ ಜಿಲ್ಲಾ ವರದಿಗಾರನಾಗಿ ಕೆಲಸ ಮಾಡುತ್ತಿದ್ದೇನೆ. ಹವ್ಯಾಸ ಅಡಿಗೆ ಮಾಡುವುದು, ಕ್ರಿಕೆಟ್ ಆಡುವುದು ಕ್ರೈಂ ಇನ್ವೆಷ್ಟಿಗೇಷನ್ ನಾವೆಲ್ ಗಳನ್ನ ಓದುವುದು.

Read More