AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಹುಗ್ರಸ್ತ ಚಂದ್ರಗ್ರಹಣ, ಯಾವ ದಿನದಂದು ಗಣೇಶ ವಿಸರ್ಜನೆ ಮಾಡಬೇಕು ತಿಳಿಯಿರಿ

ರಾಹುಗ್ರಸ್ತ ಚಂದ್ರಗ್ರಹಣ, ಯಾವ ದಿನದಂದು ಗಣೇಶ ವಿಸರ್ಜನೆ ಮಾಡಬೇಕು ತಿಳಿಯಿರಿ

ಗಂಗಾಧರ​ ಬ. ಸಾಬೋಜಿ
|

Updated on:Sep 01, 2025 | 7:15 AM

Share

ದೈನಂದಿನ ಭಕ್ತಿ ಕಾರ್ಯಕ್ರಮದಲ್ಲಿ ಡಾ. ಬಸವರಾಜ್ ಗುರೂಜಿ ಅವರು ಗಣೇಶ ವಿಸರ್ಜನೆಯ ಸೂಕ್ತ ಸಮಯ ಮತ್ತು ವಿಧಿವಿಧಾನಗಳ ಬಗ್ಗೆ ಮಾರ್ಗದರ್ಶನ ನೀಡಿದ್ದಾರೆ. ಗಣೇಶನನ್ನು ಒಂದೂವರೆ, ಮೂರು, ಐದು ಅಥವಾ ಏಳು ದಿನಗಳವರೆಗೆ ಇಟ್ಟುಕೊಂಡು ವಿಸರ್ಜನೆ ಮಾಡುವುದು ಒಳ್ಳೆಯದು. ಸಂಪೂರ್ಣ ವಿಡಿಯೋ ನೋಡಿ.

ಬೆಂಗಳೂರು, ಸೆಪ್ಟೆಂಬರ್​ 01: ಡಾ. ಬಸವರಾಜ್ ಗುರೂಜಿ ಅವರು ಗಣೇಶ ವಿಸರ್ಜನೆಯ ಬಗ್ಗೆ ಉಪಯುಕ್ತ ಮಾಹಿತಿಯನ್ನು ನೀಡಿದ್ದಾರೆ. ಗಣೇಶ ಚತುರ್ಥಿಯ ನಂತರ, ಸಾಮಾನ್ಯವಾಗಿ 10 ದಿನಗಳ ನಂತರ ಅನಂತ ಚತುರ್ದಶಿಯ ದಿನ ವಿಸರ್ಜನೆ ಮಾಡುವುದು ವಾಡಿಕೆ. ಆದರೆ ಈ ಬಾರಿ ರಾಹುಗ್ರಸ್ತ ಚಂದ್ರಗ್ರಹಣದಿಂದಾಗಿ ಈ ನಿಯಮ ಪಾಲಿಸಲು ಸಾಧ್ಯವಾಗದಿರಬಹುದು ಎಂದು ಅವರು ತಿಳಿಸಿದ್ದಾರೆ. ಆದ್ದರಿಂದ, ಭಕ್ತರು ಒಂದೂವರೆ, ಮೂರು, ಐದು ಅಥವಾ ಏಳು ದಿನಗಳ ನಂತರ ಗಣೇಶನನ್ನು ಗೌರವಪೂರ್ವಕವಾಗಿ ವಿಸರ್ಜನೆ ಮಾಡಬಹುದು ಎಂದು ತಿಳಿಸಿಕೊಟ್ಟಿದ್ದಾರೆ.

 

Published on: Sep 01, 2025 07:08 AM